ದೇಶವೆಂದರೆ

ಜೀವವೆಂದರೆ ಬರಿ ಒಡಲು ಅಲ್ಲ
ಒಡಲಿಲ್ಲದೆ ಜೀವವು ಇಲ್ಲ
ಒಡಲು ಜೀವಗಳ ಸಂಬಂಧವೇ
ಜೀವನಾನುಬಂಧ
ಅದು ಎನಿತು ಸುಂದರ

ಫಲವೆಂದರೆ ಬರಿ ವೃಕ್ಷವಲ್ಲ
ವೃಕ್ಷವಿಲ್ಲದೆ ಫಲವು ಇಲ್ಲ
ವೃಕ್ಷ ಫಲಗಳ ಸಂಬಂಧವೇ
ಜೀವನಾನುಬಂಧ
ಅದು ಎನಿತು ಸುಂದರ

ಅರ್ಥವೆಂದರೆ ಬರಿ ವಾಕ್ಯವಲ್ಲ
ವಾಕ್ಯವಿಲ್ಲದೆ ಅರ್ಥವು ಇಲ್ಲ
ವಾಗರ್ಥ ಸಂಬಂಧ
ಅದು ಎನಿತು ಸುಂದರ

ದಯೆಯೆಂದರೆ ಬರಿ ದಾನವಲ್ಲ
ದಾನವಿಲ್ಲದೆ ದಯೆಯು ಇಲ್ಲ
ದಾನ ದಯೆಗಳ ಸಂಬಂಧ
ಅದು ಎನಿತು ಸುಂದರ

ಪ್ರೀತಿಯೆಂದರೆ ಬರಿ ನೀತಿಯಲ್ಲ
ನೀತಿಯಿಲ್ಲದೆ ಪ್ರೀತಿಯು ಇಲ್ಲ
ನೀತಿ ಪ್ರೀತಿಗಳ ಸಂಬಂಧ
ಅದು ಎನಿತು ಸುಂದರ

ಜ್ಞಾನವೆಂದರೆ ಬರಿ ಯೋಗವಲ್ಲ
ಯೋಗವಿಲ್ಲದೆ ಜ್ಞಾನವು ಇಲ್ಲ
ಯೋಗ ಜ್ಞಾನ ಸಂಬಂಧ
ಅದು ಎನಿತು ಸುಂದರ
*****

One thought on “0

  1. ತಿರುಮಲೇಸರು ಮಾಡುವ ಹಲ ಕೆಲವು ಪ್ರಯೋಗಗಳಲ್ಲಿ ಈ ಕವಿತೆಯೂಒಂದು. ಸಾಮಾನ್ಯ ವಸ್ತುವನ್ನು ಕಾವ್ಯಮಯವಾಗಿ ನೋಡುವ,ಅನೇಕ ಒಳಾರ್ಥಗಳನ್ನು ಪ್ತಿಪಾದಿಸುವ ಅವರ ಅನೇಕ ಕವಿತೆಗಳಲ್ಲಿ ಇದೂ ಒಂದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೫
Next post ಲೋಕದ ರೀತಿ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…