Home / ಕವನ / ಕವಿತೆ / ವಾರಿಜಮುಖಿ ದೊಡ್ಡಶಹರ ಹುಬ್ಬಳ್ಳಿಯೊಳು

ವಾರಿಜಮುಖಿ ದೊಡ್ಡಶಹರ ಹುಬ್ಬಳ್ಳಿಯೊಳು

ವಾರಿಜಮುಖಿ ದೊಡ್ಡಶಹರ ಹುಬ್ಬಳ್ಳಿಯೊಳು
ಕೋರಿ ಗಂಗಪ್ಪ ಸಾವುಕಾರನು ||ಪ||

ಧಾರುಣಿಯೊಳು ಸಣ್ಣ ಊರು ಕರಡೀಗುಡ್ಡ
ಹಾರೈಸುತ ವ್ಯವಹಾರಕ್ಹೋಗಿ ಒಬ್ಬ
ವೀರ ಜಂಗಮನ ಹೇಣತಿ ಕೆಣಕಲು
ಮಾರಿಗೋಲಿಯೊಳು ಮರಣಹೊಂದಿದಾ ||ಅ.ಪ.||

ಸನುಮತಿಯಲ್ಲಿ ಸಾಧು ಸಜ್ಜನ ಸಂಪ್ರೀತನು
ಧನ ಸಿರಿ ಕನಕ ವಸ್ತು ಕೈಗೊಂಡು ಮೆರೆವ ಸಂಪ್ರೀತನು
ಗಣಗಣರತ್ನ ವಾಣಿಜ್ಯ ಕುಲಜಾತನು
ಅನುದಿನ ಕೂಡಿ ನಡೆವ ಸ್ನೇಹಿತ ಮಾಂತಯ್ಯನ ಪ್ರೀತನು
ಏನು ಹೇಳಲಿ ತನಗಾಗುವ ಹಾನಿಯು
ಕಣಗಾಣದೆ ಕೆಟ್ಟ ಹೆಣ್ಣಿನ ಸಂಗದಿ
ಮುಣ್ಣುಗೂಡಿಸಿ ಮಾಯದ ಉರ್ಲಗಣ್ಣಿಗೆ
ವಣ ಅಪಮೃತ್ಯುವಿನಿಂದ ಸತ್ತುಹೋದನೈ ||೧||

ಜಡಬುದ್ಧಿಗೆ ಜನ್ಮಾಂತರ ವಿಧಿಕೃತ ಕೂಡಿತು
ತಡೆಯದೆ ವಿಷಯದಿ ಮಾಯವ
ಒಡಲೊಳ್ ಮತ್ಸರ ಮೂಡಿತು
ಅಡಗಿಮಾಡಿ ಉಣಬಸಬೇಕೆಂಬುದು ಕಲಹವ ದೂಡಿತು
ಪ್ರೀತಿಯೆಡೆಗೊಂಡು ಅರಿವಿಲ್ಲದ ಕಲಹಕ ದೂಡಿತು
ನಡೆತಪ್ಪಿತುಯೆಂದೆನೆನುತಲೆ ಜಂಗಮ
ಕಡುರೋಷದಿ ಹಿಡಿದೆದ್ದು ಖಡ್ಲದಿಂ
ಕಡಿಯಲು ಪಕ್ಕದಿ ಎಲುಬು ಮುರಿದು ಶಿರ
ಸಿಡಿಮಿಡಿಗೊಳ್ಳುತಲಿ ಪೊಡವಿಗುದುರಿತೌ ||೨||

ಕೆಲ ಬಲದವರೆಚ್ಚಿಸಲು ಪೋಲೀಸ ಕೇಳಿದಾ
ಅಳವಳಗೊಳುತಲಿ ಮನದೊಳಗತಿ ಕೋಪವ ತಾಳಿದಾ
ಬಲುಗಡ ಕುಲಕರ್ಣಿಗಳ ಕರಿಯಂತ್ಹೇಳಿದಾ
ಒಳಗಿಂದೊಳಗೆ ಬರೆದು ಹುಜೂರರಿಗೆ ರೀಪೋರ್ಟವ ಮಾಡಿದಾ
ಒಳಮಾತಿಲೆ ಅಯ್ಯನ ಕೈ ಖಡ್ಗವ ಕೆಳಗಿಳುಹಿಸಿ
ಎಳೆದೊಯ್ದು ಚಾವಾಡಿಗೆ ಸೆಳೆದು ಪಿಚಂಡಿಯ ಬಿಗಿದು ಬೇಗನೆ
ಕಳುಹಿಸಿ ಸುದ್ದಿ ಹುಬ್ಬಳ್ಳಿಯ ಸ್ಥಳಕ್ಕೆ ||೩||

ಸುದ್ದಿ ಕೇಳಿ ಹುಚ್ಚಪ್ಪತಮ್ಮ ಅತಿ ದುಃಖದಿ ಎದಿ ಬಾಯಿ
ಗುದ್ದಿಕೊಳ್ಳುತ ಬಿದ್ದ್ಹೊರಳಿದ ಭೂಮಿಗೆ ಶೋಕದಿ ಸತಿ ಸುತ-
ರಿದ್ದರಾತ್ಮ ಬಾಂಧವರು ಬಂದರಲ್ಲೇ ರೌದ್ರದಿ-
ಸಧ್ಯಕ್ಕ್ಹೋಗಿ ಹೆಣ ಹುಗಿಯಲು ನಡೆದರು ದಗ್ಧದೀ
ಮಧ್ಯರಾತ್ರಿಯಲೆದ್ದು ಶ್ರವಕ ಮಣ್ಣ
ಮುದ್ದಿಯೊಳಗೆ ಮುಚ್ಚಿಟ್ಟ ವಾರ್ತಿಯದು
ಚೋದ್ಯವಾಯಿತು ಶಿಶುನಾಳಧೀಶನಿಗೆ
ತಿದ್ದಿ ನಿನಗೆ ನಾ ತಿಳಿಸಿದೆ ಗೆಳತಿ ||೪||

****

 

Tagged:

Leave a Reply

Your email address will not be published. Required fields are marked *

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...