ಪ್ರಗತಿ ಅಥವಾ ದಾಸ್ಯವಿಮೋಚನೆ – ೧೧ನೆಯ ಖಂಡ – ಆಸ್ಥೆ-ಕಾಳಜಿ

ಪ್ರಗತಿ ಅಥವಾ ದಾಸ್ಯವಿಮೋಚನೆ – ೧೧ನೆಯ ಖಂಡ – ಆಸ್ಥೆ-ಕಾಳಜಿ

“ಹೆಚ್ಚು ಕೆಲಸಮಾಡುವವನಿಗಿಂತ ಕಾಳಜಿಪೂರ್‍ವಕ ಕೆಲಸ ಮಾಡುವವನು ನನಗೆ ಅತ್ಯಂತ ಪ್ರಿಯೆನಾಗುವನು” ಎಂದು ಓರ್ವ ಬ್ರಿಟಿಶ ಮಂತ್ರಿವರ್‍ಯನು ಅಂದಿದ್ದಾನೆ. ಆಚಾರ್ಯರು ಕುದುರೆಯ ಹಿಂದೆಬಿದ್ದದ್ದನ್ನೆಲ್ಲ ತಕ್ಕೊಂಡುಬಾ ಎಂದು ಹೇಳಿದ ಮಾತ್ರದಿಂದ ಬುದ್ಧಿಗೇಡಿ ಭಗವಂತನು ಕುದುರೆಯ ಲದ್ದಿಯನ್ನು ಕೂಡ ಹಸಿಬೆಯಲ್ಲಿ ತುಂಬಿತಂದಂತೆ, ಕಾರ್‍ಯಗಳ ಮಹತ್ವವನ್ನು ತಿಳಿಯದೆ ಕೆಲಸ ಮಾಡುವವರು ಬಹಳ. ಕಾರ್‍ಯದ ಮಹತ್ವ ತಿಳಿಯುವದಕ್ಕೆ ಮನಸ್ಸಿನಲ್ಲಿ ಆಸ್ಥೆ-ಕಾಳಜಿ ವಹಿಸಬೇಕಾಗುವದು. ಆಸ್ಥೆಯು ಬೆಳೆ ಬೆಳೆದಂತೆ ಪ್ರಯತ್ನಗಳು ಎಂದೂ ನಿರರ್‍ಥಕವಾಗುವದಿಲ್ಲ.

ಹಿಂದಕ್ಕೆ ಆಗಿ ಹೋದ ಮಂತ್ರಿವರ್‍ಯ ಯೋಗಂಧರಾಯಣ, ಅಮಾತ್ಯರಾಕ್ಷಸ ಮೊದಲಾದವರು ಅತ್ಯಂತ ಆಸ್ಥೆಯಿಂದ ಕೆಲಸಮಾಡುತ್ತಿದ್ದದರಿಂದಲೇ ಅವರು ಸುಪ್ರಸಿದ್ಧ ಪ್ರಧಾನರಾಗಿದ್ದರು. ಮೈಸೂರ ಮಾಜಿ ದಿವಾಣರಾದ ಸರ ಶೇಷಾದ್ರಿ ಅಯ್ಯನವರು ಒಳ್ಳೇ ಆಸ್ಥೆಯಿಂದ ಕಾರ್ಯಭಾರವನ್ನು ಸಾಗಿಸಿದ್ದರಿಂದಲೇ ಅಂಥ ಕಠಿಣ ಪ್ರಸಂಗದಲ್ಲಿ ಕೂಡಾ ಮೈಸೂರ ರಾಜ್ಯವು ಪ್ರಗತಿಯನ್ನು ಹೊಂದಿತು. ನಮ್ಮ ವಿಷಯಕ್ಕೇ ನಮ್ಮಲ್ಲಿ ಆಸ್ಥೆಯಿಲ್ಲದಿರಲು ಮಂದಿಯ ಬಗ್ಗೆ ನಾವು ಆಸ್ಥೆ ಪಡುವ ಬಗೆಯಾದರೂ ಹೇಗೆ?

“ತನ್ನಂತೆ ಪರರಬಗೆದೊಡೆ ಕೈಲಾಸಬಿನ್ನಣವಳ್ಳ್ಳು” ಎಂಬ ಸರ್ವಜ್ಞ ಕವಿಯ ಉಕ್ತಿಯು ಮನನೀಯವಾಗಿದೆ. ಖರೇ ಆಸ್ಥೆಯಿಂದಾಗಲಿ, ತೋರಿಕೆಯ ಡಂಭಾಚಾರದ ಆಸ್ಥೆಯಿಂದಾಗಲಿ ನಾವು ನಮ್ಮ ಕೆಲಸಗಳನು ಹೇಗಾದರೂ ಸಾಗಿಸಿಕೊಳ್ಳುತ್ತಿರುವೆವು. ಆದರೆ ಪರರ ಕೆಲಸದಲ್ಲಿ ನಮ್ಮ ಆ ಡಂಭಾಚಾರದ ಆಸ್ಥೆಯನ್ನು ಕೂಡ ಉಪಯೋಗಿಸ ಹೋಗದೆ, “ಹತ್ತಿದಲ್ಲಿ ಹತ್ತಿತು ಹಾರಿದಲ್ಲಿ ಹಾರಿತು” ಎನ್ನುವಂತೆ ದುರ್ಲಕ್ಷ್ಯಮಾಡುವೆವು. ಇದರಿಂದ ಕಾರ್ಯಕೆಟ್ಟು ಹಾನಿಯೊಗುವ ಮಾನಕ್ಕಿಂತ, ನಮ್ಮ ವೃತ್ತಿಯು ಕೆಟ್ಟು ಪ್ರಗತಿಹೀನವಾಗುವ ಮಾನವು ಹೆಚ್ಚಾಗುವದು. ಆದ್ದರಿಂದ ಪ್ರಗತಿಪರನು ಪ್ರಗತಿಹೊಂದುವದಕ್ಕಾಗಿ ಮಾಡಬೇಕಾದ ಕೆಲಸವನ್ನು ಒಳ್ಳೇ ಆಸ್ಥೆಯಿಂದ ಮಾಡಿ ಪ್ರಗತಿಹೊಂದಬೇಕು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧ್ಯಾನ
Next post ಆರದಿರು ದೀಪವೇ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys