ಲೋಕದ ರೀತಿ

ಲೋಕ ನೀತಿ ವಿಧ ವಿಧ ರೀತಿ
ಮೇಲೇ ಕಾಣದು ಸತ್ಯದ ಜ್ಯೋತಿ || ಪ ||

ಕಲ್ಲುಗಳೆಲ್ಲ ರತ್ನಗಳಲ್ಲ
ಮಣ್ಣುಗಳೆಲ್ಲ ಸತ್ವಗಳಲ್ಲ
ಗುಡ್ಡಗಳೆಲ್ಲ ಲೋಹಾದ್ರಿಯಲ್ಲ
ಕಾಡುಗಳೆಲ್ಲ ಶ್ರೀಗಂಧವಲ್ಲ || ೧ ||

ಮೋಡಗಳೆಲ್ಲ ಮಳೆಯವು ಅಲ್ಲ
ಜಾಡುಗಳೆಲ್ಲ ಸತ್ಪಥವಲ್ಲ
ಹೂವುಗಳೆಲ್ಲ ವಾಸನೆಯಲ್ಲ
ಹಣ್ಣುಗಳೆಲ್ಲ ಸಿಹಿರಸವಲ್ಲ || ೨ ||

ಮಂದಿಗಳೆಲ್ಲ ಮಾನವರಲ್ಲ
ಮಾನವರೆಲ್ಲ ಮಹಾತ್ಮರಲ್ಲ
ಕಲಿತವರೆಲ್ಲ ಜಾಣರು ಅಲ್ಲ
ಜಾಣರು ಎಲ್ಲ ಜ್ಞಾನಿಗಳಲ್ಲ || ೩ ||

ದನಗಳು ಎಲ್ಲ ಹೈನುಗಳಲ್ಲ
ಊರುಗಳೆಲ್ಲ ನಂದನವಲ್ಲ
ಹುಟ್ಟಿದ್ದು ಎಲ್ಲ ಶಾಶ್ವತವಲ್ಲ
ಬದುಕುಗಳೆಲ್ಲ ಬಂಗಾರವಲ್ಲ || ೪ ||

ಹೆಣ್ಣುಗಳೆಲ್ಲ ಚೆಲುವೆಯರಲ್ಲ
ಗಂಡುಗಳೆಲ್ಲ ಧೀರರು ಅಲ್ಲ
ಕನಸುಗಳೆಲ್ಲ ಕೈಗೂಡೊದಿಲ್ಲ
ಮನಸುಗಳೆಲ್ಲ ತಿಳಿಹೊಳೆಯಲ್ಲ || ೫ ||

ಪ್ರತಿ ಹಣವೆಲ್ಲ ಬೆವರಿನದಲ್ಲ
ಪ್ರತಿ ನಡೆ ಎಲ್ಲ ಮುನ್ನಡೆಯಲ್ಲ
ಬರೆದದ್ದು ಎಲ್ಲ ಕಾವ್ಯವು ಅಲ್ಲ
ಹಾಡುವುದೆಲ್ಲ ಸಂಗೀತವಲ್ಲ || ೬ ||

ನೋಟಗಳೆಲ್ಲ ಕೂಟಗಳಲ್ಲ
ಕೂಟಗಳೆಲ್ಲ ಸುರತಗಳಲ್ಲ
ಬೀಜಗಳೆಲ್ಲ ಸಂತಾನವಲ್ಲ
ಸಂತತಿ ಎಲ್ಲ ಸಂಸ್ಕಾರವಲ್ಲ || ೭ ||

ಎಳ್ಳಲಿ ಎಣ್ಣೆ ಹಾಲಲಿ ಬೆಣ್ಣೆ
ತೆಂಗಲಿ ನೀರು ಗಣಿಯಲಿ ಚಿನ್ನಾ
ಗೊಳ್ಳಲಿ ತಿರುಳು ಇರುವಾ ರೀತಿ
ಸತ್ಯವು ಸುಲಭಕೆ ಸಿಗದೋ ಅಣ್ಣ || ೮ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇಶವೆಂದರೆ
Next post ದೇವಯ್ಯ ಹರವೆ ಅವರ ನನ್ನ ದೃಷ್ಟಿಯಲ್ಲಿ ಮಾರ್ಕ್ಸ್‌ವಾದ ಮತ್ತು ಸಾಹಿತ್ಯ : ಒಂದು ಪ್ರತಿಕ್ರಿಯೆ

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…