ಹಾಡು-ಪಾಡು

ಕುಸುಮವೊಂದು ಉಲ್ಲಾಸದಿಂದ
ಅರಳಿನಿಂತು ನಕ್ಕಿತು |

ನಭದ ನೀಲಿ ಬಣ್ಣ ಕಂಡು
ನಾನೇ ಚೆಲುವೆ ಎಂದಿತು |

ಇಳೆಯ ಮೇಲಣ ಕೊಳೆಯ ಕಂಡು
ಹಮ್ಮಿನಿಂದ ಅಣಕಿತು |

ಸುಳಿದು ಸೂಸೋ ತಂಗಾಳಿಗೆ
ಒನಪಿನಿಂದ ಬಳುಕಿತು |

ಹಾರಿ ಬಂದ ದುಂಬಿಯುಸಿರು
ಮಧುರ ಸುಧೆಯೆ ಎಂದಿತು |

ಮುಂಬೆಳಗು ಜಾರೆ
ಧಗೆ ಬಗೆಯು ಏರಿ ಏರೆ
ತಾಪಕದುವೆ ಬಳಲಿತು |

ಮುಖದಿ ಮೂಡಿದ ನೆರಿಗೆ ಕಂಡು
ದುಃಖದಿಂದ ನೊಂದಿತು |

ಮುಗಿಲ ಸ್ವಚ್ಛವಾದ ಬಣ್ಣ
ಇಳೆಯ ಪುಷ್ಟವಾದ ಮಣ್ಣ |

ವಂದಿಸುತಲೇ ಉದುರಿತು
ಉದುರಿ ಮಣ್ಣ ಸೇರಿತು ||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾರಿಜಮುಖಿ ದೊಡ್ಡಶಹರ ಹುಬ್ಬಳ್ಳಿಯೊಳು
Next post ನಾನು ಬದುಕುತ್ತೇನೆ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…