ಭಾವವೆಂಬ ಗಿಡ ಬಳ್ಳಿಯಲಿ

ಭಾವವೆಂಬ
ಗಿಡಬಳ್ಳಿಯಲಿ
ನಗುವ ಹೂವುಗಳೆ ||

ಮನವೆಂಬ
ರಸಪಾನದಲಿ
ಬದುಕ ಬಯಸುವ
ಚೆಲುವ ಕಂಗಳೆ ||

ಯಾರಗೊಡವೆ
ಇಲ್ಲದೆ ಯಾವ
ಸ್ವಾರ್ಥ ಬಯಸದೆ
ಅರಳಿದ ಹೂಗಳೇಽಽಽ ||

ಎಲ್ಲಿ ತೂರಿದವೂ
ನಿಮ್ಮ ಬಯಕೆಗಳು
ಎಲ್ಲಿ ಹೊಯ್ದವೂ
ನಿಮ್ಮ ನೆರಳು ||

ಬಾಳ ಬೆತ್ತಲೆ
ಕನಸುಣಿವ ದಳದಲಿ
ನುಸುಳದಿರಿ ರಜನಿಗಳೆ
ಬಾಡಿ ನಲುಗದಿರೀಽಽಽ ||

ಜೋಪಾನ ತೂಗಿರಿ
ಮೃಣಾಳ ನಾಳಕೆ
ನಿಂತು ಬೇರು ಆಗಸದತ್ತ
ನೋಡುವ ನಿಮ್ಮ ಬದುಕು ||

ಬಲ್ಲಿರಿ ನನ್ನ
ಮನದ ಒಡನಾಟವ
ಮಧುಮಗಳು ನಾನು
ಸಿಂಗರಿಸೆ ಬನ್ನಿರಿ
ಚೆಲುವ ಕೆಳೆಗಳೆ ||

ಸಾವು ನೋವು
ನಲಿವು ಒಲವಲ್ಲಿ
ಗೆಲುವು ಕಾಣುವ
ಪರಾಗ ಪುಷ್ಪಗಳೇ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಟಗಾರ ಸುಬ್ಬ
Next post ನೀನೆ ಕವಿತೆಯ ಉಸಿರಾಗು

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…