ಎಲ್ಲಿಹನು ನನ್ನ ಪತಿ

ಓ ಗಿರಿಯೆ ಮರಗಳೇ ಓ ಜೀವ ಜೀವಗಳೆ
ನನ್ನೊಡೆಯ ಎಲ್ಲಿಹನು ಬೇಗ ಪೇಳಿ
ಸಾಯುತಿಹೆ ತರಹರಿಸಿ ನಿರ್ಜೀವವಾಗಿರುವೆ
ಅವನಿಲ್ಲದಾನಿನ್ನು ಹೇಗೆ ಇರಲಿ || ೧ ||

ಬಾವಿಯಲಿ ಜಲವೆಲ್ಲ ಬತ್ತಿ ಹೋದಂತಿಹುದು
ಹಣ್ಣಿನಲಿ ರಸವೆಲ್ಲ ಒಣಗಿರುವುದು
ದೀಪದಲಿ ಎಣ್ಣೆಯೇ ತಿರಿಹೋಗಿಹುದಲ್ಲ
ಬಾಳ ಬಳ್ಳಿಯ ರಸವು ಇಂಗಿರುವುದು || ೨ ||

ಇಷ್ಟು ದಿನ ಅವನಿದ್ದ, ಇದ್ದಂತೆ ಇದ್ದಿಲ್ಲ,
ಈಗ ಅವನಿಲ್ಲದೇ ಬರಿದಾಗಿದೆ
ಗಂಡ ಸತ್ತ ಮೇಲೆ ಹೆಂಡತಿಯು ಜಾಣಳೆ
ಕಳಕೊಂಡು ಹುಡುಕುತಿಹೆ ಸಿಗದಾಗಿದೆ || ೩ ||

ಯಾವುದಕೆ ಸಿಟ್ಟಾಗಿ ಹೋಗಿಹನೊ ನನ್ನ ದೊರೆ
ಎನ್ನ ಸಿರಿ ಎನ್ನ ಬಲ ಸರ್ವಸ್ವವು
ಅವನಿಲ್ಲದಿರೆ ನಾನು ಜೀವ ಹಿಡಿದಿರಲಾರೆ
ಬಾವಿಯೋ ಕೆರೆ ತೊರೆಯೊ ಕರೆಯುತಿಹವು || ೪ ||

ಸತ್ತಂತೆ ಬದುಕಿರುವ ಈ ಬಾಳಲೇನಿಹುದು
ಸತ್ತು ಹುಟ್ಟುವ ಇಂಥ ಬಾಳು ಸಾಕು
ಬಿಟ್ಟು ಬಿಟ್ಟೋಡಿದರೆ ಆಳುವಾ ಪತಿದೇವ
ಅಳಬೇಕೊ ನಗಬೇಕೋ ಸಾಕುಸಾಕು || ೫ ||

ಯಾವ ಪ್ರಭುವಿಂದೆನ್ನ ಮಾಂಗಲ್ಯ ಸೌಭಾಗ್ಯ
ಯಾವ ಕೈಯಾಸರೆಯೆ ನನ್ನ ಉಸಿರು
ಅವನನ್ನು ಕಳಕೊಂಡು ಇನ್ನೆಲ್ಲಿ ಸೌಭಾಗ್ಯ
ಕೆಳಗೆ ಮೇಲಾಗುತಿದೆ ಜೀವದುಸಿರು || ೬ ||

ಯೌವನದ ದೇಹವಿದೆ ಅಂದವಿದೆ ಚೆಂದವಿದೆ
ಮನೆಯೊಳಗೆ ಸಿರಿಸಂಪದೆಲ್ಲವಿಹುದು
ಉಂಡು ಉಡಲಿಕ್ಕೆ ಕೊರೆಯೆ ತಿಂದುತೇಗಲು ಅರೆಯೆ
ಏನಿದ್ದು ಎಲ್ಲವೂ ಬರಿದೊ ಬರಿದು || ೭ ||

ನನ್ನ ಕೂಗನ್ನಷ್ಟು ಕೇಳುವಿರ ಗೆಳತಿಯರೆ
ಕೇಳಿ ಎದೆಯಳಲನ್ನು ತೋಡಿಕೊಳುವೆ
ಏನಾದರೊಂದಿಷ್ಟು ಸಾಂತ್ವನವ ಹೇಳಿರಿ
ದುರ್ಭಾಗ್ಯೆ ನೊಂದವಳು ಬೇಡಿಕೊಳುವೆ || ೮ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಹ-ಪರ
Next post ಫ್ರಾನ್ಸಿಸ್ ಬೇಕನ್‌ನ “Of Studies” ಅಧ್ಯಯನ ಕುರಿತ ಮಾಹಿತಿ ಕೈಪಿಡಿ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…