ನಂಬು ನಂಬೆಲೆ ಮನವೆ

ನಂಬು ನಂಬೆಲೆ ಮನವೆ ನಿನ್ನನು
ನಂಬದಿದ್ದರೆ ನಶ್ವರಾ
ತುಂಬು ಎದೆಯಲಿ ವಿಶ್ವಮೂರ್ತಿಯ
ಇಲ್ಲದೆಲ್ಲವು ಅಪಸ್ವರಾ || ಪ||

ನಂಬಿ ನಿನ್ನನು ಸುಖವ ಕಂಡರು
ತುಂಬು ಹೃದಯದಿ ಶರಣರು
ನಂಬಿ ನಿನ್ನಯ ಹೊಗಳಿ ದಣಿಯದೆ
ಹಾಡಿ ಕುಣಿದರು ದಾಸರು || ೧ ||

ಹುಟ್ಟಿ ಸಾಯುವ ಉಬ್ಬಿ ಇಳಿಯುವ
ದೇಹವಲ್ಲವು ಜೀವನಾ
ಉಂಡು ಮಲಗುವ ತಿಂದು ತೇಗುವ
ಸುಖವು ಅಲ್ಲವು ಸಾಧನಾ || ೨ ||

ಸುಖದ ದುಃಖದ ತೆರೆಗಳಲ್ಲವು
ಬಾಳಸಾಗರದಾಳವು
ಅದರ ಮೇಗಡೆ ತೇಲಿ ಮುಳುಗುವ
ಕಡ್ಡಿ ಕಸ ನೀನಲ್ಲವು || ೩ ||

ಸಾಗರವೆ ನೀ ಬಾಂದಳವೆ ನೀ
ಭೂಮಿ ಸೃಷ್ಟಿಯೆ ನೀನೆಲೈ
ವಿಶ್ವಪೂರ್ಣನು ಸರ್ವಶಕ್ತನು
ವಿಶ್ವದೇವನು ನಿನ್ನಲೈ || ೪ ||

ನಂಬು ನಂಬೆಲೆ ಮನವೆ ನಿನ್ನನು
ನಂಬದಿದ್ದರೆ ನಶ್ವರಾ
ತುಂಬು ಎದೆಯಲಿ ವಿಶ್ವಮೂರ್ತಿಯ
ಇಲ್ಲದೆಲ್ಲವು ಅಪಸ್ವರಾ || ೫ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬ್ರಹ್ಮಚಾರಿ
Next post ಒಂದು ವಿನಂತಿ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys