ಎಲ್ಲಿಹನು ನನ್ನ ಪತಿ

ಓ ಗಿರಿಯೆ ಮರಗಳೇ ಓ ಜೀವ ಜೀವಗಳೆ
ನನ್ನೊಡೆಯ ಎಲ್ಲಿಹನು ಬೇಗ ಪೇಳಿ
ಸಾಯುತಿಹೆ ತರಹರಿಸಿ ನಿರ್ಜೀವವಾಗಿರುವೆ
ಅವನಿಲ್ಲದಾನಿನ್ನು ಹೇಗೆ ಇರಲಿ || ೧ ||

ಬಾವಿಯಲಿ ಜಲವೆಲ್ಲ ಬತ್ತಿ ಹೋದಂತಿಹುದು
ಹಣ್ಣಿನಲಿ ರಸವೆಲ್ಲ ಒಣಗಿರುವುದು
ದೀಪದಲಿ ಎಣ್ಣೆಯೇ ತಿರಿಹೋಗಿಹುದಲ್ಲ
ಬಾಳ ಬಳ್ಳಿಯ ರಸವು ಇಂಗಿರುವುದು || ೨ ||

ಇಷ್ಟು ದಿನ ಅವನಿದ್ದ, ಇದ್ದಂತೆ ಇದ್ದಿಲ್ಲ,
ಈಗ ಅವನಿಲ್ಲದೇ ಬರಿದಾಗಿದೆ
ಗಂಡ ಸತ್ತ ಮೇಲೆ ಹೆಂಡತಿಯು ಜಾಣಳೆ
ಕಳಕೊಂಡು ಹುಡುಕುತಿಹೆ ಸಿಗದಾಗಿದೆ || ೩ ||

ಯಾವುದಕೆ ಸಿಟ್ಟಾಗಿ ಹೋಗಿಹನೊ ನನ್ನ ದೊರೆ
ಎನ್ನ ಸಿರಿ ಎನ್ನ ಬಲ ಸರ್ವಸ್ವವು
ಅವನಿಲ್ಲದಿರೆ ನಾನು ಜೀವ ಹಿಡಿದಿರಲಾರೆ
ಬಾವಿಯೋ ಕೆರೆ ತೊರೆಯೊ ಕರೆಯುತಿಹವು || ೪ ||

ಸತ್ತಂತೆ ಬದುಕಿರುವ ಈ ಬಾಳಲೇನಿಹುದು
ಸತ್ತು ಹುಟ್ಟುವ ಇಂಥ ಬಾಳು ಸಾಕು
ಬಿಟ್ಟು ಬಿಟ್ಟೋಡಿದರೆ ಆಳುವಾ ಪತಿದೇವ
ಅಳಬೇಕೊ ನಗಬೇಕೋ ಸಾಕುಸಾಕು || ೫ ||

ಯಾವ ಪ್ರಭುವಿಂದೆನ್ನ ಮಾಂಗಲ್ಯ ಸೌಭಾಗ್ಯ
ಯಾವ ಕೈಯಾಸರೆಯೆ ನನ್ನ ಉಸಿರು
ಅವನನ್ನು ಕಳಕೊಂಡು ಇನ್ನೆಲ್ಲಿ ಸೌಭಾಗ್ಯ
ಕೆಳಗೆ ಮೇಲಾಗುತಿದೆ ಜೀವದುಸಿರು || ೬ ||

ಯೌವನದ ದೇಹವಿದೆ ಅಂದವಿದೆ ಚೆಂದವಿದೆ
ಮನೆಯೊಳಗೆ ಸಿರಿಸಂಪದೆಲ್ಲವಿಹುದು
ಉಂಡು ಉಡಲಿಕ್ಕೆ ಕೊರೆಯೆ ತಿಂದುತೇಗಲು ಅರೆಯೆ
ಏನಿದ್ದು ಎಲ್ಲವೂ ಬರಿದೊ ಬರಿದು || ೭ ||

ನನ್ನ ಕೂಗನ್ನಷ್ಟು ಕೇಳುವಿರ ಗೆಳತಿಯರೆ
ಕೇಳಿ ಎದೆಯಳಲನ್ನು ತೋಡಿಕೊಳುವೆ
ಏನಾದರೊಂದಿಷ್ಟು ಸಾಂತ್ವನವ ಹೇಳಿರಿ
ದುರ್ಭಾಗ್ಯೆ ನೊಂದವಳು ಬೇಡಿಕೊಳುವೆ || ೮ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಹ-ಪರ
Next post ಫ್ರಾನ್ಸಿಸ್ ಬೇಕನ್‌ನ “Of Studies” ಅಧ್ಯಯನ ಕುರಿತ ಮಾಹಿತಿ ಕೈಪಿಡಿ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

cheap jordans|wholesale air max|wholesale jordans|wholesale jewelry|wholesale jerseys