ವಚನ ವಿಚಾರ – ನನ್ನ ಗಂಡ ಮಿಕ್ಕವರಂತಲ್ಲ

ವಚನ ವಿಚಾರ – ನನ್ನ ಗಂಡ ಮಿಕ್ಕವರಂತಲ್ಲ

ಅವರಾರ ಪರಿಯಲ್ಲ ಎಮ್ಮ ನಲ್ಲನು
ವಿಶ್ವವೆಲ್ಲ ಸತಿಯರು
ಸೋಜಿಗದ ಪುರುಷನು
ಅವರವರ ಪರಿಯಲ್ಲೆ ನೆರೆವನು
ಅವರಿಗವರಂತೆ ಸುಖಮಯನು ನೋಡಾ
ಅವರೆಲ್ಲರ ವಂಚಿಸಿ ಎನ್ನನಗಲದ ಪರಿಯ ನೋಡಾ
ಕೆಳದಿ
ನೀನೊಳ್ಳಿದಳಾದಡೆ
ಮಹಾಮಂತ್ರವ ಜಪಿಸು
ನಿನ್ನನಗಲನು
ನಿನ್ನಾಣೆ
ಉರಿಲಿಂಗದೇವ
ತನ್ನಾಣೆ ಕೆಳದಿ

[ನೆರೆವನು-ಕೂಡುವನು, ನೀನೊಳ್ಳಿದಳಾದಡೆ-ನೀನು ಒಳ್ಳೆಯವಳಾಗಿದ್ದರೆ]

ಉರಿಲಿಂಗದೇವನ ವಚನ. ನನ್ನ ಗಂಡ ಮಿಕ್ಕವರ ಗಂಡನಂತೆ ಅಲ್ಲ. ಇಡೀ ವಿಶ್ವವೇ ಅವನ ಹೆಂಡಿರು. ಅವರವರಿಗೆ ಬೇಕಾದಂತೆ ಅವರವರೊಡನೆ ಇರುತ್ತಾನೆ. ಅವರವರಿಗೆ ತಕ್ಕಂತೆ ಸುಖ ಕೊಡುತ್ತಾನೆ. ಆದರೆ ವಿಚಿತ್ರವೆಂದರೆ ಅವನಿಗೆ ನನ್ನ ಮೇಲೆ ತುಂಬ ಪ್ರೀತಿ, ಮಿಕ್ಕವರನ್ನೆಲ್ಲ ವಂಚಿಸಿ ನನ್ನೊಡನೆ ಇದ್ದಾನೆ. ನನ್ನನ್ನು ಬಿಟ್ಟು ಅಗಲುವುದಿಲ್ಲ. ನೀನು ಒಳ್ಳೆಯವಳಾದರೆ ಮಹಾಮಂತ್ರವನ್ನು ಜಪಿಸು. ಅವನು ನಿನ್ನೊಡನೆಯೇ ಇರುವಂತಾಗುತ್ತದೆ, ನಿನ್ನನ್ನು ಬಿಟ್ಟು ಹೋಗದಂತಾಗುತ್ತದೆ.

ದೈವವು ಇಷ್ಟದೈವವಾಗುವ ಪರಿ ಈ ವಚನದಲ್ಲಿದೆ. ರಾಸಲೀಲೆಯಾಡುವಾಗ ಕೃಷ್ಣ ಎಲ್ಲ ಗೋಪಿಕೆಯರೊಡನೆಯೂ ಇರುತ್ತಿದ್ದನಂತಲ್ಲ, ಹಾಗೆಯೇ ಇದು. ಇಡೀ ವಿಶ್ವಕ್ಕೆ ದೈವವಾದವನು, ನನ್ನೊಬ್ಬಳ ಸ್ವಂತವಾಗುವ ವೈಚಿತ್ರ್ಯ ಅಚ್ಚರಿಗೆ ಕಾರಣವಾಗಿದೆ. ಇದು ಅವನನ್ನು ಪತಿಯಾಗಿ ಪಡೆಯಬಯಸುವ ಎಲ್ಲರಿಗೂ ಸಾಧ್ಯ ಅನ್ನುತ್ತದೆ ಉರಿಲಿಂಗದೇವನ ಈ ವಚನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಗ್ಗದೊಡೆಯನ ಬಿಂಕ
Next post ಮನವೆಂಬ ಮರ್ಕಟ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys