ಹಸಿರು ಎಲೆಯಲಿ

ಹಸಿರು ಎಲೆಗಳ ಎಳೆಯಲಿ
ಹಸಿರು ಉಸಿರಿನ ನರ್ತನ
ಪ್ರಕೃತಿ ಇತ್ತಿಹ ದಿವ್ಯಕೊಡುಗೆಯ
ಜೀವ ಜೀವದಾ ಚೇತನ ||

ಸುಪ್ರಭಾತದ ತನಿಯ ಚೆಲುವಲಿ
ಹೂವು ಹೂವಿನ ಮೊಗದಲಿ
ತುಂತುರು ನೀರ ಮಣಿಯರೂಪವು
ಹೊಳೆಯುವ ಸಂಭ್ರಮ ||

ನಗುವ ಚೆಲ್ಲಿ ಬರುವ ದುಂಬಿಯ
ಸಾಲು ಚೆಲುವಿನ ನೋಟವು
ಕದವ ತೆರೆದು ಮಧುವ ನೀಡುವ
ಸುಮದ ನೋಟವು ನೂತನ ||

ಕೊಡುವ ಕೊಳ್ಳುವ ಆಟ ಪ್ರಕೃತಿ
ಕೊಡುಗೆ ಇದುವೆ ಈ ಜಗದಲಿ
ಸ್ವಾರ್ಥ ಮನಕೆ ಪಾಠವು
ಅರಿವ ಮನಸಿರೆ ಚಂದವು ||

ಬಾಳು ಬೆಳೆಯುವ ರೀತಿ ಪ್ರಕೃತಿಯು
ನಮಗೆ ನೀಡುವ ನೀತಿಯು
ಸುಮದ ಬಾಳೊಲು ಅದರ ಸೊಗಸೊಳು
ಬಾಳಿದರೆ ನಿಜದಿ ಸ್ವರ್ಗವು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ವಿನಂತಿ
Next post ಗೆಳತಿ, ನೀನಾದರೆ ಸನಿಹ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…