Home / ಕವನ / ಕವಿತೆ / ಏನಪರಾಧ ಮಾಡಿದೆನೆಂದು?

ಏನಪರಾಧ ಮಾಡಿದೆನೆಂದು?

ಏನಪರಾಧ ಮಾಡಿದೆನೆಂದು?
ನನಗೀಗತಿಯನು
ನೀ ದಯಪಾಲಿಸಿದೆ|
ನನ್ನಯ ಸತ್ಯದೀಕ್ಷೆಗೇಕಿಂತ
ಪರೀಕ್ಷೆಯ ವಿಧಿಸಿದೆ ವಿಧಿಯೆ|
ಕಾಪಾಡು ಕರುಣಾಳು
ಕಾಶಿಪುರ ಪೋಷಿಪನೆ
ಶಂಕರ ಶಶಿಧರನೆ||

ಸೂರ್ಯವಂಶದರಸನಾಗಿ ಎಲ್ಲರನು
ಸಮಾನತೆಯಿಂದ ನೋಡುತಲಿದ್ದೆ|
ದಾನ ಪುಣ್ಯಾದಿ ಸತ್ಕಾರ್ಯಾಗಳ
ಧರ್ಮ ಬುದ್ಧಿಗನುಸಾರವಾಗಿ ಯೋಚಿಸಿ
ಯತೋಚಿತವಾಗಿ ನಿರ್ವಹಿಸಿದೆ|
ವಯೋವೃದ್ದರು ಬಾಲಕರು ಸ್ತ್ರೀಯರ
ಆದರಿಸಿ ಪ್ರೀತಿಸಿ ಗೌರವಿಸಿದೆ||

ರಾಜಧರ್ಮ ಸತ್ಯಮಾರ್ಗ
ಕರುಣಾ ನೀತಿ ನಿಯಮ
ಅನುಸರಿಸಿಯೇ ನಡೆದೆ|
ಹಿಂದೆ ಮಾಡಿದ ಕರ್ಮಫಲವು
ಮುಂದೆ ಪುಣ್ಯ ನೀಡಲು ಪರೀಕ್ಷೆಯೊ?
ಏನೊಂದನೂ ಅರಿಯೆ|
ಮಡದಿ ಮಗನನು ಜೀತಕ್ಕಿರಿಸಿ
ಋಣಮಕ್ತನಾಗೆ ಸ್ಮಶಾನ ಸೇವೆ ಗೈಯುತಿರುವೆ||

ಕ್ಷಾತ್ರಧರ್ಮಕ್ಕನುಸಾರವಾಗಿ
ದಾನ ಸ್ವೀಕರಿಸುವಂತಿಲ್ಲ|
ಕೈತುಂಬಾ ಮುತ್ತು ರತ್ನಗಳ
ದಾನ ನೀಡುತ್ತಿದ್ದ ಕೈಗಳೀಗ
ನಿರ್ಜೀವ ದೇಹ ಅಸ್ತಿಗಳನು
ಅಗ್ನಿಗೆ ಅರ್ಪಿಸುತಲಿಹವು|
ಸ್ಮಶಾನ ಸುಂಕದೊಂದು ಭಾಗವ
ಸ್ವೀಕರಿಸಿ ಹೊಟ್ಟೆಹೊರೆಯುತಿರುವೆ|
ಮಡದಿ ಮಕ್ಕಳೆಲ್ಲೊ?
ಗಂಡ ಹೆಂಡತಿ ಮಗ ಒಂದೆಡೆಸೇರಿ|
ಸಾಮಾನ್ಯ ಜನರ ಜೀವನ ನಡೆಸೆ
ಭಾಗ್ಯವ ಕರುಣಿಸು, ಸತ್ಯವ ಜಯಿಸು
ನನ್ನೀ ಸತ್ಯ ವ್ರತವನು ಪೂರ್ಣಗೂಳಿಸು||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...