ಭಾವವೆಂಬ ಗಿಡ ಬಳ್ಳಿಯಲಿ

ಭಾವವೆಂಬ
ಗಿಡಬಳ್ಳಿಯಲಿ
ನಗುವ ಹೂವುಗಳೆ ||

ಮನವೆಂಬ
ರಸಪಾನದಲಿ
ಬದುಕ ಬಯಸುವ
ಚೆಲುವ ಕಂಗಳೆ ||

ಯಾರಗೊಡವೆ
ಇಲ್ಲದೆ ಯಾವ
ಸ್ವಾರ್ಥ ಬಯಸದೆ
ಅರಳಿದ ಹೂಗಳೇಽಽಽ ||

ಎಲ್ಲಿ ತೂರಿದವೂ
ನಿಮ್ಮ ಬಯಕೆಗಳು
ಎಲ್ಲಿ ಹೊಯ್ದವೂ
ನಿಮ್ಮ ನೆರಳು ||

ಬಾಳ ಬೆತ್ತಲೆ
ಕನಸುಣಿವ ದಳದಲಿ
ನುಸುಳದಿರಿ ರಜನಿಗಳೆ
ಬಾಡಿ ನಲುಗದಿರೀಽಽಽ ||

ಜೋಪಾನ ತೂಗಿರಿ
ಮೃಣಾಳ ನಾಳಕೆ
ನಿಂತು ಬೇರು ಆಗಸದತ್ತ
ನೋಡುವ ನಿಮ್ಮ ಬದುಕು ||

ಬಲ್ಲಿರಿ ನನ್ನ
ಮನದ ಒಡನಾಟವ
ಮಧುಮಗಳು ನಾನು
ಸಿಂಗರಿಸೆ ಬನ್ನಿರಿ
ಚೆಲುವ ಕೆಳೆಗಳೆ ||

ಸಾವು ನೋವು
ನಲಿವು ಒಲವಲ್ಲಿ
ಗೆಲುವು ಕಾಣುವ
ಪರಾಗ ಪುಷ್ಪಗಳೇ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಟಗಾರ ಸುಬ್ಬ
Next post ನೀನೆ ಕವಿತೆಯ ಉಸಿರಾಗು

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys