Home / ಲೇಖನ / ವಿಜ್ಞಾನ / ಜನಸಂಖ್ಯಾ ಸ್ಫೋಟ

ಜನಸಂಖ್ಯಾ ಸ್ಫೋಟ

ಕಳೆದ ದಶಕದ ಕೊನೆಯಲ್ಲಿ ಬೆಂಗಳೂರಿದ ಜನಸಂಖ್ಯೆ ೪೭ ಲಕ್ಷ ವಿತ್ತು, ಕೇವಲ ೧೦ ವರ್ಷಗಳ ಅವಧಿಯಲ್ಲಿ ೮೦ ಲಕ್ಷವನ್ನು ಮೀರಿದೆ. ಇದು ಬೆಂಗಳೂರಿನಂತಹ ಒಂದು ನಗರದ ಕಥೆಯಲ್ಲ ಏಷಿಯಾ, ಲ್ಯಾಟಿನ, ಆಫ್ರಿಕಾ, ಅಮೇರಿಕಾದಂತಹ ನಗರಗಳಲ್ಲಿಯೂ ಕೂಡ ಜನಸಂಖ್ಯೆಯ ಸ್ಫೋಟ ದಿನೇ ದಿನೇ ಆಗುತ್ತಲೇ ಇದೆ. ಅಭಿವೃದ್ಧಿಯ ಅಗ್ರಪಂಕ್ತಿಯಲ್ಲಿರುವ ಜಪಾನ್ ದೇಶದ ಟೋಕಿಯೋ ಅಮೇರಿಕೆಯ ಪ್ರಮುಖ ನಗರ ನ್ಯೂಯಾರ್ಕ, ಜರ್ಮನಿಯ, ಬರ್ಲಿನ್, ಫ್ರಾನ್ಸಿನ ಪ್ಯಾರಿಸ್ ಜನಸಂಖ್ಯೆಯ ಸ್ಫೋಟದಿಂದ ನಾಗರೀಕರು ತಲ್ಲಣಗೊಳ್ಳುತ್ತಿದ್ದಾರೆ.

ಮುಂದಿನ ಶತಮಾನದಲ್ಲಿ ಭೂಮಿಯ ಮೇಲಿನ ಜನಸಂಖ್ಯೆ ಅಂದಾಜಿಗಿಂತ ಹೆಚ್ಚಾಗುವುದು ನಿಶ್ಚಿತ. ನಾಗರೀಕತೆಯ ವಿಕಾಸದ ತುತ್ತತುದಿಯನ್ನು ತಲುಪಿರುವ ಮಾನವ ಸಂಖ್ಯೆ ೨೦೫೦ರ ವೇಳೆಗೆ ೧,೦೦೦ ಕೋಟಿ (೧೦ ಬಿಲಿಯನ್) ಯನ್ನು ದಾಟಲಿದೆ. ಜಪಾನಿನಲ್ಲಿ ನೆಲದ ಮೇಲೆ ವಾಸ ಮಾಡಲಿಕ್ಕೆ ಸ್ಥಳವೇ ಸಿಗಲಾರದು. ಈಗಾಗಲೇ ಪ್ರತಿ ಕಿ.ಮೀ. ಗಳಿಗೆ ೮,೬೦೦ ಜನಸಂದಣಿ ಇದೆ. ೭ ಕೋಟಿ ಜನಸಂಖ್ಯೆಯ ಸಂದಣಿಯನ್ನು ಭರಿಸಲಾರದೇ ಜಪಾನಿನ ನಗರಗಳು ತುಳುಕುತ್ತಿವೆ. ನೆಲದ ಮೇಲೆ ಸ್ಥಳವಿಲ್ಲದೇ ನೆಲಕ್ಕಾಗಿ (ಕಾಲೂರಲು) ಹುಡುಕಾಟ ನಡೆಯುತ್ತಲಿದೆ. ಈಗಿರುವ ದಾರಿ ಎಂದರೆ ನೆಲದಾಳದಲ್ಲಿಯೋ ಸಮುದ್ರ ಮಧ್ಯೆ ಅಥವಾ ಸಮುದ್ರ ತೀರಗಳಲ್ಲೋ ಅಥವಾ ಅಂತರೀಕ್ಷದಲ್ಲಿಯೇ ನಗರಗಳನ್ನು ನಿರ್ಮಾಣ ಮಾಡಿಯೇ ಜೀವಿಸುವ ಸಂದರ್ಭ ಬಂದಿದೆ.

ಕ್ರಿ.ಶ. ೨೦೫೦ ರವೇಳೆಗೆ ಚಂದ್ರಗ್ರಹದ ಮೇಲೆ ಜನವಸತಿಯ ವಸಾಹತು ಆರಂಭವಾಗಲಿದೆಯಂತೆ. ಈ ನವನಗರಗಳ ನಿರ್ಮಾಣಗಳಿಂದ ನಗರ ಜೀವನ ಸಮಸ್ಯೆಗಳಿಲ್ಲದೆ ಸಾಧ್ಯವೇ ಎಂಬ ಪ್ರಶ್ನೆ. ಮುಂದಾದರೂ ವಿಜ್ಞಾನದಲ್ಲಿ ಹೊಸದನ್ನು ಸಾಧಿಸುತ್ತಲೇ ಇರುವ ಸಂಶೋಧಕರು ಎಲ್ಲಡೆಯಲ್ಲೂ ಜನರನ್ನು ಭರ್ತಿಮಾಡಬಹುದೆನ್ನುತ್ತಾರೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...