Home / ಕಥೆ / ಸಣ್ಣ ಕಥೆ / ರಾಜ ಒಡೆಯರು ಆನೆಯನ್ನು ಬಿಟ್ಟಿದ್ದು

ರಾಜ ಒಡೆಯರು ಆನೆಯನ್ನು ಬಿಟ್ಟಿದ್ದು

ಕಾರುಗಹಳ್ಳಿಯ ಪಾಳಯಗಾರರು ಮೈಸೂರಿನಿಂದ ಓಡಿಸಿದಮೇಲೆ ಬೆಟ್ಟದ ಒಡೆಯರು ಕತ್ತಿಯನ್ನು ಹಿಡಿದು ರಾಜ ಒಡೆಯರಿಗಾಗಿ ಅನೇಕ ಜಯಗಳನ್ನು ಪಡೆದರು. ರಾಜ ಒಡೆಯರ ಪ್ರಾಬಲ್ಯವನ್ನು ಶ್ರೀರಂಗಪಟ್ಟಣದ ಅಧಿಕಾರಿಯು ಸಹಿಸಲಿಲ್ಲ; ಅದನ್ನು ತಗ್ಗಿಸುವ ಯೋಚನೆಯಿಂದ ಮೈಸೂರಿನ ಬಳಿ ಇದ್ದ ಕೆಸರೆಯೆಂಬ ಕೋಟೆಯನ್ನು ಹಿಡಿಯಲು ಸೈನ್ಯವನ್ನು ಕಳುಹಿಸಿದನು. ಆ ಅಧಿರಾಜನ ಸೈನ್ಯವನ್ನು ಬೆಟ್ಟದ ಒಡೆಯರೇ ಎದುರಿಸಿ ಸೋಲಿಸಿದರು. ಕೆಸರೆಯ ಕೋಟೆಯನ್ನು ಕೊಳ್ಳೆ ಹೊಡೆದರು. ಕೊಳ್ಳೆಯಲ್ಲಿ ಉತ್ತಮವಾದ ಒಂದಾನೆಯು ಸಿಕ್ಕಿತು. ಆ ಆನೆಯನ್ನು ತಂದು ಬೆಟ್ಟದ ಒಡೆಯರು ರಾಜ ಒಡೆಯರಿಗೆ ಒಪ್ಪಿಸಿದರು.

ರಾಜ ಒಡೆಯರು ಆನೆಯನ್ನು ಸಾಕಿಕೊಳ್ಳುವುದು ಕಷ್ಟವಾಗಿತ್ತು. ಇಟ್ಟುಕೊಂಡರೆ ವೃಥಾ ವೆಚ್ಚವಾಗುವುದೆಂದು ಯೋಚಿಸುತ್ತ ” ಈ ಆನೆಗಾಗಿ ವೆಚ್ಚ ಮಾಡತಕ್ಕ ಹಣದಿಂದ ಮೂವತ್ತು ಸೈನಿಕರ ಸಂಬಳಗಳನ್ನು ಕೊಡಬಹುದು ಆದ್ದರಿಂದ ಮೂವತ್ತು ಸೈನಿಕರನ್ನು ಸೇನೆಯಲ್ಲಿ ಹೆಚ್ಚಿಸೋಣ. ಆನೆಯನ್ನು ಕರೆದು ಕೊಂಡುಹೋಗಿ ಶ್ರೀರಂಗಪಟ್ಟಣದ ರಾಯರಿಗೆ ಕೊಟ್ಟುಬಿಡೋಣ” ಎಂದರು. ಈ ರೀತಿಯಲ್ಲಿ ಎದುರುಬಿದ್ದ ತಪ್ಪನ್ನು ತೊಡೆದುಹಾಕಲು, ರಾಜ ಒಡೆಯರು ಸಂಧಾನಮಾಡಿ ತಮ್ಮ ಹಣವನ್ನು ವ್ಯರ್ಥವ್ಯಯಕ್ಕೆ ಕೊಡದೆ ಇದ್ದರು. ಶ್ರೀರಂಗಪಟ್ಟಣದ ರಾಯನು ಅನೆಯನ್ನು ಸ್ವೀಕರಿಸಿ ಸಮಾಧಾನಪಟ್ಟು, ರಾಜ ಒಡೆಯರನ್ನು ಮನ್ನಿಸಿದನು. ತರುವಾಯ, ತಮ್ಮ ಭೂಮಿಗಳಲ್ಲಿ ಇತರರ ತೊಂದರೆ ಹೆಚ್ಚಿತೆಂದು ಜಾಣತನದಿಂದ ಹೇಳಿ ರಾಜ ಒಡೆಯರು ಕೊಡುತ್ತಿದ್ದ ಪೊಗದಿಯನ್ನು ನಿಲ್ಲಿಸಿದರು. ಮತ್ತು ಹೊಸದಾಗಿ ಒಂದೆರಡು ಹಳ್ಳಿಗಳನ್ನು ರಾಜನಿಂದ ಪಡೆದರು.
*****
[ವಿಲ್ಕ್ಸ್, ಸಂ.೧; ಪುಟ ೨೪]

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...