ನನ್ನ ಕವಿತೆಗಳ ಕದ್ದು ಓದುವುದು
ಅದರ ವಿಷಯವನೆತ್ತಿ ತೂಗುವುದು
ನನ್ನವಳ ಚಟ…
‘ಓದಿದೆನು ನಿನ್ನ ಗೀತೆಗಳ ನಲ್ಲ’
ಎಂದು ಮೋಹಕವಾಗಿ
ಹಿಂಡುವಳು ನನ್ನ ಗಲ್ಲ
ಕನಸಿನಲಿ ಮೆಲ್ಲನೆ ಬಂದು ಮುದ್ದು ಮಾತಿನ
ಭಾವರಸದೊಳಗೆ ಮಿಂದು
ಬೆರೆಸಿ ನಿನ್ನನು, ಮೈ ಮರೆಸಿ
ನನ್ನ ದೂರಿದ ರೂಪಸಿ
ಯಾರೆಂದು ನನಗೆ ಗೊತ್ತು
ನೀನು ಬರೆವುದೆ ಅವಳ ಸುತ್ತು ಮುತ್ತು
ನನ್ನ ಕಣ್ಣಲಿ ನೋಟ
ಮೈಯ ಬಳುಕು, ಮಾಟ
ನಿನಗೆ ಕಾಣುವುದೆ ಇಲ್ಲ
ನನ್ನ ಒನಪು ಒಯ್ಯಾರ
ನಿನ್ನ ಮೆಚ್ಚನು ಬಯಸಿ
ಮಾಡಿದ ಸಿಂಗಾರ
ನಿನ್ನ ಕವಿತೆಗೆ ಸ್ಫೂರ್ತಿಯಾಗುವುದಿಲ್ಲ.
ನಿನಗವಳು ರಾಗಿಣಿ
ಮಧು ಮಾಲಿನಿ ಚಕೋರಿ
ಮೀಂಟಿದರೆ ಸಾಕು ಹೊರಡುತ್ತೆ ಆಲಾಪ
ಸ್ವರಸಂಗಮದ ಮೌನದಲಿ
ಬಿಚ್ಚಿಕೊಳ್ಳುತ್ತೆ ಅನಂತ ಸಲ್ಲಾಪ…
ನಾನು ಹೇಳುತ್ತೇನೆ: ಕರುಬದಿರು ನಲ್ಲೆ
ಕವಿತೆಯಲಿ ಬರುವವಳು ನೀನು
ಅವಳಲಿ ನಿನ್ನನಿಟ್ಟು ನಿನ್ನನು ಅವಳಲಿಟ್ಟು
ನೋಡುವೆನು, ಬರೆಯುವೆನು
ನನ್ನ ಒಲವುಗಳ ಬಗೆಯನರಿಯದೆ
ಕನಸಿನವಳಾರೆಂದು ತಿಳಿಯುವುದು ಹೇಗೆ
ಅದಕೆಂದು ನೀನೆ ನನ್ನ ಕವಿತೆಯ
ಕಲ್ಪನೆಯಾಗು, ಉಸಿರಾಗು
ಹಣತೆಯಲಿ ಉರಿವ ದೀಪದ ಹಾಗೆ!
*****
Related Post
ಸಣ್ಣ ಕತೆ
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
-
ಅಮ್ಮ
‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…
-
ಬೂಬೂನ ಬಾಳು
ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…
-
ರಣಹದ್ದುಗಳು
ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…
-
ಆ ರಾಮ!
ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…