Home / ಕವನ / ಕವಿತೆ / ಒಂದು ವಿನಂತಿ

ಒಂದು ವಿನಂತಿ

ಒಳಬನ್ನಿ ಗೆಳೆಯರೆ
ಇದು ಒಬ್ಬ ಕವೀಂದ್ರನ ಗೋರಿ
ಹುಸಿದಿದ್ದರೆ
ಕಸಿದಿದ್ದರೆ
ಮಾತಿಗೆ ತಪ್ಪಿ ತಪಿಸಿದ್ದರೆ
ಕಣ್ಣದೀಪ ಕಂಡವರ ಕಷ್ಟಕ್ಕೆ ಉರಿದು
ಎಂದಾದರೂ ಎರಡು ಹನಿ ಬೆಳಕ ಬಸಿದಿದ್ದರೆ
ರಾತ್ರಿ ರಾಮಾಯಣ
ಹಗಲು ಭಾರತ
ಬಾಳೆಲ್ಲ ರಗಳೆ ಹೂಡಿದ ಒಂದು ಬೃಹತ್ಕಥಾ
ರಸಕೃತಿ ಎನಿಸಿದ್ದರೆ
ಅಳುಕಿಲ್ಲದೆ ಬಂದು
ಸಮಾಧಿ ಮುಂದೆ ಮೊಳಕಾಲೂರಿ.
ಹುಟ್ಟಿ ಅಂತಃಕರಣ
ಕಟ್ಟಿ ಬಂದರೆ ಗಂಟಲು
ಇಕ್ಕಟ್ಟಿನಲ್ಲಿ ನಿಮ್ಮನ್ನೇ ಮೀರಿ
ಕವಿಗೆ ನಿಜಗೌರವ ತೋರಿ.

ಮಹನೀಯರೆ, ನೀವು ಅಲ್ಲೆ
ಹೊರಗೇಟಿನಲ್ಲೇ ನಿಲ್ಲಿ
ಮುರುಕಿಲ್ಲದೆ
ಬಿರುಕಿಲ್ಲದೆ
‘ಬಾಳಬಟ್ಟೆ’ ಎಳ್ಳಷ್ಟೂ
ಹರುಕಿಲ್ಲದೆ ‘ಪರಮಾಗಮ’
ಪಟ್ಟೆಯಾಗಿ ತೆರೆದಿದ್ದರೆ,
ಕಂಡಷ್ಟಕ್ಕೇ ಕಾಂಡ ಕೊಂಬೆ ನಿಜವಾಗಿ
ಕಾಣದಷ್ಟಕ್ಕೇ ಕತ್ತಲಬೇರು ಸುಳ್ಳಾಗಿದ್ದರೆ
ಬಾಡದೆ
ಕೋಡದೆ
ಬಾಳಿನ ಉದಯಾಸ್ತಕ್ಕೆ ಎದೆ
ಹಾಡದೆ ಇದ್ದರೆ, ನಿಲ್ಲಿ,
ನಿಮಗೆ ಮೈಲಿಗೆ ಇಲ್ಲಿ.
ಇಟ್ಟು ಹೋಗಿ ತಂದ ಹೂವು ಹಣ್ಣನ್ನು
ಗೇಟು ತಳ್ಳಿ ಅಲ್ಲೇ ಬದಿಯಲ್ಲಿ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...