Home / ಲೇಖನ / ಇತರೆ / ಮಾನವ ಸರ್ವಶ್ರೇಷ್ಠನೇ ?

ಮಾನವ ಸರ್ವಶ್ರೇಷ್ಠನೇ ?

Iruveಪ್ರಿಯ ಸಖಿ,
ಅದೊಂದು ವಿಜ್ಞಾನಿಗಳ ಗಹನವಾದ ಸಭೆ, ಪ್ರತಿಯೊಬ್ಬ ವಿಜ್ಞಾನಿಯೂ ಪ್ರಪಂಚದಲ್ಲೆಲ್ಲಾ ಮಾನವನೇ ಅತ್ಯಂತ ಶ್ರೇಷ್ಠ ಜೀವಿ. ಅವನು ಎಲ್ಲ ಪ್ರಾಣಿಗಳನ್ನೂ ತನ್ನ ಅಧೀನದಲ್ಲಿರಿಸಿಕೊಂಡು ಈ ಭೂಮಿಯನ್ನೇ ಆಳಬಲ್ಲ ಎಂಬ ವಿಷಯವನ್ನು ಕುರಿತು ವಿಷಯ ಮಂಡಿಸುತ್ತಿದ್ದಾರೆ.

ಪ್ರಪಂಚದಲ್ಲೆಲ್ಲಾ ಅಳಬಲ್ಲ, ನಗಬಲ್ಲ, ಯೋಚಿಸಬಲ್ಲ, ವಿವೇಚಿಸಬಲ್ಲ ಅತ್ಯಂತ ಬುದ್ಧಿವಂತ ಪ್ರಾಣಿ ಮನುಷ್ಯನೇ. ಅವನು ಸಿಂಹ, ಹುಲಿ, ಆನೆ, ಕರಡಿ, ಚಿರತೆ, ನರಿ, ತೋಳದಂತಹಾ ಪ್ರಾಣಿಗಳನ್ನು ಪಳಗಿಸಿ ತನ್ನ ಅಡಿಯಾಳಾಗಿ ಮಾಡಿಕೊಳ್ಳಬಲ್ಲ. ಜಿಂಕೆ, ಕುದುರೆ, ಹಸು, ಎಮ್ಮೆ, ಕುರಿ, ತೋಳಗಳಂತಹ ಪ್ರಾಣಿಗಳನ್ನು ಸಾಕಿ ತನ್ನಿಷ್ಟದಂತೆ ಉಪಯೋಗ ಪಡೆಯಬಲ್ಲ. ಪ್ರಪಂಚದ ಎಲ್ಲ ಪ್ರಾಣಿಗಳ ಸ್ವಭಾವವನ್ನೂ ವಿಜ್ಞಾನದ ಮುಖಾಂತರ ತಿಳಿದುಕೊಂಡಿರುವುದರಿಂದ ಯಾವ ಪ್ರಾಣಿಯನ್ನೇ ಆಗಲಿ ಹತೋಟಿಯಲ್ಲಿಡುವುದು ಮಾನವನಿಗೆ ಕಷ್ಟವೇ ಅಲ್ಲ. ಆದ್ದರಿಂದಲೇ ಜಗತ್ತಿನಲ್ಲೇ ಸರ್ವಶ್ರೇಷ್ಠವಾದ, ಬಲಿಷ್ಟವಾದ ಪ್ರಾಣಿ ಮಾನವನೇ ಇತ್ಯಾದಿ ವಿಷಯಗಳನ್ನು ವಿಜ್ಞಾನಿಗಳು ಚರ್ಚೆಯ ಮುಖಾಂತರ ಸಾಬೀತು ಪಡಿಸುತ್ತಿದ್ದಾರೆ.

ಇವರ ವಾದವನ್ನೆಲ್ಲಾ ಈ ವಿಜ್ಞಾನಿಗಳ ಗುಂಪಿನ ಅತ್ಯಂತ ಹಿರಿಯ ಹಾಗೂ ಪ್ರಮುಖ ವಿಜ್ಞಾನಿ ಕೇಳಿಸಿಕೊಳ್ಳುತ್ತಿದ್ದಾನೆ. ಆದರೆ ಅವನಿಗೆ ಆ ಕಡೆಗೆ ಏಕಾಗ್ರತೆ ಇಲ್ಲ. ಸಭೆ ಪ್ರಾರಂಭವಾದಾಗಿನಿಂದ ಇವನಿಗೆ ತನ್ನ ಶರಟಿನೊಳಗೆ ತುರಿಕೆ ಪ್ರಾರಂಭವಾಗಿದೆ. ಯಾವುದೋ ಕ್ರಿಮಿ ಇವನ ಮೈಮೇಲೆ ಓಡಾಡುತ್ತಾ ಕಚ್ಚುತ್ತಿರುವುದು ಸ್ಪಷ್ಟವಾಗಿದೆ. ಆದರೆ ಅದೊಂದು ಗಂಭೀರವಾದ ಸಭೆಯಾದ್ದರಿಂದ ಆಡಲಾಗದೇ, ಅನುಭವಿಸಲಾಗದೇ ಕೂತ ಜಾಗದಲ್ಲೇ ಮಿಸುಕಾಡುತ್ತಾ ಕುಳಿತಿದ್ದಾನೆ. ಶರಟಿನ ಮೇಲೆ ಯಾರಿಗೂ ಗೊತ್ತಾಗದಂತೆ ಉಜ್ಜಿಕೊಳ್ಳುತ್ತಿದ್ದಾನೆ. ಕೆರೆದುಕೊಳ್ಳುತ್ತಿದ್ದಾನೆ. ಯಾರಾದರೂ ಇತ್ತ ಗಮನಹರಿಸಿದರೆ ಪೆಚ್ಚುನಗೆ ನಕ್ಕು ಕೈ ಹಿಂದೆಳೆದುಕೊಳ್ಳುತ್ತಾನೆ.

ಸುಮಾರು ಹೊತ್ತಿನಿಂದ ಇವನ ಪರದಾಟ ಹೀಗೇ ಸಾಗಿದೆ. ಚರ್ಚೆ, ವಾದ, ವಿವಾದಗಳು ಮುಗಿಯಲು ಬಂದಿವೆ. ಇನ್ನು ಈ ಪ್ರಮುಖ ವಿಜ್ಞಾನಿ ನಿರ್ಣಯವನ್ನು ತೆಗೆದುಕೊಂಡು ಒಪ್ಪಿಗೆ ಸೂಚಿಸಿದರೆ ಎಲ್ಲವೂ ಮುಗಿದಂತೆಯೇ. ಇದ್ದಕ್ಕಿದ್ದಂತೆ ಇನ್ನು ತಡೆಯಲಾರದವನಂತೆ ಈ ಹಿರಿಯ ವಿಜ್ಞಾನಿ ತನ್ನ ಶರಟನ್ನು ಬಿಚ್ಚಿದ್ದಾನೆ. ಅಷ್ಟು ಹೊತ್ತಿನಿಂದಲೂ ಇವನನ್ನು ಕಚ್ಚಿ ಹಿಂಸೆ ನೀಡುತ್ತಿರುವ ಪುಟಾಣಿ ಇರುವೆಯನ್ನು ಹುಡುಕಿ ತೆಗದು ಟೇಬಲ್ಲಿನ ಮೇಲೆ ಹರವಿ “ಪ್ರಪಂಚದಲ್ಲಿ ಶ್ರೇಷ್ಠವಾದವನು ಮಾನವನೊಬ್ಬನೇ ಅಲ್ಲ. ನನ್ನಂತಹ ದೊಡ್ಡ ವಿಜ್ಞಾನಿಯನ್ನೂ ಗಂಟೆಗಳಿಂದ ಕಾಡಿಸಿದ ಈ ಯಕಶ್ಚಿತ್ ಇರುವೆಯಂತಾ ಪ್ರಾಣಿ ಕೂಡ ಶ್ರೇಷ್ಠವಾದುದೇ. ಆದ್ದರಿಂದ ಈ ಪ್ರಪಂಚದಲ್ಲಿನ ಎಲ್ಲ ಜೀವಿಗಳೂ ತಮ್ಮ ತಮ್ಮ ವಿಶಿಷ್ಟತೆಯಿಂದ ಶ್ರೇಷ್ಠವಾದುದೇ. ಈ ನಮ್ಮ ಇಂದಿನ ಎಲ್ಲ ಚರ್ಚೆ ಹುರುಳಿಲ್ಲದ್ದು ಎಂಬ ನಿರ್ಣಯವನ್ನು ಈ ಸಭೆಗೆ ನೀಡುತ್ತಿದ್ದೇನೆ” ಎಂದು ಘೋಷಿಸಿ ಸಭೆಯಿಂದ ಹೊರನಡೆಡುಬಿಟ್ಟ. ಟೇಬಲ್ಲಿನ ಉದ್ದಗಲಕ್ಕೂ ಹರಿದಾಡುತ್ತಿದ್ದ ಇರುವೆ, ಪೆಚ್ಚಾದ ವಿಜ್ಞಾನಿಗಳ ಮುಖವನ್ನು ನೋಡಿ ಗಹಗಹಿಸಿ ನಗಲಾರಂಭಿಸಿತು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...