Home / ಲೇಖನ / ಇತರೆ / ಜಾಣ ಕುರುಡೇ?

ಜಾಣ ಕುರುಡೇ?

ಚಿತ್ರ: ಗರ್‍ಡ್ ಆಲ್ಟ್‌ಮನ್

ಪ್ರಿಯ ಸಖಿ,

ಹೀಗೆ, ಆಶ್ರಮವೊಂದರಲ್ಲಿ ಗುರುವೊಬ್ಬನಿದ್ದ. ಮಹಾನ್ ಮಾನವತಾವಾದಿ. ಎಂತಹ ಸೂಕ್ಷ್ಮ ಮನಸ್ಸಿನವನೆಂದರೆ ತನ್ನ ಮಾತು, ಕೃತಿಗಳಿಂದ ಎಂದೂ ಇತರರನ್ನು ನೋಯಿಸಿದವನಲ್ಲ. ತನ್ನ ಶಿಷ್ಯರೊಡನೆಯೂ ಪ್ರೀತಿ ಮಮತೆಗಳಿಂದ ನಡೆದುಕೊಳ್ಳುತ್ತಿದ್ದ. ಬಿರು ಬೇಸಿಗೆಯಲ್ಲಿ ಗಿಡಗಳು ಸುಟ್ಟು ಹೋಗುತ್ತವಲ್ಲ ಎಂದೂ ಚಳಿಗಾಲದಲ್ಲಿ ಪಕ್ಷಿಗಳು ನಡುಗಿ ನೋಯುತ್ತವಲ್ಲಾ ಎಂದೂ, ಗಿಡದಿಂದ ಹೂಕಿತ್ತರೆ ಅದಕ್ಕೆ ನೋವಾಗುವುದೆಂದೂ ಪರಿತಪಿಸುತ್ತಿದ್ದ. ಇಷ್ಟೆಲ್ಲಾ ಸೂಕ್ಷ್ಮ ಮನಸ್ಸಿನ ಈ ಗುರು ಒಬ್ಬ ಮಾಂಸಾಹಾರಿಯಾಗಿದ್ದ. ಆ ತನ್ನ ತಪಸ್ಸಿನ ಶಕ್ತಿಗೆ, ಧೈರ್ಯ, ಬುದ್ಧಿವಂತಿಕೆಗೆ ತೇಜಸ್ಸಿಗೆ ತಾನು ಮಾಂಸಹಾರಿಯಾಗಿರುವುದೇ ಕಾರಣವೆಂದು ಬಲವಾಗಿ ನಂಬಿದ್ದ! ಈ ಆಶ್ರಮಕ್ಕೆ ಹೊಸ ಶಿಷ್ಯನೊಬ್ಬ ಆಗಮಿಸಿದ. ಅವನೋ ಅಪ್ಪಟ ಸಸ್ಯಾಹಾರಿ. ಜೊತೆಗೆ ಮಹಾನ್ ಬುದ್ಧಿವಂತ. ಅವನಿಗೆ ತನ್ನ ಗುರುಗಳ ಬುದ್ಧಿವಂತಿಕೆ, ಶಕ್ತಿ, ಎಲ್ಲಕ್ಕಿಂತ ಹೆಚ್ಚಾಗಿ ಅವರ ಮಾನವೀಯ ಗುಣಗಳು ಹೆಚ್ಚು ಮೆಚ್ಚುಗೆಯಾದವು. ಮಾನವೀಯತೆಯ ಕುರಿತು ಅವರು ಹೇಳುತ್ತಿದ್ದ ಕಥೆಗಳು, ಅದರಂತೆ ನಡೆಯಬೇಕೆಂದು ಅವರು ನೀಡುತ್ತಿದ್ದ ಉಪದೇಶ ಎಲ್ಲವೂ ಬಹಳ ಅಪ್ಯಾಯಮಾನವಾಗಿದ್ದವು. ಹಾಗೆಯೇ ಹೂವು, ಗಿಡ, ಮರ, ಪಕ್ಷಿಗಳ ಕುರಿತೂ ಅವರಿಗಿರುವ ಪ್ರೀತಿಯನ್ನು ಕಂಡು ಹೃದಯ ತುಂಬಿಬರುತ್ತಿತ್ತು.

ಆದರೆ ಅವನಿಗೆ ಅರ್ಥವಾಗದ್ದೊಂದೇ. ಅದು ಗುರುಗಳ ಮಾಂಸಾಹಾರ ಸೇವನೆ. ಇಷ್ಟೆಲ್ಲಾ ಪ್ರೀತಿ ತುಂಬಿದ ಹೃದಯದ ಗುರುಗಳು ಮಾಸಾಹಾರಿಗಳೇಕೆ ಎಂಬ ಪ್ರಶ್ನೆ ಅವನನ್ನು ಕಾಡುತ್ತಿತ್ತು. ಹಾಗೆಂದು ಗುರುಗಳನ್ನು ಎದುರಿಗೇ ಕೇಳಲಾದೀತೇ? ಸರಿ ಅವರ ಆಹಾರ ಕ್ರಮವನ್ನು, ಇಂಚಿಂಚೂ ಪರೀಕ್ಷಿಸತೊಡಗಿದ.

ಗುರುಗಳು ಆಹಾರದ ಸಮಯಕ್ಕೆ ಸರಿಯಾಗಿ ಭೋಜನ ಶಾಲೆಗೆ ಆಗಮಿಸುತ್ತಿದ್ದರು. ಆಹಾರ ಸೇವಿಸಿ ಹೊರಟು ಹೋಗುತ್ತಿದ್ದರು. ಆಹಾರ ತಯಾರಿ ವಿಧಾನವಾಗಲಿ, ಇವರ ಮಾಂಸಾಹಾರಕ್ಕಾಗಿ ನಡೆಯುವ ಪ್ರಾಣಿ ವಧೆಯನ್ನಾಗಲಿ ಅವರು ಕಂಡೇ ಇರಲಿಲ್ಲ.

ಈ ಹೊಸ ಶಿಷ್ಯ ಇದನ್ನೆಲ್ಲವನ್ನೂ ಅವರಿಗೆ ತೋರಿಸಲು ನಿರ್ಧರಿಸಿದ. ಒಂದು ದಿನ ಆ ವೇಳೆಯಲ್ಲಿ ಅವರನ್ನು ಪಾಕ ಶಾಲೆಗೆ ಕರೆತಂದ. ಅಲ್ಲಿ ಕೆಲ ಶಿಷ್ಯರು ಕೋಳಿಯೊಂದರ ಪುಕ್ಕ ಕಿತ್ತು, ಅದನ್ನು ಕೊಲ್ಲುವ ತಯಾರಿಯಲ್ಲಿದ್ದರು. ಇದನ್ನು ಕಂಡ ಗುರುಗಳು ಸಿಟ್ಟಿನಿಂದ ಕೂಗಾಡಿದರು. ಶಿಷ್ಯರು ತಮ್ಮ ಆಹಾರಕ್ಕಾಗಿಯೇ ಈ ಎಲ್ಲಾ ಹಿಂಸೆ ಎಂದಾಗ ಗುರುಗಳು ದಿಗ್ಭ್ರಾಂತರಾದರು!

ಪ್ರಿಯ ಸಖಿ, ಗುರುಗಳು ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಯಾದರೋ ಇಲ್ಲ ಇಂತಹ ಹಿಂಸೆಯನ್ನು ತಮ್ಮ ಕಣ್ಣಿಗೆ ತೋರಿಸಿದ್ದಕ್ಕಾಗಿ ಹೊಸ ಶಿಷ್ಯನನ್ನೇ ದಂಡಿಸಿದರೋ, ಮುಂದೆ ಆ ಕಥೆಯೇನಾಯ್ತೋ ನಮಗೆ ಬೇಡ. ಆದರೆ ಮೃದು ಹೃದಯದ, ಸಣ್ಣ ನೋವಿಗೂ ಸ್ಪಂದಿಸುವೆವೆಂದು ಹೇಳಿಕೊಳ್ಳುವಂತಹಾ ಈ ಗುರುವಿನಂತವರು ಇಂತಹಾ ಹಿಂಸಾಚಾರವನ್ನು ನಿತ್ಯ ತಮ್ಮ ಮನೆಗಳಲ್ಲಿ ನೋಡುತ್ತಲೇ ಇರುತ್ತಾರಲ್ಲವೇ ? ನಮ್ಮ ಕಥೆಯ ಗುರುವಿನಂತೆ ಹಿಂಸೆಯ ಅರಿವು ಅವರಿಗಿರುವುದಿಲ್ಲವೊ, ಈ ಕುರಿತು ಜಾಣ ಕುರುಡೋ. ಪ್ರಾಣಿಗಳಿರುವುದೇ ನಮ್ಮ ಆಹಾರಕ್ಕೆ ಅದರಲ್ಲೆಂತಾ ಹಿಂಸೆ ಎಂಬ ದಿವ್ಯ ಬುದ್ಧಿವಂತಿಕೆಯೋ? ಏನೆಂಬುದು ಅವರವರಿಗೇ ಗೊತ್ತಿರಬೇಕಷ್ಟೇ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...