ನೀನೆ ಕವಿತೆಯ ಉಸಿರಾಗು

ನನ್ನ ಕವಿತೆಗಳ ಕದ್ದು ಓದುವುದು
ಅದರ ವಿಷಯವನೆತ್ತಿ ತೂಗುವುದು
ನನ್ನವಳ ಚಟ…
‘ಓದಿದೆನು ನಿನ್ನ ಗೀತೆಗಳ ನಲ್ಲ’
ಎಂದು ಮೋಹಕವಾಗಿ
ಹಿಂಡುವಳು ನನ್ನ ಗಲ್ಲ
ಕನಸಿನಲಿ ಮೆಲ್ಲನೆ ಬಂದು ಮುದ್ದು ಮಾತಿನ
ಭಾವರಸದೊಳಗೆ ಮಿಂದು
ಬೆರೆಸಿ ನಿನ್ನನು, ಮೈ ಮರೆಸಿ
ನನ್ನ ದೂರಿದ ರೂಪಸಿ
ಯಾರೆಂದು ನನಗೆ ಗೊತ್ತು
ನೀನು ಬರೆವುದೆ ಅವಳ ಸುತ್ತು ಮುತ್ತು
ನನ್ನ ಕಣ್ಣಲಿ ನೋಟ
ಮೈಯ ಬಳುಕು, ಮಾಟ
ನಿನಗೆ ಕಾಣುವುದೆ ಇಲ್ಲ
ನನ್ನ ಒನಪು ಒಯ್ಯಾರ
ನಿನ್ನ ಮೆಚ್ಚನು ಬಯಸಿ
ಮಾಡಿದ ಸಿಂಗಾರ
ನಿನ್ನ ಕವಿತೆಗೆ ಸ್ಫೂರ್ತಿಯಾಗುವುದಿಲ್ಲ.
ನಿನಗವಳು ರಾಗಿಣಿ
ಮಧು ಮಾಲಿನಿ ಚಕೋರಿ
ಮೀಂಟಿದರೆ ಸಾಕು ಹೊರಡುತ್ತೆ ಆಲಾಪ
ಸ್ವರಸಂಗಮದ ಮೌನದಲಿ
ಬಿಚ್ಚಿಕೊಳ್ಳುತ್ತೆ ಅನಂತ ಸಲ್ಲಾಪ…
ನಾನು ಹೇಳುತ್ತೇನೆ: ಕರುಬದಿರು ನಲ್ಲೆ
ಕವಿತೆಯಲಿ ಬರುವವಳು ನೀನು
ಅವಳಲಿ ನಿನ್ನನಿಟ್ಟು ನಿನ್ನನು ಅವಳಲಿಟ್ಟು
ನೋಡುವೆನು, ಬರೆಯುವೆನು
ನನ್ನ ಒಲವುಗಳ ಬಗೆಯನರಿಯದೆ
ಕನಸಿನವಳಾರೆಂದು ತಿಳಿಯುವುದು ಹೇಗೆ
ಅದಕೆಂದು ನೀನೆ ನನ್ನ ಕವಿತೆಯ
ಕಲ್ಪನೆಯಾಗು, ಉಸಿರಾಗು
ಹಣತೆಯಲಿ ಉರಿವ ದೀಪದ ಹಾಗೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾವವೆಂಬ ಗಿಡ ಬಳ್ಳಿಯಲಿ
Next post ಅದು ಎಲ್ಲಿಯುದು ಸಾವಯವ ?

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…