Home / ಕವನ / ಕವಿತೆ / ಬ್ರಹ್ಮಚಾರಿ

ಬ್ರಹ್ಮಚಾರಿ

ಸದಾ ಬ್ರಹ್ಮವಿಚಾರಿ
ಏಕ ಜನಿವಾರಧಾರಿ
ಕೆಲವೊಮ್ಮೆ ಮಾತ್ರ ಶನಿವಾರ
ಟೆರಿಲೀನು ವಸ್ತ್ರ ರವಿವಾರ ವಿವಸ್ತ್ರ
ಸಾತ್ವಿಕ ಆಹಾರಿ ಶುದ್ಧ ಶಾಖಾಹಾರಿ
ಮಾಂಸಕ್ಕೆ ಮಾಂಸ ಕೂಡಿಸಿ ಮಾಡುವ ಉತ್ಪತ್ತಿ ಬೇಡಯ್ಯ
ಬೇಯಿಸಿದ ತತ್ತಿಯಾದರೆ ಒಂದೆರಡು ಪರವಾಯಿಲ್ಲ
ಒತ್ತಾಯ ಮಾಡಿದರೆ ಒಂದೇ ಬೀಡಿ
ಕಾಡಿ ಬೇಡಿದರೆ ಜೂಜು ಸೋಡಾ ಕೂಡಿ ಅಷ್ಟೆ
ಮಾತ್ರ ಕಟ್ಟಾ ಬ್ರಹ್ಮಚಾರಿ
ವ್ಯಭಿಚಾರಿ
ಎಂದರೆ ಅಥವಾ ಹೆಣ್ಣು ಎಂದರೆ
ಅವರ ನೆರಳೆಂದರೆ ಅಷ್ಟಕ್ಕೆ ಬಂದರೆ
ಹರದಾರಿ ದೂರ ಸರಿ
ಕೆಲವೊಮ್ಮೆ ಹಿಂದೆ ಕೆಲವೊಮ್ಮೆ ಮುಂದೆ
ಸರ್ವದಾ ಪಾರಮಾರ್ಧಿಕ ವಿಚಾರಿ
ಹಗಲೂ ರಾತ್ರಿ ಒಂದೇ
ಧ್ಯಾನ ಕೊಕ್ಕರೆಯಂತೆ
ಸಕ್ಕರೆಯಿಲ್ಲದೆಯೆ ಕಾಫಿ ಕುಡಿದು ಸಕ್ಕರೆಯದೇ ನೆನಪಾಗಿ
ತುಟಿ ಚಪ್ಚರಿಸಿ-ಈ ಶುದ್ಧ ಅಚುಂಬಿತ ತುಟಿಗಳಯ್ಯಾ
ಮಂತ್ರ ತಂತ್ರಗಳೆಂದು ಪರಧ್ಯಾನದಲ್ಲಿ ಪುಟಿಪುಟಿವ ತುಟಿ
ಯಾರ ಕೆಳತುಟಿಗಳದ್ದೂ ಜೊಲ್ಲು ನೆಕ್ಕದ ಬ್ರಹ್ಮಚಾರಿ ತುಟಿ
ನಗದ ನಗಲಾರದ ತುಟಿ-ಎಲ್ಲಾ ತುಟ್ಟಿ ಕಳ್ಳಭಟ್ಟಿಯ ಹಾಗೆ
ಅಹಹ ಹೇಗೆ ವಿವರಿಸಲಿ ಹೇಗೆ ಹೇಳಲಿ
ಈ ಅವಸ್ಥೆ ಛೇ ಛೇ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...