Home / ಕವನ / ಕವಿತೆ / ಬ್ರಹ್ಮಚಾರಿ

ಬ್ರಹ್ಮಚಾರಿ

ಸದಾ ಬ್ರಹ್ಮವಿಚಾರಿ
ಏಕ ಜನಿವಾರಧಾರಿ
ಕೆಲವೊಮ್ಮೆ ಮಾತ್ರ ಶನಿವಾರ
ಟೆರಿಲೀನು ವಸ್ತ್ರ ರವಿವಾರ ವಿವಸ್ತ್ರ
ಸಾತ್ವಿಕ ಆಹಾರಿ ಶುದ್ಧ ಶಾಖಾಹಾರಿ
ಮಾಂಸಕ್ಕೆ ಮಾಂಸ ಕೂಡಿಸಿ ಮಾಡುವ ಉತ್ಪತ್ತಿ ಬೇಡಯ್ಯ
ಬೇಯಿಸಿದ ತತ್ತಿಯಾದರೆ ಒಂದೆರಡು ಪರವಾಯಿಲ್ಲ
ಒತ್ತಾಯ ಮಾಡಿದರೆ ಒಂದೇ ಬೀಡಿ
ಕಾಡಿ ಬೇಡಿದರೆ ಜೂಜು ಸೋಡಾ ಕೂಡಿ ಅಷ್ಟೆ
ಮಾತ್ರ ಕಟ್ಟಾ ಬ್ರಹ್ಮಚಾರಿ
ವ್ಯಭಿಚಾರಿ
ಎಂದರೆ ಅಥವಾ ಹೆಣ್ಣು ಎಂದರೆ
ಅವರ ನೆರಳೆಂದರೆ ಅಷ್ಟಕ್ಕೆ ಬಂದರೆ
ಹರದಾರಿ ದೂರ ಸರಿ
ಕೆಲವೊಮ್ಮೆ ಹಿಂದೆ ಕೆಲವೊಮ್ಮೆ ಮುಂದೆ
ಸರ್ವದಾ ಪಾರಮಾರ್ಧಿಕ ವಿಚಾರಿ
ಹಗಲೂ ರಾತ್ರಿ ಒಂದೇ
ಧ್ಯಾನ ಕೊಕ್ಕರೆಯಂತೆ
ಸಕ್ಕರೆಯಿಲ್ಲದೆಯೆ ಕಾಫಿ ಕುಡಿದು ಸಕ್ಕರೆಯದೇ ನೆನಪಾಗಿ
ತುಟಿ ಚಪ್ಚರಿಸಿ-ಈ ಶುದ್ಧ ಅಚುಂಬಿತ ತುಟಿಗಳಯ್ಯಾ
ಮಂತ್ರ ತಂತ್ರಗಳೆಂದು ಪರಧ್ಯಾನದಲ್ಲಿ ಪುಟಿಪುಟಿವ ತುಟಿ
ಯಾರ ಕೆಳತುಟಿಗಳದ್ದೂ ಜೊಲ್ಲು ನೆಕ್ಕದ ಬ್ರಹ್ಮಚಾರಿ ತುಟಿ
ನಗದ ನಗಲಾರದ ತುಟಿ-ಎಲ್ಲಾ ತುಟ್ಟಿ ಕಳ್ಳಭಟ್ಟಿಯ ಹಾಗೆ
ಅಹಹ ಹೇಗೆ ವಿವರಿಸಲಿ ಹೇಗೆ ಹೇಳಲಿ
ಈ ಅವಸ್ಥೆ ಛೇ ಛೇ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...