Home / ಕಥೆ / ಸಣ್ಣ ಕಥೆ / ರಾಜ ಒಡೆಯರು ಆನೆಯನ್ನು ಬಿಟ್ಟಿದ್ದು

ರಾಜ ಒಡೆಯರು ಆನೆಯನ್ನು ಬಿಟ್ಟಿದ್ದು

ಕಾರುಗಹಳ್ಳಿಯ ಪಾಳಯಗಾರರು ಮೈಸೂರಿನಿಂದ ಓಡಿಸಿದಮೇಲೆ ಬೆಟ್ಟದ ಒಡೆಯರು ಕತ್ತಿಯನ್ನು ಹಿಡಿದು ರಾಜ ಒಡೆಯರಿಗಾಗಿ ಅನೇಕ ಜಯಗಳನ್ನು ಪಡೆದರು. ರಾಜ ಒಡೆಯರ ಪ್ರಾಬಲ್ಯವನ್ನು ಶ್ರೀರಂಗಪಟ್ಟಣದ ಅಧಿಕಾರಿಯು ಸಹಿಸಲಿಲ್ಲ; ಅದನ್ನು ತಗ್ಗಿಸುವ ಯೋಚನೆಯಿಂದ ಮೈಸೂರಿನ ಬಳಿ ಇದ್ದ ಕೆಸರೆಯೆಂಬ ಕೋಟೆಯನ್ನು ಹಿಡಿಯಲು ಸೈನ್ಯವನ್ನು ಕಳುಹಿಸಿದನು. ಆ ಅಧಿರಾಜನ ಸೈನ್ಯವನ್ನು ಬೆಟ್ಟದ ಒಡೆಯರೇ ಎದುರಿಸಿ ಸೋಲಿಸಿದರು. ಕೆಸರೆಯ ಕೋಟೆಯನ್ನು ಕೊಳ್ಳೆ ಹೊಡೆದರು. ಕೊಳ್ಳೆಯಲ್ಲಿ ಉತ್ತಮವಾದ ಒಂದಾನೆಯು ಸಿಕ್ಕಿತು. ಆ ಆನೆಯನ್ನು ತಂದು ಬೆಟ್ಟದ ಒಡೆಯರು ರಾಜ ಒಡೆಯರಿಗೆ ಒಪ್ಪಿಸಿದರು.

ರಾಜ ಒಡೆಯರು ಆನೆಯನ್ನು ಸಾಕಿಕೊಳ್ಳುವುದು ಕಷ್ಟವಾಗಿತ್ತು. ಇಟ್ಟುಕೊಂಡರೆ ವೃಥಾ ವೆಚ್ಚವಾಗುವುದೆಂದು ಯೋಚಿಸುತ್ತ ” ಈ ಆನೆಗಾಗಿ ವೆಚ್ಚ ಮಾಡತಕ್ಕ ಹಣದಿಂದ ಮೂವತ್ತು ಸೈನಿಕರ ಸಂಬಳಗಳನ್ನು ಕೊಡಬಹುದು ಆದ್ದರಿಂದ ಮೂವತ್ತು ಸೈನಿಕರನ್ನು ಸೇನೆಯಲ್ಲಿ ಹೆಚ್ಚಿಸೋಣ. ಆನೆಯನ್ನು ಕರೆದು ಕೊಂಡುಹೋಗಿ ಶ್ರೀರಂಗಪಟ್ಟಣದ ರಾಯರಿಗೆ ಕೊಟ್ಟುಬಿಡೋಣ” ಎಂದರು. ಈ ರೀತಿಯಲ್ಲಿ ಎದುರುಬಿದ್ದ ತಪ್ಪನ್ನು ತೊಡೆದುಹಾಕಲು, ರಾಜ ಒಡೆಯರು ಸಂಧಾನಮಾಡಿ ತಮ್ಮ ಹಣವನ್ನು ವ್ಯರ್ಥವ್ಯಯಕ್ಕೆ ಕೊಡದೆ ಇದ್ದರು. ಶ್ರೀರಂಗಪಟ್ಟಣದ ರಾಯನು ಅನೆಯನ್ನು ಸ್ವೀಕರಿಸಿ ಸಮಾಧಾನಪಟ್ಟು, ರಾಜ ಒಡೆಯರನ್ನು ಮನ್ನಿಸಿದನು. ತರುವಾಯ, ತಮ್ಮ ಭೂಮಿಗಳಲ್ಲಿ ಇತರರ ತೊಂದರೆ ಹೆಚ್ಚಿತೆಂದು ಜಾಣತನದಿಂದ ಹೇಳಿ ರಾಜ ಒಡೆಯರು ಕೊಡುತ್ತಿದ್ದ ಪೊಗದಿಯನ್ನು ನಿಲ್ಲಿಸಿದರು. ಮತ್ತು ಹೊಸದಾಗಿ ಒಂದೆರಡು ಹಳ್ಳಿಗಳನ್ನು ರಾಜನಿಂದ ಪಡೆದರು.
*****
[ವಿಲ್ಕ್ಸ್, ಸಂ.೧; ಪುಟ ೨೪]

Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...