Home / ಕವನ / ಕವಿತೆ / ಲೋಕದ ರೀತಿ

ಲೋಕದ ರೀತಿ

ಲೋಕ ನೀತಿ ವಿಧ ವಿಧ ರೀತಿ
ಮೇಲೇ ಕಾಣದು ಸತ್ಯದ ಜ್ಯೋತಿ || ಪ ||

ಕಲ್ಲುಗಳೆಲ್ಲ ರತ್ನಗಳಲ್ಲ
ಮಣ್ಣುಗಳೆಲ್ಲ ಸತ್ವಗಳಲ್ಲ
ಗುಡ್ಡಗಳೆಲ್ಲ ಲೋಹಾದ್ರಿಯಲ್ಲ
ಕಾಡುಗಳೆಲ್ಲ ಶ್ರೀಗಂಧವಲ್ಲ || ೧ ||

ಮೋಡಗಳೆಲ್ಲ ಮಳೆಯವು ಅಲ್ಲ
ಜಾಡುಗಳೆಲ್ಲ ಸತ್ಪಥವಲ್ಲ
ಹೂವುಗಳೆಲ್ಲ ವಾಸನೆಯಲ್ಲ
ಹಣ್ಣುಗಳೆಲ್ಲ ಸಿಹಿರಸವಲ್ಲ || ೨ ||

ಮಂದಿಗಳೆಲ್ಲ ಮಾನವರಲ್ಲ
ಮಾನವರೆಲ್ಲ ಮಹಾತ್ಮರಲ್ಲ
ಕಲಿತವರೆಲ್ಲ ಜಾಣರು ಅಲ್ಲ
ಜಾಣರು ಎಲ್ಲ ಜ್ಞಾನಿಗಳಲ್ಲ || ೩ ||

ದನಗಳು ಎಲ್ಲ ಹೈನುಗಳಲ್ಲ
ಊರುಗಳೆಲ್ಲ ನಂದನವಲ್ಲ
ಹುಟ್ಟಿದ್ದು ಎಲ್ಲ ಶಾಶ್ವತವಲ್ಲ
ಬದುಕುಗಳೆಲ್ಲ ಬಂಗಾರವಲ್ಲ || ೪ ||

ಹೆಣ್ಣುಗಳೆಲ್ಲ ಚೆಲುವೆಯರಲ್ಲ
ಗಂಡುಗಳೆಲ್ಲ ಧೀರರು ಅಲ್ಲ
ಕನಸುಗಳೆಲ್ಲ ಕೈಗೂಡೊದಿಲ್ಲ
ಮನಸುಗಳೆಲ್ಲ ತಿಳಿಹೊಳೆಯಲ್ಲ || ೫ ||

ಪ್ರತಿ ಹಣವೆಲ್ಲ ಬೆವರಿನದಲ್ಲ
ಪ್ರತಿ ನಡೆ ಎಲ್ಲ ಮುನ್ನಡೆಯಲ್ಲ
ಬರೆದದ್ದು ಎಲ್ಲ ಕಾವ್ಯವು ಅಲ್ಲ
ಹಾಡುವುದೆಲ್ಲ ಸಂಗೀತವಲ್ಲ || ೬ ||

ನೋಟಗಳೆಲ್ಲ ಕೂಟಗಳಲ್ಲ
ಕೂಟಗಳೆಲ್ಲ ಸುರತಗಳಲ್ಲ
ಬೀಜಗಳೆಲ್ಲ ಸಂತಾನವಲ್ಲ
ಸಂತತಿ ಎಲ್ಲ ಸಂಸ್ಕಾರವಲ್ಲ || ೭ ||

ಎಳ್ಳಲಿ ಎಣ್ಣೆ ಹಾಲಲಿ ಬೆಣ್ಣೆ
ತೆಂಗಲಿ ನೀರು ಗಣಿಯಲಿ ಚಿನ್ನಾ
ಗೊಳ್ಳಲಿ ತಿರುಳು ಇರುವಾ ರೀತಿ
ಸತ್ಯವು ಸುಲಭಕೆ ಸಿಗದೋ ಅಣ್ಣ || ೮ ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...