Home / ಕವನ / ಕವಿತೆ / ಎಲ್ಲಿಹನು ನನ್ನ ಪತಿ

ಎಲ್ಲಿಹನು ನನ್ನ ಪತಿ

ಓ ಗಿರಿಯೆ ಮರಗಳೇ ಓ ಜೀವ ಜೀವಗಳೆ
ನನ್ನೊಡೆಯ ಎಲ್ಲಿಹನು ಬೇಗ ಪೇಳಿ
ಸಾಯುತಿಹೆ ತರಹರಿಸಿ ನಿರ್ಜೀವವಾಗಿರುವೆ
ಅವನಿಲ್ಲದಾನಿನ್ನು ಹೇಗೆ ಇರಲಿ || ೧ ||

ಬಾವಿಯಲಿ ಜಲವೆಲ್ಲ ಬತ್ತಿ ಹೋದಂತಿಹುದು
ಹಣ್ಣಿನಲಿ ರಸವೆಲ್ಲ ಒಣಗಿರುವುದು
ದೀಪದಲಿ ಎಣ್ಣೆಯೇ ತಿರಿಹೋಗಿಹುದಲ್ಲ
ಬಾಳ ಬಳ್ಳಿಯ ರಸವು ಇಂಗಿರುವುದು || ೨ ||

ಇಷ್ಟು ದಿನ ಅವನಿದ್ದ, ಇದ್ದಂತೆ ಇದ್ದಿಲ್ಲ,
ಈಗ ಅವನಿಲ್ಲದೇ ಬರಿದಾಗಿದೆ
ಗಂಡ ಸತ್ತ ಮೇಲೆ ಹೆಂಡತಿಯು ಜಾಣಳೆ
ಕಳಕೊಂಡು ಹುಡುಕುತಿಹೆ ಸಿಗದಾಗಿದೆ || ೩ ||

ಯಾವುದಕೆ ಸಿಟ್ಟಾಗಿ ಹೋಗಿಹನೊ ನನ್ನ ದೊರೆ
ಎನ್ನ ಸಿರಿ ಎನ್ನ ಬಲ ಸರ್ವಸ್ವವು
ಅವನಿಲ್ಲದಿರೆ ನಾನು ಜೀವ ಹಿಡಿದಿರಲಾರೆ
ಬಾವಿಯೋ ಕೆರೆ ತೊರೆಯೊ ಕರೆಯುತಿಹವು || ೪ ||

ಸತ್ತಂತೆ ಬದುಕಿರುವ ಈ ಬಾಳಲೇನಿಹುದು
ಸತ್ತು ಹುಟ್ಟುವ ಇಂಥ ಬಾಳು ಸಾಕು
ಬಿಟ್ಟು ಬಿಟ್ಟೋಡಿದರೆ ಆಳುವಾ ಪತಿದೇವ
ಅಳಬೇಕೊ ನಗಬೇಕೋ ಸಾಕುಸಾಕು || ೫ ||

ಯಾವ ಪ್ರಭುವಿಂದೆನ್ನ ಮಾಂಗಲ್ಯ ಸೌಭಾಗ್ಯ
ಯಾವ ಕೈಯಾಸರೆಯೆ ನನ್ನ ಉಸಿರು
ಅವನನ್ನು ಕಳಕೊಂಡು ಇನ್ನೆಲ್ಲಿ ಸೌಭಾಗ್ಯ
ಕೆಳಗೆ ಮೇಲಾಗುತಿದೆ ಜೀವದುಸಿರು || ೬ ||

ಯೌವನದ ದೇಹವಿದೆ ಅಂದವಿದೆ ಚೆಂದವಿದೆ
ಮನೆಯೊಳಗೆ ಸಿರಿಸಂಪದೆಲ್ಲವಿಹುದು
ಉಂಡು ಉಡಲಿಕ್ಕೆ ಕೊರೆಯೆ ತಿಂದುತೇಗಲು ಅರೆಯೆ
ಏನಿದ್ದು ಎಲ್ಲವೂ ಬರಿದೊ ಬರಿದು || ೭ ||

ನನ್ನ ಕೂಗನ್ನಷ್ಟು ಕೇಳುವಿರ ಗೆಳತಿಯರೆ
ಕೇಳಿ ಎದೆಯಳಲನ್ನು ತೋಡಿಕೊಳುವೆ
ಏನಾದರೊಂದಿಷ್ಟು ಸಾಂತ್ವನವ ಹೇಳಿರಿ
ದುರ್ಭಾಗ್ಯೆ ನೊಂದವಳು ಬೇಡಿಕೊಳುವೆ || ೮ ||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...