ಶ್ರೀ ಕೂ ಮಂ ಭಟ್ಟರ ಕಾವ್ಯವಿಳಾಸ

ವ್ಯಾಕರಣ ಶಿರೋಮಣಿ ರಣಾರಣ ಶ್ರೀ
ಕೂ ಮಂ ಭಟ್ಟರು ರಚಿಸಿದರು ಒಂದು ಕಾವ್ಯ
ಜನಿವಾರದಿಂದ ವೃತ್ತಗಳ ಹಾಕಿ
ಶಿವಲಿಂಗದಿಂದ ಮಾತ್ರೆಗಳ ತೂಗಿ
ಕರ್ಮರ ಬ್ರಾಹ್ಮಣನ ಮಮ್ಮಟ ಕಾವ್ಯ
ದಿವಿನಾಗಿ ಬಂತು
ಪರಂಪರೆಯ ಹವ್ಯ ಕವ್ಯ
ಮಟಮಟ ಮಧ್ಯಾಹ್ನ ಮೂಗು ತುದಿಯಿಂದ
ಬೆವರು ಬರುವಂತೆ
ಬೆವರು ಬರುವಂತಲ್ಲ ಸರಸ್ವತಿಯ
ಮೊಲೆ ಹಾಲಿನಂತೆ
ಹಾಲಿನಂತಲ್ಲ ಹುಚ್ಚು ಹೊಳೆಯಂತೆ

ಏನಾದರೇನಂತೆ ಅಚ್ಚಾಗಿ ಬಂತು
ಕುಪ್ಪಳಿಸಿ ಕುಪ್ಪಳಿಸಿ ಬಳಗಭಟ್ಟಾರಕರಿಂದ
ಜುಟ್ಟು ಹಿಡಿದೆತ್ತಿಸಿಕೊಂಡು
ದಕ್ಕಿಸಿಕೊಂಡರು ಪಾರಿತೋಷಕ ಒಂದಲ್ಲ ಎರಡಲ್ಲ

ಹೀಗೆ
ಕಾವ್ಯ ಪಾರಿತೋಷಕವಾಗಿ
ಪಾರಿತೋಷಕ ಭಟ್ಟರೇ ಆಗಿ
ಎರಡೂ ಸತ್ತವು ಒಂದು ಚಳಿಮಳೆಗಾಳಿಯ ದಿನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಟಕಕ್ಕಾಗಿ ನಾಲ್ಕು ಎಕರೆ ಜಮೀನು ಮಾರಿದೆ
Next post ನುತಿಸುವೆನು ಬಸವ

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

cheap jordans|wholesale air max|wholesale jordans|wholesale jewelry|wholesale jerseys