Home / ಕವನ / ಕವಿತೆ / ಏನಪರಾಧ ಮಾಡಿದೆನೆಂದು?

ಏನಪರಾಧ ಮಾಡಿದೆನೆಂದು?

ಏನಪರಾಧ ಮಾಡಿದೆನೆಂದು?
ನನಗೀಗತಿಯನು
ನೀ ದಯಪಾಲಿಸಿದೆ|
ನನ್ನಯ ಸತ್ಯದೀಕ್ಷೆಗೇಕಿಂತ
ಪರೀಕ್ಷೆಯ ವಿಧಿಸಿದೆ ವಿಧಿಯೆ|
ಕಾಪಾಡು ಕರುಣಾಳು
ಕಾಶಿಪುರ ಪೋಷಿಪನೆ
ಶಂಕರ ಶಶಿಧರನೆ||

ಸೂರ್ಯವಂಶದರಸನಾಗಿ ಎಲ್ಲರನು
ಸಮಾನತೆಯಿಂದ ನೋಡುತಲಿದ್ದೆ|
ದಾನ ಪುಣ್ಯಾದಿ ಸತ್ಕಾರ್ಯಾಗಳ
ಧರ್ಮ ಬುದ್ಧಿಗನುಸಾರವಾಗಿ ಯೋಚಿಸಿ
ಯತೋಚಿತವಾಗಿ ನಿರ್ವಹಿಸಿದೆ|
ವಯೋವೃದ್ದರು ಬಾಲಕರು ಸ್ತ್ರೀಯರ
ಆದರಿಸಿ ಪ್ರೀತಿಸಿ ಗೌರವಿಸಿದೆ||

ರಾಜಧರ್ಮ ಸತ್ಯಮಾರ್ಗ
ಕರುಣಾ ನೀತಿ ನಿಯಮ
ಅನುಸರಿಸಿಯೇ ನಡೆದೆ|
ಹಿಂದೆ ಮಾಡಿದ ಕರ್ಮಫಲವು
ಮುಂದೆ ಪುಣ್ಯ ನೀಡಲು ಪರೀಕ್ಷೆಯೊ?
ಏನೊಂದನೂ ಅರಿಯೆ|
ಮಡದಿ ಮಗನನು ಜೀತಕ್ಕಿರಿಸಿ
ಋಣಮಕ್ತನಾಗೆ ಸ್ಮಶಾನ ಸೇವೆ ಗೈಯುತಿರುವೆ||

ಕ್ಷಾತ್ರಧರ್ಮಕ್ಕನುಸಾರವಾಗಿ
ದಾನ ಸ್ವೀಕರಿಸುವಂತಿಲ್ಲ|
ಕೈತುಂಬಾ ಮುತ್ತು ರತ್ನಗಳ
ದಾನ ನೀಡುತ್ತಿದ್ದ ಕೈಗಳೀಗ
ನಿರ್ಜೀವ ದೇಹ ಅಸ್ತಿಗಳನು
ಅಗ್ನಿಗೆ ಅರ್ಪಿಸುತಲಿಹವು|
ಸ್ಮಶಾನ ಸುಂಕದೊಂದು ಭಾಗವ
ಸ್ವೀಕರಿಸಿ ಹೊಟ್ಟೆಹೊರೆಯುತಿರುವೆ|
ಮಡದಿ ಮಕ್ಕಳೆಲ್ಲೊ?
ಗಂಡ ಹೆಂಡತಿ ಮಗ ಒಂದೆಡೆಸೇರಿ|
ಸಾಮಾನ್ಯ ಜನರ ಜೀವನ ನಡೆಸೆ
ಭಾಗ್ಯವ ಕರುಣಿಸು, ಸತ್ಯವ ಜಯಿಸು
ನನ್ನೀ ಸತ್ಯ ವ್ರತವನು ಪೂರ್ಣಗೂಳಿಸು||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...