ಇಂದಿನ ಮಕ್ಕಳೇ ಮುಂದಿನ ಜನಾಂಗ

ಇಂದಿನ ಮಕ್ಕಳೇ ಮುಂದಿನ ಜನಾಂಗ

ಇವತ್ತು ನವೆಂಬರ್ ೧೪ ಮಕ್ಕಳ ದಿನ. ಸುಮಾರು ಐದು ದಶಕಗಳಿಂದ ಮಕ್ಕಳ ನೆಚ್ಚಿನ ಚಾಚಾ ನೆಹರೂ ಅವರ ಜನ್ಮ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುತ್ತಾ ಬರುತ್ತಿದ್ದೇವೆ.

ನಾವು ಚಿಕ್ಕವರಿರುವಾಗ ಮಕ್ಕಳ ದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದೆವು. ಶಾಲೆಯಲ್ಲಿ ಹಬ್ಬದ ವಾತಾವರಣ. ಚಾಚಾ ನೆಹರೂ ಅವರ ಬಗ್ಗೆ ಭಾಷಣಗಳು; ವಿವಿಧ ಸ್ಪರ್ಧೆಗಳು; ಮನರಂಜನೆಗಳು; ಬಹುಮಾನಗಳು ಎಲ್ಲವೂ ಇರುತ್ತಿದ್ದುವು. ಇವತ್ತು ಮಕ್ಕಳ ದಿನ ಅಂದರೆ, ಪಾಶ್ಚಾತ್ತೀಕರಣದ ಮೆರುಗಿನಿಂದ ಆಚರಿಸುತ್ತಿರುವ ಪ್ರೇಮಿಗಳ ದಿನ, ಅಮ್ಮನ ದಿನ, ಅಪ್ಪನ ದಿನ, ವೃದ್ಧರ ದಿನ, ಮಹಿಳೆಯರ ದಿನ, ಕಾರ್ಮಿಕರ ದಿನ ಎನ್ನುವ ದಿನಗಳಷ್ಟೇ ನೀರಸವಾಗಿ ಕಳೆದು ಹೋಗುತ್ತಿರುವುದು ನೋವಿನ ಸಂಗತಿ. ಯಾವ ಶಾಲೆಯಲ್ಲೂ ಆಚರಣೆ ಇದ್ದಹಾಗಿಲ್ಲ.

ಈಗಿನ ಮಕ್ಕಳಿಗೆ ‘ಚಾಚಾ ನೆಹರೂ’ ಅನ್ನುವುದೇ ಗೊತ್ತಾಗದ ಸಂಗತಿ, ಜವಾಹರಲಾಲ ನೆಹರೂ ಅಂದರೆ ಮೊದಲ ಪ್ರಧಾನಿ ಎನ್ನುವುದಷ್ಟೇ ಗೊತ್ತು. ಅದೂ ಜನರಲ್ ನಾಲೆಡ್ಜ್ ಪಶ್ನೆಗೆ ಉತ್ತರ ಕೊಡಬೇಕಾಗುವುದರಿಂದ ಇದು ಹೀಗೇ ಮುಂದುವರೆದರೆ ಮುಂದೊಂದು ದಿನ ಚಾಚಾ ನೆಹರೂ ಅಂದರೆ ಯಾರು? ಎಂದು ಮಕ್ಕಳು ಹಾಕುವ ಪ್ರಶ್ನೆಯನ್ನು ಎದುರಿಸಬೇಕಾದೀತು. ಅದಕ್ಕೆ ಉತ್ತರ ಹೇಳಲು ತಡಕಾಡುವ ಪರಿಸ್ಥಿತಿ ಇದ್ದರೂ ಅಚ್ಚರಿಯಿಲ್ಲ. ಮಕ್ಕಳಿಗೆ ಚರಿತ್ರೆ ಏನನ್ನೂ ಕಲಿಸುವುದಿಲ್ಲ. ಕಲಿಸುವ ವಾತಾವರಣವನ್ನು ನಾವು ನಿರ್ಮಿಸಿಯೂ ಇಲ್ಲ.

ಇಂದಿನ ಮಕ್ಕಳೇ ಮುಂದಿನ ಜನಾಂಗ ಎನ್ನುವ ಮಾತನ್ನು ಸದಾ ಉಚ್ಚರಿಸುತ್ತಿರುತ್ತೇವೆ. ಕಳೆದ ಅರ್ಧ ಶತಮಾನದಲ್ಲಿ ನಮ್ಮ ಮುಂದಿನ ಜನಾಂಗ ಮೂವತ್ತಮೂರು ಕೋಟಿಯಿಂದ ಮೂರು ನಾಲ್ಕು ಪಟ್ಟು ಹೆಚ್ಚಿದೆ. ನಮ್ಮ ದೇಶದಲ್ಲಿ ಪ್ರತಿ ನಿಮಿಷದಲ್ಲೂ ಮೂರು ಮಕ್ಕಳು ಹುಟ್ಟುತ್ತಿದ್ದಾರೆ. ಅವರನ್ನು ಮುಂದಿನ ಜನಾಂಗವನ್ನಾಗಿ ರೂಪಿಸುವ ಪ್ರಕ್ರಿಯೆ ನಿರಂತರವಾಗಿ ಸಾಗುತ್ತಲೇ ಇದೆ. ಆದರೆ ಎಷ್ಟು ಸಮರ್ಪಕವಾಗಿ ಈ ಕಾರ್ಯ ನಡೆಯುತ್ತಿದೆ? ಎಲ್ಲರಿಗೂ ವಿದ್ಯೆ ಎನ್ನುತ್ತಿರುವ ಯೋಜನೆಗಳು ಇರುವುದಾದರೂ ಅಕ್ಷರಸ್ತರ ಸಂಖ್ಯೆ ಶೇಕಡಾ ಮೂವತ್ತರ ಗಡಿಯನ್ನೂ ದಾಟುತ್ತಿಲ್ಲ. ಹೆಣ್ಣುಮಕ್ಕಳಿಗೆ ಸಮಾನ ಸ್ಥಾನಮಾನ, ಸ್ತ್ರೀ ಸಬಲೀಕರಣ ಎನ್ನುತ್ತಲೇ ಅವರ ಮೇಲಿನ ಶೋಷಣೆಗಳು ನಿರಂತರವಾಗಿ ಹೆಚ್ಚುತ್ತಿವೆ. ಯಾಕೆ ಹೀಗೆ? ಪ್ರಸ್ತುತದ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿ ಮಕ್ಕಳನ್ನು ಯಾವ ದಿಕ್ಕಿಗೆ ಕರೆದೊಯ್ಯುತ್ತಿವೆ?

ಇವತ್ತಿನ ಜೀವನಶೈಲಿ, ಜೀವನದ ಮೌಲ್ಯಗಳೂ ಬದಲಾಗಿವೆ. ಶೋಷಣೆ ಗಂಡಸರ ಮೇಲೂ ನಡೆಯುತ್ತಿದೆ. ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ದೇಶ ಎಂದು ಹೇಳುತ್ತಲೇ ಮಕ್ಕಳನ್ನು ಸಂಪೂರ್ಣ ಪಾಶ್ಚಾತೀಕರಣದ ಪ್ರಭಾವದಲ್ಲಿ ಬೆಳೆಸುತ್ತಾ ನಮ್ಮೊಳಗೇ ಇರುವ ದ್ವಂದ್ವದಲ್ಲಿ ನಾವಿಂದು ಮಕ್ಕಳನ್ನು ಬೆಳೆಸಿ ಗೊಂದಲದಲ್ಲಿ ಕೆಡವುತ್ತಿದ್ದೇವೆ. ಬಾಲ್ಯದಲ್ಲಿ ನಮಗಿದ್ದಂತಹ ಆದರ್ಶ ವ್ಯಕ್ತಿಗಳು ಇವತ್ತಿನ ಮಕ್ಕಳಿಗೆ ಇಲ್ಲ. ಇವತ್ತಿನ ಆದರ್ಶ ಹಣ ಗಳಿಕೆ, ಹೇಗಾದರೂ ಸರಿ ಹಣ ಮಾಡಬೇಕು ಎನ್ನುವ ಹಪಹಪಿಕೆ. ಹೀಗಾಗಿ ತ್ರಿಶಂಕು ಸ್ವರ್ಗವೆನ್ನುವ ಭ್ರಮಾಲೋಕದಲ್ಲಿ ಇಂದಿನ ಮಕ್ಕಳು ಸಿಕ್ಕಿಬಿದ್ದಿದ್ದಾರೆ. ಹಣ ಅನುಕೂಲತೆಗಳನ್ನು ಒದಗಿಸಬಹುದು ಮಾನಸಿಕ ನೆಮ್ಮದಿ ಒದಗಿಸಬಲ್ಲುದೇ? ಪ್ರೀತಿಯನ್ನು ಕೊಡಬಲ್ಲುದೇ? ಶಾಂತಿಯನ್ನು ಕೊಡಬಲ್ಲುದೇ? ಈ ತ್ರಿಶಂಕು ಸ್ವರ್ಗದಿಂದ ಅವರನ್ನು ಹೊರಗೆಳೆಯುವ ಹೊಣೆ ಹೆತ್ತವರಲ್ಲದೆ ಮತ್ತೆ ಯಾರದ್ದು?

ಮಕ್ಕಳು ನಮ್ಮವು. ಅವರನ್ನು ಬೆಳೆಸುವ ರೀತಿ, ಜವಾಬ್ದಾರಿ ನಮ್ಮವು. ಇವತ್ತು ನಾವೇನು ಮಾಡುತ್ತೇವೆಯೋ ಅದು ಮುಂದಿನ ಜನಾಂಗದ ಭವಿಷ್ಯವನ್ನೇ ಬರೆಯುತ್ತದೆ. ಈಗಿರುವಾಗ ಯಾಕೆ ಈ ಗೊಂದಲ? ಮಕ್ಕಳ ತಲೆಯಲ್ಲಿ ನೀನೇ ಕ್ಲಾಸಿಗೆ ಮೊದಲಿಗನಾಗಬೇಕು ಎನ್ನುವ ನಮ್ಮ ತೀರ್ಮಾನವನ್ನು ತುಂಬಿಸಿ ಹೆಜ್ಜೆ ಹೆಜ್ಜೆಗೆ ಅನಾರೋಗ್ಯಕರ ಸ್ಪರ್ಧೆ, ಸ್ವಾರ್ಥ, ಅಸೂಯೆಯ ಪಾಠವನ್ನು ಚಿಕ್ಕಂದಿನಿಂದಲೂ ಕಲಿಸುತ್ತೇವೆ. ಮಕ್ಕಳು ಬುದ್ಧಿವಂತರಾಗಬೇಕು ಎನ್ನುವುದರಲ್ಲಿ ತಪ್ಪಿಲ್ಲ. ಆದರೆ ಮಕ್ಕಳ ಬುದ್ಧಿವಂತಿಕೆ ಬರೇ ಮಾರ್ಕುಗಳಲ್ಲಿ ಇಲ್ಲ. ಅವರ ಮುಂದೆ ಒಂದು ಸಂಕೀರ್ಣ ಬದುಕಿದೆ. ಅದನ್ನವರು ಎದುರಿಸಲು ಸಾಧ್ಯವಾಗುವಂತಹ ಮಾರ್ಗದರ್ಶನ ಅವರಿಗೆ ಬೇಕು. ಸರಿತಪ್ಪುಗಳನ್ನು ವಿವೇಚಿಸುವ ಬುದ್ಧಿವಂತಿಕೆ, ಜೀವನವನ್ನು ಎದುರಿಸುವ ಛಲ, ಸೋಲನ್ನು ಎದುರಿಸುವ ಮನಸ್ಥೈರ್‍ಯ, ಸೋತಾಗ ಕುಸಿಯದೆ ಎದ್ದುನಿಂತು ಮುನ್ನಡೆಯುವ ಆತ್ಮವಿಶ್ವಾಸ, ಸೋಲುಗೆಲುವು ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ದಿಟ್ಟತನ, ಹೊರ ಜಗತ್ತಿನ ನೋವು ನಲಿವುಗಳಿಗೆ ಸ್ಪಂದಿಸುವ ಹೃದಯವಂತಿಕೆ, ಇವೆಲ್ಲವನ್ನೂ ಮಕ್ಕಳಲ್ಲಿ ತುಂಬಿ ಸರ್ವತೋಮುಖವಾಗಿ ಬೆಳೆಸಿದರೆ ಮಾತ್ರ ನಮ್ಮ ಮುಂದಿನ ಜನಾಂಗ ಸುದೃಢವಾಗಬಲ್ಲುದು.

ಜೀವನದಲ್ಲಿ ಬದುಕಲು ಕಲಿಯುವ ವಿದ್ಯೆ, ಜಾಣತನ ಬಹಳ ಮುಖ್ಯ ಎನ್ನುವುದನ್ನು ಮರೆತು ಅವರನ್ನು ಮಾರ್ಕು ತೆಗೆಯುವ ಯಂತ್ರಗಳನ್ನಾಗಿ ಮಾತ್ರ ರೂಪಿಸುತ್ತಾ ಸಾಗಿದರೆ ಮುಂದಿನ ಇಂದಿನ ಮಕ್ಕಳು ಜನಾಂಗ ಆಗುವುದು ಹೇಗೆ? ನಮ್ಮ ಮನೆ ನಮ್ಮ ಸಮಾಜ ಇಂತಹ ಯಂತ್ರಗಳಿಂದ ತುಂಬಬೇಕೇ? ಸ್ಪಂದನಗಳಿಲ್ಲದ ಜನರಿಂದ ಸಮಾಜ ಅಥವಾ ಜೀವನ ಮುಂದುವರೆಯುವುದು ಸಾಧ್ಯವೆ? ಮುಂದೊಂದು ಇಂದಿನ ಮಕ್ಕಳು ಮುಂದಿನ ಯಂತ್ರಗಳು ದಿನ ಎಂದು ಹೇಳಿಕೆಯನ್ನು ಬದಲಾಯಿಸಬೇಕಾದೀತು.

ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ಸಮಾಜ, ನಮ್ಮ ದೇಶವೆನ್ನುವ ಅಭಿಮಾನವಿರುವ ಮಕ್ಕಳು ನಮ್ಮ ಮುಂದಿನ ಜನಾಂಗವಾಗಬೇಕೆನ್ನುವ ಹೊಣೆಗಾರಿಕೆ ಎಲ್ಲರಿಗಿರಲಿ.
*****
(ಚಿಂತನ- ಆಕಾಶವಾಣಿ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾವೆಲ್ಲ ಒಂದೇ
Next post ಬೆತ್ತಲೆ ಕಿರೀಟ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys