Home / ಕವನ / ಕವಿತೆ / ಕಳೆದವು ಹತ್ತು ದಿನ

ಕಳೆದವು ಹತ್ತು ದಿನ

ಕಳೆದವು ಹತ್ತು ದಿನ
ನಿಮ್ಮ ಕಾಯುತಲಿ ಎನ್ನರಸ
ಬಾಗಿಲ ಬಳಿಯಲಿ ನಿಂತೇ
ನಿಮ್ಮಯ ಬರವನು ನೋಡುತ್ತ ||

ಬರುವೆನೆಂದು ಹೇಳಿ ಹೋದ ನಿಮ್ಮನು
ಮರಳಿ ಬರುವಿರೆಂದು ಕಾದೆನು
ಬರುವ ಅವರಿವರ ಕಣ್ಣಾಲಿಸಿ ನೋಡಿದೆ
ಪರಿತಪಿಸಿದೆ ||

ಮೊದಲ ರಾತ್ರಿಯ ನಗುಮೊಗದ
ಚಂದದಿ ಬರಸೆಳೆದು ಮುತ್ತನಿತ್ತಿರಿ
ಆ ದಿನ! ಮೃದುವಚನವಿತ್ತು ಹೋದಿರಿ ಎಲ್ಲಿಗೆ ||

ಇರುವಿರಿ ಹೇಗೆ ಇರುವಿರಿ ಪ್ರೀತಿಯಲಿ
ಎನ್ನರಸಿ ನಿಮ್ಮದೇ ಚಿಂತೆಯು ದಿನದಿನವು
ಕುಳಿತರೂ ನಿಂತರು ಮಲಗಿದರು ಕಾಡುತಿದೆ
ನಿಮ್ಮದೇ ನೆನಪು ||

ಬಣ್ಣದ ಓಕುಳಿ ಬರಿದೆ ಚೆಲ್ಲಿದಿರಿ
ಬರಿದಾಗಿಸದಿರಿ ನನ್ನಾಸೆ ಕರಿಮೋಡಗಳಲಿ
ಮಿಂಚು ಹೊಳೆದಂತೆ ಕಾಡುತಿಹುದು ನಿಮ್ಮ ನೆನಪು ||

ನಾನು ನಿಮ್ಮನ್ನು ಮರೆತೆ ಎನ್ನದಿರಿ
ಮರೆಯಲು ಬಿಡುವೆನೇ ನಾ ನಿಮ್ಮ |
ಸುಖಃ ನಿಮ್ಮ ಒಲುಮೆಯಲಿ ನಾನಿರಲು ||

ಬಯಲು ಹಸಿರಿನಲಿ ಬೀಗಲೇ ಇಲ್ಲ
ತನಿ ಬೆಳದಿಂಗಳು ಬರಲಿಲ್ಲ
ಉಕ್ಕಲಿಲ್ಲ ಕಡಲ ಅಲೆಗಳು
ಹಕ್ಕಿಗಳ ಚಿಲಿಪಿಲಿ ದನಿಯಿಲ್ಲಾ ||

ನಂಬಿಹೆನು ನಿಮ್ಮ ಬರುವಿರಿ ಎಂದು
ಸುಖಃ ಕದವ ತೆರೆದು ಬೆಳಕಾಗಿ ಬರಲು
ನೀವು! ಕಾದಿರುವೆನು ಹಗಲು ಇರುಳು ||
*****

Tagged:

One Comment

  • Instead of waiting to come,keeping in heart is better because when you kept in heart there is no chance of escaping,and waiting for escaped😛..nimm ella kavite galanna odutta iruve,nimm anubavagalu chanda,heege bareyuttiri preeti batti hoda manasugalali preeti tumbuttiri

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...