ನೆಮ್ಮದಿಯೆಲ್ಲೆಡೆಗೆ

ನೆಮ್ಮದಿಯು ಸರ್ವರಿಗೆ ನೆಮ್ಮದಿಯು ಎಲ್ಲೆಡೆಗೆ
ನೆಮ್ಮದಿಯು ಭೂತಳದ ದೇಶಗಳಿಗೆಲ್ಲ

ಆನಂದವೆಲ್ಲರಿಗೆ ಆನಂದವೆಲ್ಲೆಡೆಗೆ
ಆನಂದವಿರಲೆಲ್ಲ ರಾಷ್ಟ್ರಗಳಲೆಲ್ಲ
ನೆಮ್ಮದಿಯು ಚೆಂಗುಲಾಬಿಯ ಬೆಳಗಿನಂತೆ
ಆನಂದ ನಸುನಗುವ ವಸಂತನಂತೆ

ಒಬ್ಬನಿಗೆ ಎಲ್ಲರೂ ಪ್ರತಿಯೊಬ್ಬನೆಲ್ಲರಿಗೆ
ಇದುವೆ ಬಾಳುವೆಯಲ್ಲೆ ಬಂಗಾರ ನಿಯಮ
ಜೀವನವು ಬೆಳಕು ಮೇಣ್ ಪ್ರೀತಿಗಳು ಎಲ್ಲರಿಗೆ
ಜೀವಿಗಳಿಗೆಲ್ಲರಿಗೆ ಪ್ರೇಮ ನಿಸ್ಸೀಮ

ಎಲ್ಲರಿಗೆ ಕಾಯಕವು ಅನ್ನ ಬಟ್ಟೆಗಳಿರಲಿ
ಸರಿಸಮತೆ ನೆಲಗೊಳ್ಳಲೆಲ್ಲರಲ್ಲಿ
ಮನೆ ಶಾಲೆ ಆರೋಗ್ಯವನುಕೂಲವೆಲ್ಲರಿಗೆ
ಸಂತಸದ ಜಗವಿರಲಿ ಎಲ್ಲೆಡೆಯಲಿ

ಸೋಮಾರಿ ಸಿರಿತನವು ಬರಿಹೊಟ್ಟೆ ಭಿಕ್ಷುಕರು
ಬೇಡವೈ ಎಲ್ಲರೂ ಸಮ ಕೆಲಸದಲ್ಲಿ
ಕಣ್ಣೀರ ಕರೆಬೇಡ ಅಂಜಿಕೆಯ ಪರಿಬೇಡ
ನಗುವುಕ್ಕಿ ಹರಿಯಲೀ ಎಲ್ಲರೆದೆಯಲ್ಲಿ

ಅಣುಶಕ್ತಿ ಭಯಬೇಡ ಸಿರಿರಾಷ್ಟ್ರ ಬಲಬೇಡ
ಯುದ್ಧ ರಾಕ್ಷಸನಿಗೋ ಸ್ಥಳವೆ ಬೇಡ
ಮರದ ಎಲೆಗಳ ರೀತಿ ಸೂರ್ಯಕಿರಣಗಳಂತೆ
ನಾವೆಲ್ಲ ದಿವ್ಯ ಮಾನವರು ನೋಡ

ನಿನ್ನೊಳಗಿನೊಳತಿರುಳು ಎಲ್ಲರೊಳಿತಿಗೆ ತುಡಿದು
ನಿನ್ನ ಜೀವವು ಎಲ್ಲ ಜೀವಗಳಿಗಾಗಿ
ನಿನ್ನ ದೇವರು ಎಲ್ಲ ಜನರಲ್ಲು ತುಂಬಿಹನು
ನಿನ್ನ ಪ್ರೀತಿಯು ಎಲ್ಲ ಮಾನವರಿಗಾಗಿ

ಅವನಿಗೋ ಅವಳಿಗೋ ಪ್ರತಿಯೊಬ್ಬ ವ್ಯಕ್ತಿಗೋ
ಸಹಬಾಳ್ವೆಯೇ ಬೆಳಕು ಅತ್ಯುತ್ತಮಾ
ಪಾಶ್ಚಾತ್ಯ ಪೌರಾತ್ಯ ಭೂಬಂಧುಗಳಿಗೆಲ್ಲ
ವಿಶ್ವ ಮಾನವ ಧರ್ಮ ಅತ್ಯುತ್ತಮ

ಸಸ್ಯ ಸಂತತಿಗೆಲ್ಲ ಪ್ರಾಣಿ ಪಕ್ಷಿಗಳಿಗೂ
ಗಿರಿಗಳಿಗೆ ವನಗಳಿಗೆ ಕಳಕಳದ ಹೊಳೆಗೆ
ನೆಲ ಜಲಕೆ ತಿರೆ ವಾಯು ಪಂಚಭೂತದ ಜಗಕೆ
ಚೈತನ್ಯ ನೆಮ್ಮದಿಯು ತುಂಬಿ ಬೆಳಗೆ

ಎಲ್ಲರಿಗೂ ನೆಮ್ಮದಿಯು ಎಲ್ಲೆಡೆಗು ನೆಮ್ಮದಿಯು
ಅಮರ ಶಾಂತಿಯ ದಿವ್ಯ ಭವ್ಯ ನೆಮ್ಮದಿಯು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನವ ಸರ್ವಶ್ರೇಷ್ಠನೇ ?
Next post ಲಿಂಗಮ್ಮನ ವಚನಗಳು – ೫೮

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…