ಬೆತ್ತಲೆ ಕಿರೀಟ

ಹಗಲು ಅಂಬಾರಿಯ ಮೇಲೆ
ಮೆರವಣಿಗೆ ಹೊರಟಿತ್ತು ಬೀದಿಯಲಿ
ಹೆಗಲು ಕೊಟ್ಟವರ ಎದೆಯ ಮೇಲೆ
ಬಹುಪರಾಕು ಬರೆದಿತ್ತು ನೆತ್ತರಲ್ಲಿ.

ದಾರಿ ಬಿಡಿರೊ ಅಣ್ಣ ದಾರಿ ಬಿಡಿರೊ
ಹಗಲು ರಾಜನಿಗೆ ದಾರಿ ಬಿಡಿರೊ
ಬಾಯಿ ಬಿಡಿರೊ ಅಣ್ಣ ಬಾಯಿ ಬಿಡಿರೊ
ನಗಲು ನೀವೆಲ್ಲ ತೆರಿಗೆ ಕೊಡಿರೊ.

ಇಲ್ಲಿ ಬೀದಿಗಳೆಲ್ಲ ಬೆವರ ಬಂದೀಖಾನೆ
ಹಗಲು ರಾಜನಿಗೆ ಬೆತ್ತಲೆ ಕಿರೀಟ
ಎತ್ತ ನೋಡಿದರತ್ತ ಚಿತ್ತಾದ ಬದುಕು
ಬಯಲು ಬೆಳಕಿಗೆ ಇಲ್ಲಿ ಕತ್ತಲೆ ಕಾಟ.

ಕದ್ದು ಕೂತಿರುವ ಕತ್ತಲ ತೋಳ
ಹಾರಿ ಬಂದೀತು ಹೆಗಲ ಮೇಲೆ
ಜಿದ್ದು ಜೀವನವಾಗಿ ಸ್ಪರ್ಧೆ ಹುಟ್ಟಿದೆ ಇಲ್ಲಿ
ನೆಗೆದು ಕೂತೀತು ಹೆಗಲ ಮೇಲೆ.

ಹಗಲ ಹಾದರದಲ್ಲಿ ಹುಟ್ಟಿಬಂದವರ
ಕತ್ತಲಿನ ಕಾಮಕ್ಕೆ ತುತ್ತಾದ ಬಾಂಧವರೆ
ಸುಟ್ಟು ಕರುಕಾದ ಹೊಟ್ಟೆ ಹೊತ್ತವರೆಲ್ಲ
ಒಂದಾಗಿ ಬದುಕುವುದೇ ಬೇವು ಬೆಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಂದಿನ ಮಕ್ಕಳೇ ಮುಂದಿನ ಜನಾಂಗ
Next post ಬದುಕ ಬೆಳವಣಿಗೆಯ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…