ಇಂಥ ಮಣ್ಣಿನಲಿ

ಇಂಥ ಮಣ್ಣಿನಲಿ ಹುಟ್ಟಿ ಬಂದಿಹುದು
ನನ್ನ ಪುಣ್ಯ ಪುಣ್ಯ
ಎಂಥ ಸುಕೃತುವೋ ಇದನು ಸವಿಯುವುದು
ನಾನೆ ಧನ್ಯ ಧನ್ಯ || ೧ ||

ಎತ್ತ ನೋಡಿದರು ಪ್ರಕೃತಿ ಮಾತೆಯ
ಭವ್ಯ ದಿವ್ಯ ರೂಪಾ
ಅವಳ ಮಡಿಲಿನಲಿ ನಲ್ಮೆವಡೆಯುವಾ
ಮಗುವಿನಾ ಕಲಾಪ || ೨ ||

ಕಣ್ಣು ಹಾಯಿಸುಲು ಎಂಟು ದಿಕ್ಕಿನಲು
ನೀಲವರ್ಣ ಗಿರಿಯು
ಶಾಮ ಸುಂದರನೆ ನನ್ನ ರಕ್ಷಣೆಗೆ
ಬಳಸಿದಂತೆ ಬಾಹು || ೩ ||

ಪ್ರತಿಕ್ಷಣದಲೂ ಇತ್ತ ನೋಡು
ನನ್ನಂತೆ ಎತ್ತರಾಗು
ಶಿಲೆಯ ಮಣ್ಣಿನಲೆ ಹಸಿರು ಕುಸುರಿಸುವ
ಚಿಗಾರನಾಗು || ೪ ||

ಎಂದು ಸಾರುತಿದೆ ಗಿರಿಯ ಗಾಳಿ
ಅಲ್ಲಿಂದ ಇತ್ತ ಬೀಸಿ
ಕಲ್ಲಿನಲ್ಲು ಚೈತನ್ಯದುಸಿರ
ತುಂಬುತ್ತ ಭಾವ ಬೆರೆಸಿ || ೫ ||

ಗುಡ್ಡವಲ್ಲವಿದು ದೊಡ್ಡತತ್ವ
ಬೋಧಿಸುವ ದೇವಗುರುವು
ಗಗನಚುಂಬಿ ಉತ್ತುಂಗ ಅಂಗನೀ
ನೆಲವು ಪಡೆದ ವರವು || ೬ ||

ಚೆಲುವು ಬೇಕು ಬಲ್ ಬಲವು ಬೇಕು
ಜೀವಿಸಲು ಒಲವು ಬೇಕೊ
ಹಲವು ಮಾತೇಕೆ ಇದೇ ಸಗ್ಗ
ಇದಕಿಂತ ಹೆಚ್ಚು ಏಕೋ || ೭ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಲ್ತಸ್ಹಾರ್ ಬಾಲ್ತಸ್ಹಾರ್
Next post ಹೊಸಗನ್ನಡ ಕಾವ್ಯ ಮತ್ತು ಪ್ರಗತಿಪರ ಚಿಂತನೆ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys