ಕಳೆದವು ಹತ್ತು ದಿನ

ಕಳೆದವು ಹತ್ತು ದಿನ
ನಿಮ್ಮ ಕಾಯುತಲಿ ಎನ್ನರಸ
ಬಾಗಿಲ ಬಳಿಯಲಿ ನಿಂತೇ
ನಿಮ್ಮಯ ಬರವನು ನೋಡುತ್ತ ||

ಬರುವೆನೆಂದು ಹೇಳಿ ಹೋದ ನಿಮ್ಮನು
ಮರಳಿ ಬರುವಿರೆಂದು ಕಾದೆನು
ಬರುವ ಅವರಿವರ ಕಣ್ಣಾಲಿಸಿ ನೋಡಿದೆ
ಪರಿತಪಿಸಿದೆ ||

ಮೊದಲ ರಾತ್ರಿಯ ನಗುಮೊಗದ
ಚಂದದಿ ಬರಸೆಳೆದು ಮುತ್ತನಿತ್ತಿರಿ
ಆ ದಿನ! ಮೃದುವಚನವಿತ್ತು ಹೋದಿರಿ ಎಲ್ಲಿಗೆ ||

ಇರುವಿರಿ ಹೇಗೆ ಇರುವಿರಿ ಪ್ರೀತಿಯಲಿ
ಎನ್ನರಸಿ ನಿಮ್ಮದೇ ಚಿಂತೆಯು ದಿನದಿನವು
ಕುಳಿತರೂ ನಿಂತರು ಮಲಗಿದರು ಕಾಡುತಿದೆ
ನಿಮ್ಮದೇ ನೆನಪು ||

ಬಣ್ಣದ ಓಕುಳಿ ಬರಿದೆ ಚೆಲ್ಲಿದಿರಿ
ಬರಿದಾಗಿಸದಿರಿ ನನ್ನಾಸೆ ಕರಿಮೋಡಗಳಲಿ
ಮಿಂಚು ಹೊಳೆದಂತೆ ಕಾಡುತಿಹುದು ನಿಮ್ಮ ನೆನಪು ||

ನಾನು ನಿಮ್ಮನ್ನು ಮರೆತೆ ಎನ್ನದಿರಿ
ಮರೆಯಲು ಬಿಡುವೆನೇ ನಾ ನಿಮ್ಮ |
ಸುಖಃ ನಿಮ್ಮ ಒಲುಮೆಯಲಿ ನಾನಿರಲು ||

ಬಯಲು ಹಸಿರಿನಲಿ ಬೀಗಲೇ ಇಲ್ಲ
ತನಿ ಬೆಳದಿಂಗಳು ಬರಲಿಲ್ಲ
ಉಕ್ಕಲಿಲ್ಲ ಕಡಲ ಅಲೆಗಳು
ಹಕ್ಕಿಗಳ ಚಿಲಿಪಿಲಿ ದನಿಯಿಲ್ಲಾ ||

ನಂಬಿಹೆನು ನಿಮ್ಮ ಬರುವಿರಿ ಎಂದು
ಸುಖಃ ಕದವ ತೆರೆದು ಬೆಳಕಾಗಿ ಬರಲು
ನೀವು! ಕಾದಿರುವೆನು ಹಗಲು ಇರುಳು ||
*****

One thought on “0

  1. Instead of waiting to come,keeping in heart is better because when you kept in heart there is no chance of escaping,and waiting for escaped😛..nimm ella kavite galanna odutta iruve,nimm anubavagalu chanda,heege bareyuttiri preeti batti hoda manasugalali preeti tumbuttiri

Leave a Reply to Basavaraj Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದನಿಗಳು
Next post ಗೊರಕೆ ಸಾಕು

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…