ಕನ್ನಡ ನಾಡು

ಸುಂದರ ಈ ನಾಡು – ನಮ್ಮ
ಕಲಿಗನ್ನಡ ನಾಡು
ಸ್ಫೂರ್ತಿಯ ನೆಲೆವೀಡು – ಅದ
ರಿಂದಲೇ ಈ ಹಾಡು
ಬೆಳ್ಗೊಳ ಪಟ್ಟದಕಲ್ಲು – ಹಾಳ್
ಹಂಪೆಯ ಮೂರ್ತಿಯ ಸೊಲ್ಲು
ಅರಿಯುತಲಿ ಏಳು – ಅರಿತು
ಕನ್ನಡತನ ಮೈ ತಾಳು
ಕೀರ್ತನೆ ಚಂಪೂ ವಚನ – ವಿವಿಧ
ಪದಗಳ ಆದಿ ಕವನ
ಹರಿದಿಹ ನುಡಿ ಗಂಗೆಯಲಿ – ಮಿಂದು
ಕನ್ನಡಕೆ ಮನ ಸಲಿಸು
ಪುಲಕೇಶಿ ನೃಪತುಂಗ – ವೀರ
ಚೆನ್ನಮ್ಮಾಜಿಯ ರಂಗ
ಮಣ್ಣಿನ ಸತ್ವವನರಿತು – ಆದ
ಅನ್ಯಾಯಕೆ ದನಿ ಎತ್ತು
ಕದಂಬ ಹೊಯ್ಸಳ ಗಂಗ – ವೀರ
ರಕ್ಕಸ ತಂಗಡಿ ರಂಗ
ಚಿತ್ರವ ಕಣ್ಣಲಿ ಹಿಡಿದು – ನಮ್ಮ
ವಿರೋಧಿಗಳಿಗೆದೆ ಒಡ್ಡು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಪ್ತಮಿತ್ರ
Next post ಮರೆತೆ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

cheap jordans|wholesale air max|wholesale jordans|wholesale jewelry|wholesale jerseys