Home / ಲೇಖನ / ಇತರೆ / ವಚನ ವಿಚಾರ – ನನ್ನ ಗಂಡ ಮಿಕ್ಕವರಂತಲ್ಲ

ವಚನ ವಿಚಾರ – ನನ್ನ ಗಂಡ ಮಿಕ್ಕವರಂತಲ್ಲ

ಅವರಾರ ಪರಿಯಲ್ಲ ಎಮ್ಮ ನಲ್ಲನು
ವಿಶ್ವವೆಲ್ಲ ಸತಿಯರು
ಸೋಜಿಗದ ಪುರುಷನು
ಅವರವರ ಪರಿಯಲ್ಲೆ ನೆರೆವನು
ಅವರಿಗವರಂತೆ ಸುಖಮಯನು ನೋಡಾ
ಅವರೆಲ್ಲರ ವಂಚಿಸಿ ಎನ್ನನಗಲದ ಪರಿಯ ನೋಡಾ
ಕೆಳದಿ
ನೀನೊಳ್ಳಿದಳಾದಡೆ
ಮಹಾಮಂತ್ರವ ಜಪಿಸು
ನಿನ್ನನಗಲನು
ನಿನ್ನಾಣೆ
ಉರಿಲಿಂಗದೇವ
ತನ್ನಾಣೆ ಕೆಳದಿ

[ನೆರೆವನು-ಕೂಡುವನು, ನೀನೊಳ್ಳಿದಳಾದಡೆ-ನೀನು ಒಳ್ಳೆಯವಳಾಗಿದ್ದರೆ]

ಉರಿಲಿಂಗದೇವನ ವಚನ. ನನ್ನ ಗಂಡ ಮಿಕ್ಕವರ ಗಂಡನಂತೆ ಅಲ್ಲ. ಇಡೀ ವಿಶ್ವವೇ ಅವನ ಹೆಂಡಿರು. ಅವರವರಿಗೆ ಬೇಕಾದಂತೆ ಅವರವರೊಡನೆ ಇರುತ್ತಾನೆ. ಅವರವರಿಗೆ ತಕ್ಕಂತೆ ಸುಖ ಕೊಡುತ್ತಾನೆ. ಆದರೆ ವಿಚಿತ್ರವೆಂದರೆ ಅವನಿಗೆ ನನ್ನ ಮೇಲೆ ತುಂಬ ಪ್ರೀತಿ, ಮಿಕ್ಕವರನ್ನೆಲ್ಲ ವಂಚಿಸಿ ನನ್ನೊಡನೆ ಇದ್ದಾನೆ. ನನ್ನನ್ನು ಬಿಟ್ಟು ಅಗಲುವುದಿಲ್ಲ. ನೀನು ಒಳ್ಳೆಯವಳಾದರೆ ಮಹಾಮಂತ್ರವನ್ನು ಜಪಿಸು. ಅವನು ನಿನ್ನೊಡನೆಯೇ ಇರುವಂತಾಗುತ್ತದೆ, ನಿನ್ನನ್ನು ಬಿಟ್ಟು ಹೋಗದಂತಾಗುತ್ತದೆ.

ದೈವವು ಇಷ್ಟದೈವವಾಗುವ ಪರಿ ಈ ವಚನದಲ್ಲಿದೆ. ರಾಸಲೀಲೆಯಾಡುವಾಗ ಕೃಷ್ಣ ಎಲ್ಲ ಗೋಪಿಕೆಯರೊಡನೆಯೂ ಇರುತ್ತಿದ್ದನಂತಲ್ಲ, ಹಾಗೆಯೇ ಇದು. ಇಡೀ ವಿಶ್ವಕ್ಕೆ ದೈವವಾದವನು, ನನ್ನೊಬ್ಬಳ ಸ್ವಂತವಾಗುವ ವೈಚಿತ್ರ್ಯ ಅಚ್ಚರಿಗೆ ಕಾರಣವಾಗಿದೆ. ಇದು ಅವನನ್ನು ಪತಿಯಾಗಿ ಪಡೆಯಬಯಸುವ ಎಲ್ಲರಿಗೂ ಸಾಧ್ಯ ಅನ್ನುತ್ತದೆ ಉರಿಲಿಂಗದೇವನ ಈ ವಚನ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...