ಗೆಳತಿ, ನೀನಾದರೆ ಸನಿಹ

ಗೆಳತಿ, ನೀನಾದರೆ ಸನಿಹ
ಮೂಡುವುದು ಕವಿತೆ
ಇಲ್ಲವಾದರೆ ಕತೆ
ಆರಿಸಿಕೊ ನಿನಗ್ಯಾವುದು ಇಷ್ಟ
ಬೇಡ ನನ್ನ ಚಿಂತೆ
ನನಗಿರುವಾಗ ನಿನ್ನ ಚಿಂತೆ /ಪ//

ನನ್ನ ಪ್ರೀತಿ ಅಚಲ
ಇರಬಹುದು ಅದು ಹಿಮಾಚಲ
ಇದಕೆ ಬೇಕಿಲ್ಲ ಸಮರ್ಥನೆ
ಮಾಡಿದರೂ ನೀ ನಿರಾಕರಣೆ
ನೀನು ಬದುಕಬೇಕು
ಬದುಕಿ ಬಾಳಬೇಕು
ಇದು ನನ್ನ ಹರಕೆ
ಪ್ರೀತಿ ಕಾವ್ಯದ ಅರಿಕೆ

ಗೊತ್ತು, ಬದುಕು ಕಡಲು
ಹೆಬ್ಬಲೆಗಳು ಅದರ ಒಡಲು
ಆದರೆ ನಾನು ನಡುಗಡ್ಡೆ
ನಿನಗೆ ಎಂದಾದರೂ ತಂಗಲು
ಹೃದಯವಿರುವ ನೀನು
ಹೃದಯವನ್ನು ಬಲ್ಲೆ
ಇಷ್ಟೆ, ಸಾಕು ಇಲ್ಲಿ
ಮಾತು, ಸಮಾಜಕಿರಲಿ

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಸಿರು ಎಲೆಯಲಿ
Next post ಚಿತ್ರರಂಗ : ಹೊಸಗಾಳಿಯ ವ್ಯಾಖ್ಯಾನ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…