ಇಂಥ ಮಣ್ಣಿನಲಿ

ಇಂಥ ಮಣ್ಣಿನಲಿ ಹುಟ್ಟಿ ಬಂದಿಹುದು
ನನ್ನ ಪುಣ್ಯ ಪುಣ್ಯ
ಎಂಥ ಸುಕೃತುವೋ ಇದನು ಸವಿಯುವುದು
ನಾನೆ ಧನ್ಯ ಧನ್ಯ || ೧ ||

ಎತ್ತ ನೋಡಿದರು ಪ್ರಕೃತಿ ಮಾತೆಯ
ಭವ್ಯ ದಿವ್ಯ ರೂಪಾ
ಅವಳ ಮಡಿಲಿನಲಿ ನಲ್ಮೆವಡೆಯುವಾ
ಮಗುವಿನಾ ಕಲಾಪ || ೨ ||

ಕಣ್ಣು ಹಾಯಿಸುಲು ಎಂಟು ದಿಕ್ಕಿನಲು
ನೀಲವರ್ಣ ಗಿರಿಯು
ಶಾಮ ಸುಂದರನೆ ನನ್ನ ರಕ್ಷಣೆಗೆ
ಬಳಸಿದಂತೆ ಬಾಹು || ೩ ||

ಪ್ರತಿಕ್ಷಣದಲೂ ಇತ್ತ ನೋಡು
ನನ್ನಂತೆ ಎತ್ತರಾಗು
ಶಿಲೆಯ ಮಣ್ಣಿನಲೆ ಹಸಿರು ಕುಸುರಿಸುವ
ಚಿಗಾರನಾಗು || ೪ ||

ಎಂದು ಸಾರುತಿದೆ ಗಿರಿಯ ಗಾಳಿ
ಅಲ್ಲಿಂದ ಇತ್ತ ಬೀಸಿ
ಕಲ್ಲಿನಲ್ಲು ಚೈತನ್ಯದುಸಿರ
ತುಂಬುತ್ತ ಭಾವ ಬೆರೆಸಿ || ೫ ||

ಗುಡ್ಡವಲ್ಲವಿದು ದೊಡ್ಡತತ್ವ
ಬೋಧಿಸುವ ದೇವಗುರುವು
ಗಗನಚುಂಬಿ ಉತ್ತುಂಗ ಅಂಗನೀ
ನೆಲವು ಪಡೆದ ವರವು || ೬ ||

ಚೆಲುವು ಬೇಕು ಬಲ್ ಬಲವು ಬೇಕು
ಜೀವಿಸಲು ಒಲವು ಬೇಕೊ
ಹಲವು ಮಾತೇಕೆ ಇದೇ ಸಗ್ಗ
ಇದಕಿಂತ ಹೆಚ್ಚು ಏಕೋ || ೭ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಲ್ತಸ್ಹಾರ್ ಬಾಲ್ತಸ್ಹಾರ್
Next post ಹೊಸಗನ್ನಡ ಕಾವ್ಯ ಮತ್ತು ಪ್ರಗತಿಪರ ಚಿಂತನೆ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…