ಕಳೆದವು ಹತ್ತು ದಿನ

ಕಳೆದವು ಹತ್ತು ದಿನ
ನಿಮ್ಮ ಕಾಯುತಲಿ ಎನ್ನರಸ
ಬಾಗಿಲ ಬಳಿಯಲಿ ನಿಂತೇ
ನಿಮ್ಮಯ ಬರವನು ನೋಡುತ್ತ ||

ಬರುವೆನೆಂದು ಹೇಳಿ ಹೋದ ನಿಮ್ಮನು
ಮರಳಿ ಬರುವಿರೆಂದು ಕಾದೆನು
ಬರುವ ಅವರಿವರ ಕಣ್ಣಾಲಿಸಿ ನೋಡಿದೆ
ಪರಿತಪಿಸಿದೆ ||

ಮೊದಲ ರಾತ್ರಿಯ ನಗುಮೊಗದ
ಚಂದದಿ ಬರಸೆಳೆದು ಮುತ್ತನಿತ್ತಿರಿ
ಆ ದಿನ! ಮೃದುವಚನವಿತ್ತು ಹೋದಿರಿ ಎಲ್ಲಿಗೆ ||

ಇರುವಿರಿ ಹೇಗೆ ಇರುವಿರಿ ಪ್ರೀತಿಯಲಿ
ಎನ್ನರಸಿ ನಿಮ್ಮದೇ ಚಿಂತೆಯು ದಿನದಿನವು
ಕುಳಿತರೂ ನಿಂತರು ಮಲಗಿದರು ಕಾಡುತಿದೆ
ನಿಮ್ಮದೇ ನೆನಪು ||

ಬಣ್ಣದ ಓಕುಳಿ ಬರಿದೆ ಚೆಲ್ಲಿದಿರಿ
ಬರಿದಾಗಿಸದಿರಿ ನನ್ನಾಸೆ ಕರಿಮೋಡಗಳಲಿ
ಮಿಂಚು ಹೊಳೆದಂತೆ ಕಾಡುತಿಹುದು ನಿಮ್ಮ ನೆನಪು ||

ನಾನು ನಿಮ್ಮನ್ನು ಮರೆತೆ ಎನ್ನದಿರಿ
ಮರೆಯಲು ಬಿಡುವೆನೇ ನಾ ನಿಮ್ಮ |
ಸುಖಃ ನಿಮ್ಮ ಒಲುಮೆಯಲಿ ನಾನಿರಲು ||

ಬಯಲು ಹಸಿರಿನಲಿ ಬೀಗಲೇ ಇಲ್ಲ
ತನಿ ಬೆಳದಿಂಗಳು ಬರಲಿಲ್ಲ
ಉಕ್ಕಲಿಲ್ಲ ಕಡಲ ಅಲೆಗಳು
ಹಕ್ಕಿಗಳ ಚಿಲಿಪಿಲಿ ದನಿಯಿಲ್ಲಾ ||

ನಂಬಿಹೆನು ನಿಮ್ಮ ಬರುವಿರಿ ಎಂದು
ಸುಖಃ ಕದವ ತೆರೆದು ಬೆಳಕಾಗಿ ಬರಲು
ನೀವು! ಕಾದಿರುವೆನು ಹಗಲು ಇರುಳು ||
*****

One thought on “0

  1. Instead of waiting to come,keeping in heart is better because when you kept in heart there is no chance of escaping,and waiting for escaped😛..nimm ella kavite galanna odutta iruve,nimm anubavagalu chanda,heege bareyuttiri preeti batti hoda manasugalali preeti tumbuttiri

Leave a Reply to Basavaraj Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದನಿಗಳು
Next post ಗೊರಕೆ ಸಾಕು

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…