Home / ಲೇಖನ / ವಿಜ್ಞಾನ / ಜನಸಂಖ್ಯಾ ಸ್ಫೋಟ

ಜನಸಂಖ್ಯಾ ಸ್ಫೋಟ

ಕಳೆದ ದಶಕದ ಕೊನೆಯಲ್ಲಿ ಬೆಂಗಳೂರಿದ ಜನಸಂಖ್ಯೆ ೪೭ ಲಕ್ಷ ವಿತ್ತು, ಕೇವಲ ೧೦ ವರ್ಷಗಳ ಅವಧಿಯಲ್ಲಿ ೮೦ ಲಕ್ಷವನ್ನು ಮೀರಿದೆ. ಇದು ಬೆಂಗಳೂರಿನಂತಹ ಒಂದು ನಗರದ ಕಥೆಯಲ್ಲ ಏಷಿಯಾ, ಲ್ಯಾಟಿನ, ಆಫ್ರಿಕಾ, ಅಮೇರಿಕಾದಂತಹ ನಗರಗಳಲ್ಲಿಯೂ ಕೂಡ ಜನಸಂಖ್ಯೆಯ ಸ್ಫೋಟ ದಿನೇ ದಿನೇ ಆಗುತ್ತಲೇ ಇದೆ. ಅಭಿವೃದ್ಧಿಯ ಅಗ್ರಪಂಕ್ತಿಯಲ್ಲಿರುವ ಜಪಾನ್ ದೇಶದ ಟೋಕಿಯೋ ಅಮೇರಿಕೆಯ ಪ್ರಮುಖ ನಗರ ನ್ಯೂಯಾರ್ಕ, ಜರ್ಮನಿಯ, ಬರ್ಲಿನ್, ಫ್ರಾನ್ಸಿನ ಪ್ಯಾರಿಸ್ ಜನಸಂಖ್ಯೆಯ ಸ್ಫೋಟದಿಂದ ನಾಗರೀಕರು ತಲ್ಲಣಗೊಳ್ಳುತ್ತಿದ್ದಾರೆ.

ಮುಂದಿನ ಶತಮಾನದಲ್ಲಿ ಭೂಮಿಯ ಮೇಲಿನ ಜನಸಂಖ್ಯೆ ಅಂದಾಜಿಗಿಂತ ಹೆಚ್ಚಾಗುವುದು ನಿಶ್ಚಿತ. ನಾಗರೀಕತೆಯ ವಿಕಾಸದ ತುತ್ತತುದಿಯನ್ನು ತಲುಪಿರುವ ಮಾನವ ಸಂಖ್ಯೆ ೨೦೫೦ರ ವೇಳೆಗೆ ೧,೦೦೦ ಕೋಟಿ (೧೦ ಬಿಲಿಯನ್) ಯನ್ನು ದಾಟಲಿದೆ. ಜಪಾನಿನಲ್ಲಿ ನೆಲದ ಮೇಲೆ ವಾಸ ಮಾಡಲಿಕ್ಕೆ ಸ್ಥಳವೇ ಸಿಗಲಾರದು. ಈಗಾಗಲೇ ಪ್ರತಿ ಕಿ.ಮೀ. ಗಳಿಗೆ ೮,೬೦೦ ಜನಸಂದಣಿ ಇದೆ. ೭ ಕೋಟಿ ಜನಸಂಖ್ಯೆಯ ಸಂದಣಿಯನ್ನು ಭರಿಸಲಾರದೇ ಜಪಾನಿನ ನಗರಗಳು ತುಳುಕುತ್ತಿವೆ. ನೆಲದ ಮೇಲೆ ಸ್ಥಳವಿಲ್ಲದೇ ನೆಲಕ್ಕಾಗಿ (ಕಾಲೂರಲು) ಹುಡುಕಾಟ ನಡೆಯುತ್ತಲಿದೆ. ಈಗಿರುವ ದಾರಿ ಎಂದರೆ ನೆಲದಾಳದಲ್ಲಿಯೋ ಸಮುದ್ರ ಮಧ್ಯೆ ಅಥವಾ ಸಮುದ್ರ ತೀರಗಳಲ್ಲೋ ಅಥವಾ ಅಂತರೀಕ್ಷದಲ್ಲಿಯೇ ನಗರಗಳನ್ನು ನಿರ್ಮಾಣ ಮಾಡಿಯೇ ಜೀವಿಸುವ ಸಂದರ್ಭ ಬಂದಿದೆ.

ಕ್ರಿ.ಶ. ೨೦೫೦ ರವೇಳೆಗೆ ಚಂದ್ರಗ್ರಹದ ಮೇಲೆ ಜನವಸತಿಯ ವಸಾಹತು ಆರಂಭವಾಗಲಿದೆಯಂತೆ. ಈ ನವನಗರಗಳ ನಿರ್ಮಾಣಗಳಿಂದ ನಗರ ಜೀವನ ಸಮಸ್ಯೆಗಳಿಲ್ಲದೆ ಸಾಧ್ಯವೇ ಎಂಬ ಪ್ರಶ್ನೆ. ಮುಂದಾದರೂ ವಿಜ್ಞಾನದಲ್ಲಿ ಹೊಸದನ್ನು ಸಾಧಿಸುತ್ತಲೇ ಇರುವ ಸಂಶೋಧಕರು ಎಲ್ಲಡೆಯಲ್ಲೂ ಜನರನ್ನು ಭರ್ತಿಮಾಡಬಹುದೆನ್ನುತ್ತಾರೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...