ಸುಂದರ ಈ ನಾಡು – ನಮ್ಮ
ಕಲಿಗನ್ನಡ ನಾಡು
ಸ್ಫೂರ್ತಿಯ ನೆಲೆವೀಡು – ಅದ
ರಿಂದಲೇ ಈ ಹಾಡು
ಬೆಳ್ಗೊಳ ಪಟ್ಟದಕಲ್ಲು – ಹಾಳ್
ಹಂಪೆಯ ಮೂರ್ತಿಯ ಸೊಲ್ಲು
ಅರಿಯುತಲಿ ಏಳು – ಅರಿತು
ಕನ್ನಡತನ ಮೈ ತಾಳು
ಕೀರ್ತನೆ ಚಂಪೂ ವಚನ – ವಿವಿಧ
ಪದಗಳ ಆದಿ ಕವನ
ಹರಿದಿಹ ನುಡಿ ಗಂಗೆಯಲಿ – ಮಿಂದು
ಕನ್ನಡಕೆ ಮನ ಸಲಿಸು
ಪುಲಕೇಶಿ ನೃಪತುಂಗ – ವೀರ
ಚೆನ್ನಮ್ಮಾಜಿಯ ರಂಗ
ಮಣ್ಣಿನ ಸತ್ವವನರಿತು – ಆದ
ಅನ್ಯಾಯಕೆ ದನಿ ಎತ್ತು
ಕದಂಬ ಹೊಯ್ಸಳ ಗಂಗ – ವೀರ
ರಕ್ಕಸ ತಂಗಡಿ ರಂಗ
ಚಿತ್ರವ ಕಣ್ಣಲಿ ಹಿಡಿದು – ನಮ್ಮ
ವಿರೋಧಿಗಳಿಗೆದೆ ಒಡ್ಡು
*****
Related Post
ಸಣ್ಣ ಕತೆ
-
ಸಾವು
ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…
-
ಮರೀಚಿಕೆ
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…
-
ಕರಾಚಿ ಕಾರಣೋರು
ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…
-
ದುರಾಶಾ ದುರ್ವಿಪಾಕ
"ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…
-
ಜೀವಂತವಾಗಿ…ಸ್ಮಶಾನದಲ್ಲಿ…
ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…