ನನ್ನ ಆತ್ಮ

ನನ್ನ ಆತ್ಮವನ್ನೊಮ್ಮೆ ಕಾಣಬೇಕೆಂದು ಬಯಸಿ
ಎದೆಯೊಳಗೆ ಇಣುಕಿದೆ; ಅಲ್ಲಿ, ಅದು-

ಕೊಳದ ದಂಡೆಯಲಿ ವಿಹರಿಸುವ ಬದಲು
ಚಂಡಮಾರುತದೊಡನೆ ಹೋರಾಡುತ್ತಿತ್ತು.

ನದಿಯ ನೀರಲ್ಲಿ ಮೀಯುವ ಬದಲು
ಕಂಬನಿಯ ಕಡಲಲ್ಲಿ ಕೈತೊಳೆಯುತ್ತಿತ್ತು.

ತಂಗಾಳಿಯ ಅಲೆಗಳಲಿ ಆನಂದಿಸುವ ಬದಲು
ನಿಟ್ಟುಸಿರ ಕಾಡಲ್ಲಿ ಹುಡುಕುತ್ತಿತ್ತು.

ಬನದ ಹಸಿರಲ್ಲಿ ಹೂವಾಗುವ ಬದಲು
ಬರದ ಬೇಗೆಯಲಿ ಬೇಯುತ್ತಿತ್ತು.

ನಲಿವ ನವಿಲಾಗಿ ಕುಣಿಯುವ ಬದಲು
ನೋವ ಮರುದನಿಯಾಗಿ ಮಿಡಿಯುತ್ತಿತ್ತು.

ಮುಂಜಾವಿನ ಮಧುರಗೀತೆಯಾಗುವ ಬದಲು
ಸಂಜೆ ಹಾಡಾಗಿ ಉರಿಯುತಿತ್ತು

ಬೆಳದಿಂಗಳ ಸೊಬಗನ್ನು ಸವಿಯುವ ಬದಲು
ಇರುಳ ಕರುಳಾಗಿ ಕುದಿಯುತ್ತಿತ್ತು.

ಭಾವದ ರೆಕ್ಕೆಗಳ ಬಾನಗಲಕ್ಕೆ ಹರಡಿದ್ದರೂ
ಭೂಮಿಯಲಿ ಕಾಲೂರಿ ಕನಸ ಕಟ್ಟಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಕೆ? ಹೆಂಡತಿ..
Next post ಆತೀರ-ಈತೀರ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys