ಜಾಣ ಕುರುಡೇ?

ಜಾಣ ಕುರುಡೇ?

ಚಿತ್ರ: ಗರ್‍ಡ್ ಆಲ್ಟ್‌ಮನ್

ಪ್ರಿಯ ಸಖಿ,

ಹೀಗೆ, ಆಶ್ರಮವೊಂದರಲ್ಲಿ ಗುರುವೊಬ್ಬನಿದ್ದ. ಮಹಾನ್ ಮಾನವತಾವಾದಿ. ಎಂತಹ ಸೂಕ್ಷ್ಮ ಮನಸ್ಸಿನವನೆಂದರೆ ತನ್ನ ಮಾತು, ಕೃತಿಗಳಿಂದ ಎಂದೂ ಇತರರನ್ನು ನೋಯಿಸಿದವನಲ್ಲ. ತನ್ನ ಶಿಷ್ಯರೊಡನೆಯೂ ಪ್ರೀತಿ ಮಮತೆಗಳಿಂದ ನಡೆದುಕೊಳ್ಳುತ್ತಿದ್ದ. ಬಿರು ಬೇಸಿಗೆಯಲ್ಲಿ ಗಿಡಗಳು ಸುಟ್ಟು ಹೋಗುತ್ತವಲ್ಲ ಎಂದೂ ಚಳಿಗಾಲದಲ್ಲಿ ಪಕ್ಷಿಗಳು ನಡುಗಿ ನೋಯುತ್ತವಲ್ಲಾ ಎಂದೂ, ಗಿಡದಿಂದ ಹೂಕಿತ್ತರೆ ಅದಕ್ಕೆ ನೋವಾಗುವುದೆಂದೂ ಪರಿತಪಿಸುತ್ತಿದ್ದ. ಇಷ್ಟೆಲ್ಲಾ ಸೂಕ್ಷ್ಮ ಮನಸ್ಸಿನ ಈ ಗುರು ಒಬ್ಬ ಮಾಂಸಾಹಾರಿಯಾಗಿದ್ದ. ಆ ತನ್ನ ತಪಸ್ಸಿನ ಶಕ್ತಿಗೆ, ಧೈರ್ಯ, ಬುದ್ಧಿವಂತಿಕೆಗೆ ತೇಜಸ್ಸಿಗೆ ತಾನು ಮಾಂಸಹಾರಿಯಾಗಿರುವುದೇ ಕಾರಣವೆಂದು ಬಲವಾಗಿ ನಂಬಿದ್ದ! ಈ ಆಶ್ರಮಕ್ಕೆ ಹೊಸ ಶಿಷ್ಯನೊಬ್ಬ ಆಗಮಿಸಿದ. ಅವನೋ ಅಪ್ಪಟ ಸಸ್ಯಾಹಾರಿ. ಜೊತೆಗೆ ಮಹಾನ್ ಬುದ್ಧಿವಂತ. ಅವನಿಗೆ ತನ್ನ ಗುರುಗಳ ಬುದ್ಧಿವಂತಿಕೆ, ಶಕ್ತಿ, ಎಲ್ಲಕ್ಕಿಂತ ಹೆಚ್ಚಾಗಿ ಅವರ ಮಾನವೀಯ ಗುಣಗಳು ಹೆಚ್ಚು ಮೆಚ್ಚುಗೆಯಾದವು. ಮಾನವೀಯತೆಯ ಕುರಿತು ಅವರು ಹೇಳುತ್ತಿದ್ದ ಕಥೆಗಳು, ಅದರಂತೆ ನಡೆಯಬೇಕೆಂದು ಅವರು ನೀಡುತ್ತಿದ್ದ ಉಪದೇಶ ಎಲ್ಲವೂ ಬಹಳ ಅಪ್ಯಾಯಮಾನವಾಗಿದ್ದವು. ಹಾಗೆಯೇ ಹೂವು, ಗಿಡ, ಮರ, ಪಕ್ಷಿಗಳ ಕುರಿತೂ ಅವರಿಗಿರುವ ಪ್ರೀತಿಯನ್ನು ಕಂಡು ಹೃದಯ ತುಂಬಿಬರುತ್ತಿತ್ತು.

ಆದರೆ ಅವನಿಗೆ ಅರ್ಥವಾಗದ್ದೊಂದೇ. ಅದು ಗುರುಗಳ ಮಾಂಸಾಹಾರ ಸೇವನೆ. ಇಷ್ಟೆಲ್ಲಾ ಪ್ರೀತಿ ತುಂಬಿದ ಹೃದಯದ ಗುರುಗಳು ಮಾಸಾಹಾರಿಗಳೇಕೆ ಎಂಬ ಪ್ರಶ್ನೆ ಅವನನ್ನು ಕಾಡುತ್ತಿತ್ತು. ಹಾಗೆಂದು ಗುರುಗಳನ್ನು ಎದುರಿಗೇ ಕೇಳಲಾದೀತೇ? ಸರಿ ಅವರ ಆಹಾರ ಕ್ರಮವನ್ನು, ಇಂಚಿಂಚೂ ಪರೀಕ್ಷಿಸತೊಡಗಿದ.

ಗುರುಗಳು ಆಹಾರದ ಸಮಯಕ್ಕೆ ಸರಿಯಾಗಿ ಭೋಜನ ಶಾಲೆಗೆ ಆಗಮಿಸುತ್ತಿದ್ದರು. ಆಹಾರ ಸೇವಿಸಿ ಹೊರಟು ಹೋಗುತ್ತಿದ್ದರು. ಆಹಾರ ತಯಾರಿ ವಿಧಾನವಾಗಲಿ, ಇವರ ಮಾಂಸಾಹಾರಕ್ಕಾಗಿ ನಡೆಯುವ ಪ್ರಾಣಿ ವಧೆಯನ್ನಾಗಲಿ ಅವರು ಕಂಡೇ ಇರಲಿಲ್ಲ.

ಈ ಹೊಸ ಶಿಷ್ಯ ಇದನ್ನೆಲ್ಲವನ್ನೂ ಅವರಿಗೆ ತೋರಿಸಲು ನಿರ್ಧರಿಸಿದ. ಒಂದು ದಿನ ಆ ವೇಳೆಯಲ್ಲಿ ಅವರನ್ನು ಪಾಕ ಶಾಲೆಗೆ ಕರೆತಂದ. ಅಲ್ಲಿ ಕೆಲ ಶಿಷ್ಯರು ಕೋಳಿಯೊಂದರ ಪುಕ್ಕ ಕಿತ್ತು, ಅದನ್ನು ಕೊಲ್ಲುವ ತಯಾರಿಯಲ್ಲಿದ್ದರು. ಇದನ್ನು ಕಂಡ ಗುರುಗಳು ಸಿಟ್ಟಿನಿಂದ ಕೂಗಾಡಿದರು. ಶಿಷ್ಯರು ತಮ್ಮ ಆಹಾರಕ್ಕಾಗಿಯೇ ಈ ಎಲ್ಲಾ ಹಿಂಸೆ ಎಂದಾಗ ಗುರುಗಳು ದಿಗ್ಭ್ರಾಂತರಾದರು!

ಪ್ರಿಯ ಸಖಿ, ಗುರುಗಳು ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಯಾದರೋ ಇಲ್ಲ ಇಂತಹ ಹಿಂಸೆಯನ್ನು ತಮ್ಮ ಕಣ್ಣಿಗೆ ತೋರಿಸಿದ್ದಕ್ಕಾಗಿ ಹೊಸ ಶಿಷ್ಯನನ್ನೇ ದಂಡಿಸಿದರೋ, ಮುಂದೆ ಆ ಕಥೆಯೇನಾಯ್ತೋ ನಮಗೆ ಬೇಡ. ಆದರೆ ಮೃದು ಹೃದಯದ, ಸಣ್ಣ ನೋವಿಗೂ ಸ್ಪಂದಿಸುವೆವೆಂದು ಹೇಳಿಕೊಳ್ಳುವಂತಹಾ ಈ ಗುರುವಿನಂತವರು ಇಂತಹಾ ಹಿಂಸಾಚಾರವನ್ನು ನಿತ್ಯ ತಮ್ಮ ಮನೆಗಳಲ್ಲಿ ನೋಡುತ್ತಲೇ ಇರುತ್ತಾರಲ್ಲವೇ ? ನಮ್ಮ ಕಥೆಯ ಗುರುವಿನಂತೆ ಹಿಂಸೆಯ ಅರಿವು ಅವರಿಗಿರುವುದಿಲ್ಲವೊ, ಈ ಕುರಿತು ಜಾಣ ಕುರುಡೋ. ಪ್ರಾಣಿಗಳಿರುವುದೇ ನಮ್ಮ ಆಹಾರಕ್ಕೆ ಅದರಲ್ಲೆಂತಾ ಹಿಂಸೆ ಎಂಬ ದಿವ್ಯ ಬುದ್ಧಿವಂತಿಕೆಯೋ? ಏನೆಂಬುದು ಅವರವರಿಗೇ ಗೊತ್ತಿರಬೇಕಷ್ಟೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾನು ರೆಪ್ಪೆ ಮುಚ್ಚುತಿದೆ
Next post ಎಡಬಿಡಂಗಿ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…