ಮನವೆಂಬ ಮರ್ಕಟ

ಹರಿಯಗೊಡದಿರು ಮನವೇ
ಎಲ್ಲೆಂದರಲ್ಲಿ
ಮನವು ಮರ್ಕಟವೆಂಬ
ಮಾತು ನಿಜವಿಲ್ಲಿ.
ಓಡುವುದು ನದಿಯಂತೆ
ಬೀಸುವ ಗಾಳಿಯಂತೆ
ಕತ್ತಿಯ ಅಲುಗಿನಂತೆ
ಸುಳಿಯುವುದು ಕ್ಷಣ ಕ್ಷಣ
ಚಪಲ ಚಿತ್ತವ ಹಿಡಿದು ಕಟ್ಟುವ
ಇಂದ್ರಿಯ ನಿಗ್ರಹ ಶಕ್ತಿ
ಇದ್ದರೆ ನೀನಾಗುವೆ ಮಹಾವ್ಯಕ್ತಿ
ಯತ್ನದಿಂದ ಪ್ರಯತ್ನದಿಂದ
ಸಾಧನೆಯ ಬಲದಿಂದ
ಮನಕೆ ಹಾಕು ಲಗಾಮು
ನಿನಗೆ ತೋರುವ ಹಾದಿಯಲಿ
ಛಲದ ಅಭಿವ್ಯಕ್ತಿಯಲಿ
ಮನವ ಮುನ್ನಡೆಸು
ಮೂಗು ತೂರಿಸದಿರು
ಪರರ ವಿಷಯಾಸಕ್ತಿಗೆ
ಚಿಂತೆಯ ಚಿತೆಯಲಿ
ಬೇಯದಿರು ಬರಿದೆ
ಗಾಳಿಯನು ಗುದ್ದಿ
ಮೈ ನೋಯಿಸುವ ಪರಿ
ದುಡುಕುತನದ ದೂರ ಸರಿ
ಚಿಂತಿಸದಿರು ವ್ಯರ್ಥ ಜಿಜ್ಞಾಸೆಯಲಿ
ಕತ್ತಲಿನ ಗರ್ಭವ ಸೀಳಿ
ಹೊರಬರಲಿ ವಾಸ್ತವತೆಯ ಬೆಳಕು
ಹಣ ಅಂತಸ್ತು ಅಧಿಕಾರ
ಇರಬಹುದು ಬಾಳಿಗೆ ಸಾಕಾರ
ಜೀವನವೆಂದರೆ ನೂರು ಅರ್ಥ
ಅರ್ಥದಿಂದಲೇ ವೇದಾಂತ
ಸಿದ್ಧಾಂತ
ಅರಿತು ನಡೆದರೆ ಸುಖಾಂತ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ನನ್ನ ಗಂಡ ಮಿಕ್ಕವರಂತಲ್ಲ
Next post ದೂರು ಪೆಟ್ಟಿಗೆ

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys