ಗಿಳಿಯೇ

ಗಿಳಿಯೇ
ನನ್ನಂತರಂಗದ ಗಿಳಿಯೆ
ಮನ ಬಿಚ್ಚಿ ಮಾತನಾಡು
ಮೌನವಾಗಿಯೆ ಏಕೆ? |
ನಿನ್ನ ಮಧುರತೆಯ ಕಂಪಬೀರು
ತಂದಿಹೆ ನಾ ನಿನಗೆ ಪ್ರೀತಿಯಾ ತಳಿರು||

ಮುಂಜಾನೆಯ ಮಂಜಂತೆ
ಕಾದು ಕುಳಿತೆಹೆ ಕರಗಿನೀರಾಗಲು
ನಿನ್ನದೊಂದು ಮಧುರ ಸಿಹಿ ಮಾತಿಗೆ|
ಬೇಯ್ಯುತ್ತಿರುವೆ ನಿನ್ನ ಮೌನದಾ ಬೇಗುದಿಗೆ
ಕರುಣೆ ಬಾರದೆತಕೊ ನಿನಗೆ
ಬೇಡವೆಂದೆನಿಸಿದನೆ ನಾ ನಿನಗೆ||

ಏಕೆ ಪರೀಕ್ಷಿಸುತ್ತಿರುವೆ ನನ್ನ ಪ್ರೀತಿಯ
ಅಮರ ಗಂಗಾಜಲ ಅದುವೆ|
ಮುನಿದರು ಮನ್ನಿಸದಿದ್ದರು ನೀನು
ನಾಳೆ ನಿನ್ನೊಂದಿಗೇ ಮದುವೆ||
ಕಲ್ಲು ವೀಣೆಯಂತಾದೇತಕೆ ಗಿಳಿಯೆ
ಶೃತಿಸಿ ನುಡಿಸಲೇ ಬಳಿಬಂದು
ಸ್ಪರ್ಶಿಸಿ ನಿನ್ನಂದಚೆಂದವನು ಚೆಲುವೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಗರದಾಳದಲ್ಲೊಂದು ಮನೆಯ ಮಾಡಿ
Next post ಒಂಟಿ ಗಿಡ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…