ಕಳೆದವು ಹತ್ತು ದಿನ

ಕಳೆದವು ಹತ್ತು ದಿನ
ನಿಮ್ಮ ಕಾಯುತಲಿ ಎನ್ನರಸ
ಬಾಗಿಲ ಬಳಿಯಲಿ ನಿಂತೇ
ನಿಮ್ಮಯ ಬರವನು ನೋಡುತ್ತ ||

ಬರುವೆನೆಂದು ಹೇಳಿ ಹೋದ ನಿಮ್ಮನು
ಮರಳಿ ಬರುವಿರೆಂದು ಕಾದೆನು
ಬರುವ ಅವರಿವರ ಕಣ್ಣಾಲಿಸಿ ನೋಡಿದೆ
ಪರಿತಪಿಸಿದೆ ||

ಮೊದಲ ರಾತ್ರಿಯ ನಗುಮೊಗದ
ಚಂದದಿ ಬರಸೆಳೆದು ಮುತ್ತನಿತ್ತಿರಿ
ಆ ದಿನ! ಮೃದುವಚನವಿತ್ತು ಹೋದಿರಿ ಎಲ್ಲಿಗೆ ||

ಇರುವಿರಿ ಹೇಗೆ ಇರುವಿರಿ ಪ್ರೀತಿಯಲಿ
ಎನ್ನರಸಿ ನಿಮ್ಮದೇ ಚಿಂತೆಯು ದಿನದಿನವು
ಕುಳಿತರೂ ನಿಂತರು ಮಲಗಿದರು ಕಾಡುತಿದೆ
ನಿಮ್ಮದೇ ನೆನಪು ||

ಬಣ್ಣದ ಓಕುಳಿ ಬರಿದೆ ಚೆಲ್ಲಿದಿರಿ
ಬರಿದಾಗಿಸದಿರಿ ನನ್ನಾಸೆ ಕರಿಮೋಡಗಳಲಿ
ಮಿಂಚು ಹೊಳೆದಂತೆ ಕಾಡುತಿಹುದು ನಿಮ್ಮ ನೆನಪು ||

ನಾನು ನಿಮ್ಮನ್ನು ಮರೆತೆ ಎನ್ನದಿರಿ
ಮರೆಯಲು ಬಿಡುವೆನೇ ನಾ ನಿಮ್ಮ |
ಸುಖಃ ನಿಮ್ಮ ಒಲುಮೆಯಲಿ ನಾನಿರಲು ||

ಬಯಲು ಹಸಿರಿನಲಿ ಬೀಗಲೇ ಇಲ್ಲ
ತನಿ ಬೆಳದಿಂಗಳು ಬರಲಿಲ್ಲ
ಉಕ್ಕಲಿಲ್ಲ ಕಡಲ ಅಲೆಗಳು
ಹಕ್ಕಿಗಳ ಚಿಲಿಪಿಲಿ ದನಿಯಿಲ್ಲಾ ||

ನಂಬಿಹೆನು ನಿಮ್ಮ ಬರುವಿರಿ ಎಂದು
ಸುಖಃ ಕದವ ತೆರೆದು ಬೆಳಕಾಗಿ ಬರಲು
ನೀವು! ಕಾದಿರುವೆನು ಹಗಲು ಇರುಳು ||
*****

One thought on “0

  1. Instead of waiting to come,keeping in heart is better because when you kept in heart there is no chance of escaping,and waiting for escaped😛..nimm ella kavite galanna odutta iruve,nimm anubavagalu chanda,heege bareyuttiri preeti batti hoda manasugalali preeti tumbuttiri

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದನಿಗಳು
Next post ಗೊರಕೆ ಸಾಕು

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…