ಧ್ಯಾನ

ಧ್ಯಾನದಲಿ ಪರಮಾತ್ಮನ ಕಾಣು
ಕಾಯಕದಲಿ ಶುದ್ಧತೆಯ ಕಾಣು
ಮಾತಿನಲ್ಲಿ ಸತ್ಯತೆ ಪಾಲಿಸು
ಜೀವನದಲಿ ಮಹತ್ವ ಸಾಧಿಸು

ಪೂಜೆಯೆಂಬುದಕ್ಕೆಂದು ಸಮಯವಿಲ್ಲ
ಸರ್ವಕಾಲಕ್ಕೂ ಜಪಿಸುವುದು ತಪ್ಪಲ್ಲ
ಯಾವುದೇ ಕಾಯಕದಲ್ಲೂ ದೇವನ ಸ್ಮರಿಸು
ಆ ಕಾರ್ಯ ದೈವಮಯವಾಗಿ ನಿರ್ಮಿಸು

ಶ್ವಾಸದ ಒಂದೊಂದು ಉಸಿರಲ್ಲೂ
ಉಚ್ಚರಿಸಬೇಕು ನಾಮ ಎಲ್ಲೆಲ್ಲೂ
ನಾವು ನರಕದತ್ತ ಸರಿವುದೇ ಪತನ
ಸ್ವರ್ಗದತ್ತ ವಾಲುವುದೆ ಜತನ

ನೀನು ಎಷ್ಟು ಜನರೊಂದಿಗೆ ಇದ್ದರೇನು!
ಯಾರು ನಿನ್ನ ಭಾರ ಹೊದಿಯುವರೇನು
ನಿನ್ನ ಕರ್ಮವೆಲ್ಲ ನಿನ್ನ ಬೆನ್ನ ಹಿಂದೆ
ನಿನ್ನ ಪುಣ್ಯವೆಲ್ಲ ಕಾಪಾಡುವದೊಂದೆ

ಎಷ್ಟೊತ್ತಿನವರೆಗೆ ಈ ನಿನ್ನ ಸಂತೆ
ಮರೆತೆ ಬಿಡುವುದೇ ಪರಮಾತ್ಮನಿಗೆ
ಹೌದು ಜಗವೆಲ್ಲ ಮೋಸಗೊಳಿಸಬಹುದೇನೊ
ಮರೆಯದಿರು ಮಾಣಿಕ್ಯ ವಿಠಲನಿಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿ ಬಯಸಿ ಜೀವವೇ
Next post ಪ್ರಗತಿ ಅಥವಾ ದಾಸ್ಯವಿಮೋಚನೆ – ೧೧ನೆಯ ಖಂಡ – ಆಸ್ಥೆ-ಕಾಳಜಿ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…