ಕೊಂಬಿಲ್ಲದ ಹಸುಗಳ ಸೃಷ್ಟಿ !

ಕೊಂಬಿಲ್ಲದ ಹಸುಗಳ ಸೃಷ್ಟಿ !

ಸಾಮಾನ್ಯವಾಗಿ ನಾವು ಮೇಕೆ, ಹೋತ, ಟಗರು, ಹಸು, ಹೋರಿ, ಜಿಂಕೆ, ಎತ್ತು, ಎಮ್ಮೆ ಮುಂತಾದ ಕೊಂಬುಗಳ್ಳುಳ್ಳ ಪ್ರಾಣಿಗಳನ್ನು ಸಾಕುತ್ತೇವೆ. ಕೆಲವು ಪ್ರಾಣಿಗಳ ಕೊಂಬುಗಳು ಪ್ರಾಣಾಂತಿಕ ಭಯವನ್ನು ಸೃಷ್ಟಿಸಿದರೆ, ಕೆಲವು ವ್ಯಕ್ತಿಗಳಿಗೆ ಇರಿದು ಅಪಾಯವನ್ನುಂಟು ಮಾಡುತ್ತವೆ. ಕೆಲವಂತೂ ಸಾಯಿಸಿಯೇ ಬಿಡುತ್ತವೆ. ಕೊಂಬುಳ್ಳ (ಭೀಕರವಾದ ) ಪ್ರಾಣಿಗಳಂದರೆ ಹಾಯಬಹುದೆಂಬ ಭಯ ಎಲ್ಲರಿಗೂ ಇದ್ದೆ ಇರುತ್ತದೆ. ಸಾಕಲೇಬೇಕೆಂಬ ಅನಿವಾರ್ಯತೆ ಕೂಡ ಇರುತ್ತದೆ.

ಕೊಂಬಿಲ್ಲದೇ ಹುಟ್ಟಬಹುದಾದ ಪ್ರಾಣಿಗಳಿದ್ದರೆ ಹೇಗೆ ಈ ಬಗೆಗೆ ವಿಜ್ಞಾನಿಗಳು ಚಿಂತನೆ ನಡೆಯಿಸಿ ಕೊನೆಗೂ ಯಶಸ್ವಿಯಾಗಿದ್ದಾರೆ. ಈಗ ತಳಿ ತಂತ್ರಜ್ಞಾನದಿಂದಾಗಿ ಕೊಂಬಿಲ್ಲದ ಹಸುಗಳನ್ನು ತಮಗಿಷ್ಟವಾದ ಬಣ್ಣದಲ್ಲಿ ಹೊಂದಲು ಸಾಧ್ಯವಿದೆ, ಎಂದು ಖಚಿತಪಡಿಸಲಾಗಿದೆ. ಮೈಕ್ರೋಸೆಟೆಲೈಟ್ ಎನ್ನುವ ಡಿ. ಎನ್. ಎ. ಈ ಕೊಂಬಿನ ಬೆಳವಣಿಗೆಗೆ ಕಾರಣವೆಂದು ತಿಳಿದಾಗಿದೆ. ಈ ಡಿ.ಎನ್.ಎ. ಅನ್ನು ಕಟ್ಟಿಹಾಕಲು ಕೃತಕ ತಳಿಯಾಂತಕನನ್ನು (ಜೆನಿಟಕ್ ಮಾರ್ಕರ್‍ಸ್) ತಯಾರಿಸಿ ನೀಡಲಾಗುತ್ತದೆ. ಕೊಂಬಿಲ್ಲದ ಕೆಲವು ಜಾತಿಯ ಪ್ರಾಣಿಗಳಲ್ಲಿ ಕಾಣಬಂದ ವಿದ್ಯಾಮಾನವನ್ನು ಬಳಕೆಗೆ ಅಷ್ಟೇ ತರಲಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಹೀಗೆ ಕೆಲವು ಜೀವಿಗಳಲ್ಲಿರುವ ಅಂಗಾಂಗಗಳ ಮೂಲ ಜೆನಿಟಕ್ಸ್‌ನ್ನು ಕಂಡು ಹಿಡಿದು ಅದು ಪೂರೈಸದಂತೆ ಮಾಡಿ ಬೇಡವಾದ ಅಂಗಾಂಗಗಳನ್ನು ಬೆಳೆಯದಂತೆ ಮುಂದೆ ಮಾಡಬಹುದೇನೊ? ಕಾಲಾಯತಸ್ಮೈನಮಃ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಜಗದೊಳೆಲ್ಲರೊಪ್ಪುವ ಮಾತನಾಡಿದವರುಂಟೇ ?
Next post ಏಕೆ? ಹೆಂಡತಿ..

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys