ಧ್ಯಾನ

ಧ್ಯಾನದಲಿ ಪರಮಾತ್ಮನ ಕಾಣು
ಕಾಯಕದಲಿ ಶುದ್ಧತೆಯ ಕಾಣು
ಮಾತಿನಲ್ಲಿ ಸತ್ಯತೆ ಪಾಲಿಸು
ಜೀವನದಲಿ ಮಹತ್ವ ಸಾಧಿಸು

ಪೂಜೆಯೆಂಬುದಕ್ಕೆಂದು ಸಮಯವಿಲ್ಲ
ಸರ್ವಕಾಲಕ್ಕೂ ಜಪಿಸುವುದು ತಪ್ಪಲ್ಲ
ಯಾವುದೇ ಕಾಯಕದಲ್ಲೂ ದೇವನ ಸ್ಮರಿಸು
ಆ ಕಾರ್ಯ ದೈವಮಯವಾಗಿ ನಿರ್ಮಿಸು

ಶ್ವಾಸದ ಒಂದೊಂದು ಉಸಿರಲ್ಲೂ
ಉಚ್ಚರಿಸಬೇಕು ನಾಮ ಎಲ್ಲೆಲ್ಲೂ
ನಾವು ನರಕದತ್ತ ಸರಿವುದೇ ಪತನ
ಸ್ವರ್ಗದತ್ತ ವಾಲುವುದೆ ಜತನ

ನೀನು ಎಷ್ಟು ಜನರೊಂದಿಗೆ ಇದ್ದರೇನು!
ಯಾರು ನಿನ್ನ ಭಾರ ಹೊದಿಯುವರೇನು
ನಿನ್ನ ಕರ್ಮವೆಲ್ಲ ನಿನ್ನ ಬೆನ್ನ ಹಿಂದೆ
ನಿನ್ನ ಪುಣ್ಯವೆಲ್ಲ ಕಾಪಾಡುವದೊಂದೆ

ಎಷ್ಟೊತ್ತಿನವರೆಗೆ ಈ ನಿನ್ನ ಸಂತೆ
ಮರೆತೆ ಬಿಡುವುದೇ ಪರಮಾತ್ಮನಿಗೆ
ಹೌದು ಜಗವೆಲ್ಲ ಮೋಸಗೊಳಿಸಬಹುದೇನೊ
ಮರೆಯದಿರು ಮಾಣಿಕ್ಯ ವಿಠಲನಿಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿ ಬಯಸಿ ಜೀವವೇ
Next post ಪ್ರಗತಿ ಅಥವಾ ದಾಸ್ಯವಿಮೋಚನೆ – ೧೧ನೆಯ ಖಂಡ – ಆಸ್ಥೆ-ಕಾಳಜಿ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

cheap jordans|wholesale air max|wholesale jordans|wholesale jewelry|wholesale jerseys