ಏಕೆ? ಹೆಂಡತಿ..

ಏಕೆ? ಹೆಂಡತಿ..
ನಾ ಅಂದುಕೊಂಡ ಹಾಗೆ
ಒಳ್ಳೆಯವಳಲ್ಲವೆಂದು ಕೊರಗುವೆ|
ಏಕೆ? ಅನ್ಯರಿಗವಳ ಹೋಲಿಸಿ ಕ್ಷಣಕ್ಷಣಕೊಮ್ಮೆ
ಒಳಗೊಳಗೆ ಅಸಮಧಾನಿಯಾಗುವೆ||

ಗುಣಗಳು ಒಮ್ಮೆಲೆ ಬದಲಾಗುವುದಿಲ್ಲ
ಸ್ವಭಾವಗಳು ಸುಮ್ಮನೆ ಸರಿಯಾಗುವುದಿಲ್ಲ|
ಕಾಲ ಬೇಕು, ಕಾಯಬೇಕು
ನೀ ತಿಳಿದಿರುವುದೇ ಸರಿಯಂದೇನಲ್ಲಾ||

ಐದು ಬೆರಳು ಒಂದೇ ಸಮವಿಲ್ಲ
ಹಾಗೆಯೇ ಎಲ್ಲರಲ್ಲಿ ಎಲ್ಲಾ
ಗುಣಗಳಿರುವುದು ಸಾಧ್ಯವಿಲ್ಲಾ|
ಎಲ್ಲಿ ಹೋಲಿಕೆಯೋ ಅಲ್ಲಿ ಸ್ಪರ್ಧೆ
ಅಸಮಧಾನವು ಹುಟ್ಟಿಸುವುದು||

ನೀನು ಎಷ್ಟು ಸರಿಯೆಂದು
ನಿನ್ನ ತಪ್ಪೆಷ್ಟೆಂದು ಅವಳಿಗೇಗೊತ್ತು|
ನಿನ್ನ ಹಾಗೆ ಅವಳು ಯೋಚಿಸಿದರೆ
ಸಂಸಾರ ನಡೆಯುವುದೆಂತು?|
ಇಲ್ಲದುದ ಬಯಸಿ ಎದುರಿಗಿರುವ
ಸಮಯ, ಸುಖವನು ಮರೆಯದಿರು||

ಹೆಣ್ಣು, ಹೊನ್ನು, ಮಣ್ಣು ಎಲ್ಲಾ
ಪೂರ್ವ ಜನ್ಮದ ಪುಣ್ಯದ ಫಲವು|
ಪಾಲಿಗೆ ಬಂದದ್ದು ಪಂಚಾಮೃತವೆಂಬ
ಸತ್ಯ ತಿಳಿದು ಸಮಾಧಾನಿಯಾಗಿರುವುದೇ ಲೇಸು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊಂಬಿಲ್ಲದ ಹಸುಗಳ ಸೃಷ್ಟಿ !
Next post ನನ್ನ ಆತ್ಮ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

cheap jordans|wholesale air max|wholesale jordans|wholesale jewelry|wholesale jerseys