ನುತಿಸುವೆನು ಬಸವ

ಬಸವಣ್ಣ ಬಸವಯ್ಯ ಬಸವೇಶ ಶರಣು
ನಿನ್ನ ನುತಿಸುವ ಭಾಗ್ಯ ಸವಿಹಾಲು ಜೇನು || ಪ ||

ಶರಣರು ಕವಿಗಳು ಹೊಗಳಿದರು ನಿನ್ನ
ಅವರ ಜಾಡನೆ ಹಿಡಿದು ಹಾಡುವೆನು ಚೆನ್ನ || ಅ.ಪ. ||

ಕಲ್ಯಾಣ ಪಣತೆಗೆ ಭಕ್ತಿ ತ್ಯೆಲವೆರೆದು
ದೀಪ ಹೊತ್ತಿಸಿ ನೀನು ಬೆಳಕಾಗಲು
ನೂರಾರು ಹಣತೆಗಳು ಹೊತ್ತಿಕೊಂಡವು ಶರಣ
ಕಾಂತಿ ಪುಂಜದ ಹೊನಲು ಇರುಳು ಹಗಳು || ೧ ||

ಭಾವದ ಬುಗ್ಗೆಗೆ ಭಾಷಯು ಚಿಮ್ಮಲು
ನುಡಿಯೆಲ್ಲ ವಚನದ ಕಾವ್ಯಸುಗ್ಗಿ
ಸುವಿಚಾರ ಮೊಗ್ಗು ಆಚಾರದ ಹೂವರಳಿ
ಕನ್ನಡ ವನದನುಭಾವ ಹಿಗ್ಗಿ || ೨ ||

ಶಿವನ ಪ್ರೀತಿಯ ಕಂದ ಶಿವಕೀರ್ತಿಯಾನಂದ
ಶಿವ ಭಕ್ತಿ ಭಂಡಾರಿ ಶಿವಲಿಂಗ ಬಸವ
ಪ್ರಮಥರ ಜೀವನೆ ಪೂರ್ವಾಚಾರ್ಯನೆ
ವೀರಶೈವದ ಆದಿ ಗುರುವೆ ಬಸವ || ೩ ||

ನಂಬಿದವರಿಗೆಲ್ಲ ತಂದೆ ತಾಯಿಯು ನೀನೆ
ಬಂಧುಬಳಗ ಸರ್ವ ಶರಣ ಬಸವ
ಗತಿ ನೀನೆ ಮತಿ ನೀನೆ ಸರ್ವಾವಲಂಬನೆ
ಬಾಳಿನ ಬೆಳಕು ಜಗಜ್ಯೋತಿ ಬಸವ || ೪ ||

ದೋಷರಹಿತನೆ ಬಸವ ಪಾಪ ವಿದೂರನೆ
ತನುಮನ ಬಯಲಾದ ಪೂರ್ಣ ಬಸವ
ಭವ ಪಾಶ ಹರಿಯುತ ಭಕ್ತಿಯ ಹರಡಿದೆ
ಯುಗಕೊಬ್ಬ ಜಗಕೆ ಮಹಾಂತ ಬಸವ || ೫ ||

ಹರಬಸವ ಶಿವಬಸವ ಗುರುಬಸವ ದೇವನೆ
ನಿನ್ನ ನೆನೆದರೆ ಭವವು ನಾಸ್ತಿಯಹುದು
ಜ್ಞಾನ ಮೂಲನೆ ಧ್ಯಾನ ಲೋಲನೆ ಬಸವೇಶ
ನಿನ್ನಿಂದ ನರಜನ್ಮ ಹರಜನ್ಮವಹುದು || ೬ ||

ಶರಣರಿಗೆ ಶರಣು ಶರಣರ ಬಂಧುವೆ
ಶರಣ ಧರ್ಮವ ಮೆರೆದೆ ಲೋಕದಲ್ಲಿ
ವೀರರಿಗೆ ಧೀರನು ಛಲದಂಕ ಮಲ್ಲನು
ಬಹಿರಂತರಂಗದ ಪಾಕದಲ್ಲಿ || ೭ ||

ಕುಲಭೇದ ಮೀರಿದ ಭೂತದಯಾಪರನೆ
ಲಿಂಗದ ಮುಂದಿಲ್ಲ ಲಿಂಗಭೇದ
ಅಂಗದಿ ಲಿಂಗವ ಸಾಕ್ಷಾತ್ಕರಿಸಿದ
ಕೂಡಲ ಸಂಗಮ ದೇವ ಪಾದ || ೮ ||

ಇಹಪರ ನಡೆನುಡಿ ಶಿವಜೀವ ದ್ವಂದ್ವಗಳ
ಒಂದಾಗಿ ಬೆಸೆದೆಯೊ ತುಂಬು ಬಸವ
ಭಕ್ತಿ ಜ್ಞಾನ ಕರ್ಮ ವೈರಾಗ್ಯ ಅನುಭಾವ
ಎಲ್ಲ ಹದಗೂಡಿ ಸಮಗ್ರ ಬಸವ || ೯ ||

ಗುರುಲಿಂಗ ಜಂಗಮ ಪ್ರಾಣ ಬಸವಣ್ಣ
ಅರಿವಿನಿ ಜ್ಯೋತಿಯ ಕ್ರಾಂತಿ ಸೂರ್ಯ
ಪ್ರಸಾದ ಕಾಯನೆ ಕಾಯಕ ಜೀವನೆ
ಸಿದ್ಧ ಯೋಗಿಯೆ ನೀನು ಶಾಂತಿವರ್‍ಯ || ೧೦ ||

ಸತ್ಯದ ತವನಿಧಿ ಮುಕ್ತಿಯ ಸನ್ನಿಧಿ
ಸುವಿಚಾರ ಚಿಂತನ ಮಹೋದಯ
ಮರ್ತ್ಯವ ಅಮೃತದ ಮಹಮನೆ ಮಾಡಿದೆ
ಇಹಬಾಳು ಭಾಗ್ಯದ ಶುಭೋದಯ || ೧೧ ||

ಆದಿಯ ಗುರು ನರ ಜಾತಿಯ ಗುರು ನೀನೆ
ದೇವತೆಗಳಿಗೆಲ್ಲ ಬಸವ ಗುರುವೆ
ಹಿರಿಯ ಶರಣರು ಕೂಡ ಗುರುವೆಂದು ನುತಿಸಿದರು
ಪರ ಗುರು ವರಗುರು ನೀನೆ ಗುರುವೆ || ೧೨ ||

ಭಕ್ತಿಗೆ ಬೀಜನೆ ಮುಕ್ತಿಗೆ ಓಜನೆ
ಶಕ್ತಿಗೆ ಯುಕ್ತಿಗೆ ನೀನೆ ಬಸವ
ದೀಕ್ಷೆಗೆ ಬಸವಣ್ಣ ಮೋಕ್ಷಕೆ ಬಸವಣ್ಣ
ಕ್ರಮ ಶಿಕ್ಷೆ ಬೋಧೆಗು ತಂದೆ ಬಸವ || ೧೩ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರೀ ಕೂ ಮಂ ಭಟ್ಟರ ಕಾವ್ಯವಿಳಾಸ
Next post ತ್ರಿಮೂರ್ತಿ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys