ಇಂಥ ಮಣ್ಣಿನಲಿ

ಇಂಥ ಮಣ್ಣಿನಲಿ ಹುಟ್ಟಿ ಬಂದಿಹುದು
ನನ್ನ ಪುಣ್ಯ ಪುಣ್ಯ
ಎಂಥ ಸುಕೃತುವೋ ಇದನು ಸವಿಯುವುದು
ನಾನೆ ಧನ್ಯ ಧನ್ಯ || ೧ ||

ಎತ್ತ ನೋಡಿದರು ಪ್ರಕೃತಿ ಮಾತೆಯ
ಭವ್ಯ ದಿವ್ಯ ರೂಪಾ
ಅವಳ ಮಡಿಲಿನಲಿ ನಲ್ಮೆವಡೆಯುವಾ
ಮಗುವಿನಾ ಕಲಾಪ || ೨ ||

ಕಣ್ಣು ಹಾಯಿಸುಲು ಎಂಟು ದಿಕ್ಕಿನಲು
ನೀಲವರ್ಣ ಗಿರಿಯು
ಶಾಮ ಸುಂದರನೆ ನನ್ನ ರಕ್ಷಣೆಗೆ
ಬಳಸಿದಂತೆ ಬಾಹು || ೩ ||

ಪ್ರತಿಕ್ಷಣದಲೂ ಇತ್ತ ನೋಡು
ನನ್ನಂತೆ ಎತ್ತರಾಗು
ಶಿಲೆಯ ಮಣ್ಣಿನಲೆ ಹಸಿರು ಕುಸುರಿಸುವ
ಚಿಗಾರನಾಗು || ೪ ||

ಎಂದು ಸಾರುತಿದೆ ಗಿರಿಯ ಗಾಳಿ
ಅಲ್ಲಿಂದ ಇತ್ತ ಬೀಸಿ
ಕಲ್ಲಿನಲ್ಲು ಚೈತನ್ಯದುಸಿರ
ತುಂಬುತ್ತ ಭಾವ ಬೆರೆಸಿ || ೫ ||

ಗುಡ್ಡವಲ್ಲವಿದು ದೊಡ್ಡತತ್ವ
ಬೋಧಿಸುವ ದೇವಗುರುವು
ಗಗನಚುಂಬಿ ಉತ್ತುಂಗ ಅಂಗನೀ
ನೆಲವು ಪಡೆದ ವರವು || ೬ ||

ಚೆಲುವು ಬೇಕು ಬಲ್ ಬಲವು ಬೇಕು
ಜೀವಿಸಲು ಒಲವು ಬೇಕೊ
ಹಲವು ಮಾತೇಕೆ ಇದೇ ಸಗ್ಗ
ಇದಕಿಂತ ಹೆಚ್ಚು ಏಕೋ || ೭ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಲ್ತಸ್ಹಾರ್ ಬಾಲ್ತಸ್ಹಾರ್
Next post ಹೊಸಗನ್ನಡ ಕಾವ್ಯ ಮತ್ತು ಪ್ರಗತಿಪರ ಚಿಂತನೆ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…