ಮರೆತೆ

ಬಾಳುವೆಯ ಗೂಡೊಳಗೆ ತತ್ತಿಯಿದನೆಂದು
ಮೃತ್ಯು ತಾನಿಕ್ಕಿ ಮೆಯ್ಗರೆಯಿತೆನಗರಿವೆ?
ಆಸೆಯಾ ಗರಿಗೆದರಿ ಬಯಲಲಲೆವಂದು
ನಿನ್ನನಾಂ ಮರೆತೆ, ಮರೆತೆನ್ನ ತಿರಿತಿರಿವೆ! ೪
ಬಾಸೆಯಂ ಬೇಡಿ ನಾನರಚುವಂದೆನ್ನ
ಕಯ್ಯೊಳಾರ್ಮರಸಿಟ್ಟರೀ ಗಿರಿಕೆಯನ್ನ?
ನಾನರಿಯೆ, ಗುಲ್ಲನಿದನಾಡಿಸುತ ನಿನ್ನ
ಮರೆತೆನೊಯ್ಯನೆ ಮರೆತೆ ಮನವಿಯನ್ನೆನ್ನ! ೮
* *
ತಿರುತಿರುಗಿ ಬಿರಿದುದೀ ಗಿರುಗಟೆಯ ಬಳಲು!
ಇರುಳ ಕಾರೆರಕೆ ಬೆಂಬತ್ತುತಿದೆ ಸರಿಸಂ!-
ನೆನವರಿವುದೀಗೆರೆಯ, ನಿನ್ನ ಹೆಸರಾಂತು
ಕಂಗಳಿಂ ಕರೆವುದೆನ್ನೆದೆಯುಕ್ಕುವಳಲು! ೧೨
ಕಣ್ದೆರೆಯ, ನಿನ್ನ ಕಣ್ಣೆಂದುಮಿನಿದೆರಸಂ1
೨ಮರಸದೆನ್ನಲಿ ಎನ್ನು! – ನಿರವಿಸೆನಗಿಂತು!
*****
೧ ಇನಿದಾದ ಉನ್ಮೀಲನ
೨ ಮರೆಯಾಗಿಸದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ ನಾಡು
Next post ಆಯುಷ್ಯ ವರ್ಧಕವಾದ ಮೊಸರು

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…