ಬೆತ್ತಲೆ ಕಿರೀಟ

ಹಗಲು ಅಂಬಾರಿಯ ಮೇಲೆ
ಮೆರವಣಿಗೆ ಹೊರಟಿತ್ತು ಬೀದಿಯಲಿ
ಹೆಗಲು ಕೊಟ್ಟವರ ಎದೆಯ ಮೇಲೆ
ಬಹುಪರಾಕು ಬರೆದಿತ್ತು ನೆತ್ತರಲ್ಲಿ.

ದಾರಿ ಬಿಡಿರೊ ಅಣ್ಣ ದಾರಿ ಬಿಡಿರೊ
ಹಗಲು ರಾಜನಿಗೆ ದಾರಿ ಬಿಡಿರೊ
ಬಾಯಿ ಬಿಡಿರೊ ಅಣ್ಣ ಬಾಯಿ ಬಿಡಿರೊ
ನಗಲು ನೀವೆಲ್ಲ ತೆರಿಗೆ ಕೊಡಿರೊ.

ಇಲ್ಲಿ ಬೀದಿಗಳೆಲ್ಲ ಬೆವರ ಬಂದೀಖಾನೆ
ಹಗಲು ರಾಜನಿಗೆ ಬೆತ್ತಲೆ ಕಿರೀಟ
ಎತ್ತ ನೋಡಿದರತ್ತ ಚಿತ್ತಾದ ಬದುಕು
ಬಯಲು ಬೆಳಕಿಗೆ ಇಲ್ಲಿ ಕತ್ತಲೆ ಕಾಟ.

ಕದ್ದು ಕೂತಿರುವ ಕತ್ತಲ ತೋಳ
ಹಾರಿ ಬಂದೀತು ಹೆಗಲ ಮೇಲೆ
ಜಿದ್ದು ಜೀವನವಾಗಿ ಸ್ಪರ್ಧೆ ಹುಟ್ಟಿದೆ ಇಲ್ಲಿ
ನೆಗೆದು ಕೂತೀತು ಹೆಗಲ ಮೇಲೆ.

ಹಗಲ ಹಾದರದಲ್ಲಿ ಹುಟ್ಟಿಬಂದವರ
ಕತ್ತಲಿನ ಕಾಮಕ್ಕೆ ತುತ್ತಾದ ಬಾಂಧವರೆ
ಸುಟ್ಟು ಕರುಕಾದ ಹೊಟ್ಟೆ ಹೊತ್ತವರೆಲ್ಲ
ಒಂದಾಗಿ ಬದುಕುವುದೇ ಬೇವು ಬೆಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಂದಿನ ಮಕ್ಕಳೇ ಮುಂದಿನ ಜನಾಂಗ
Next post ಬದುಕ ಬೆಳವಣಿಗೆಯ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys