ಒಂದು ವಿನಂತಿ

ಒಳಬನ್ನಿ ಗೆಳೆಯರೆ
ಇದು ಒಬ್ಬ ಕವೀಂದ್ರನ ಗೋರಿ
ಹುಸಿದಿದ್ದರೆ
ಕಸಿದಿದ್ದರೆ
ಮಾತಿಗೆ ತಪ್ಪಿ ತಪಿಸಿದ್ದರೆ
ಕಣ್ಣದೀಪ ಕಂಡವರ ಕಷ್ಟಕ್ಕೆ ಉರಿದು
ಎಂದಾದರೂ ಎರಡು ಹನಿ ಬೆಳಕ ಬಸಿದಿದ್ದರೆ
ರಾತ್ರಿ ರಾಮಾಯಣ
ಹಗಲು ಭಾರತ
ಬಾಳೆಲ್ಲ ರಗಳೆ ಹೂಡಿದ ಒಂದು ಬೃಹತ್ಕಥಾ
ರಸಕೃತಿ ಎನಿಸಿದ್ದರೆ
ಅಳುಕಿಲ್ಲದೆ ಬಂದು
ಸಮಾಧಿ ಮುಂದೆ ಮೊಳಕಾಲೂರಿ.
ಹುಟ್ಟಿ ಅಂತಃಕರಣ
ಕಟ್ಟಿ ಬಂದರೆ ಗಂಟಲು
ಇಕ್ಕಟ್ಟಿನಲ್ಲಿ ನಿಮ್ಮನ್ನೇ ಮೀರಿ
ಕವಿಗೆ ನಿಜಗೌರವ ತೋರಿ.

ಮಹನೀಯರೆ, ನೀವು ಅಲ್ಲೆ
ಹೊರಗೇಟಿನಲ್ಲೇ ನಿಲ್ಲಿ
ಮುರುಕಿಲ್ಲದೆ
ಬಿರುಕಿಲ್ಲದೆ
‘ಬಾಳಬಟ್ಟೆ’ ಎಳ್ಳಷ್ಟೂ
ಹರುಕಿಲ್ಲದೆ ‘ಪರಮಾಗಮ’
ಪಟ್ಟೆಯಾಗಿ ತೆರೆದಿದ್ದರೆ,
ಕಂಡಷ್ಟಕ್ಕೇ ಕಾಂಡ ಕೊಂಬೆ ನಿಜವಾಗಿ
ಕಾಣದಷ್ಟಕ್ಕೇ ಕತ್ತಲಬೇರು ಸುಳ್ಳಾಗಿದ್ದರೆ
ಬಾಡದೆ
ಕೋಡದೆ
ಬಾಳಿನ ಉದಯಾಸ್ತಕ್ಕೆ ಎದೆ
ಹಾಡದೆ ಇದ್ದರೆ, ನಿಲ್ಲಿ,
ನಿಮಗೆ ಮೈಲಿಗೆ ಇಲ್ಲಿ.
ಇಟ್ಟು ಹೋಗಿ ತಂದ ಹೂವು ಹಣ್ಣನ್ನು
ಗೇಟು ತಳ್ಳಿ ಅಲ್ಲೇ ಬದಿಯಲ್ಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಂಬು ನಂಬೆಲೆ ಮನವೆ
Next post ಹಸಿರು ಎಲೆಯಲಿ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

cheap jordans|wholesale air max|wholesale jordans|wholesale jewelry|wholesale jerseys