Home / ಲೇಖನ / ವಿಜ್ಞಾನ / ಆಯುಷ್ಯ ವರ್ಧಕವಾದ ಮೊಸರು

ಆಯುಷ್ಯ ವರ್ಧಕವಾದ ಮೊಸರು

ಬಲ್ಗೇರಿಯಾ ದೇಶದಲ್ಲಿ ಶತಾಯುಷಿಗಳ ಆಯುಷ್ಯದ ಗುಟ್ಟೇನು? ಎಂದು ತಿಳಿಯಲು ವಯೋವೃದ್ದರನ್ನು (ನೂರಾರುಜನ) ಬೇಟಿ ಮಾಡಿ ಪರೀಕ್ಷಿಸಿದಾಗ ಅದರಲ್ಲಿ ಸೆ. ೯೦ ಭಾಗ ಮೊಸರನ್ನೇ ಹೇರಳವಾಗಿ ಉಪಯೋಗಿಸುತ್ತಿದ್ದರೆಂದು ತಿಳಿದು ಬಂದಿತು. ಇದರಿಂದಾಗಿ ಸರಳವಾಗಿ ಮೊಸರಿನಲ್ಲಿರುವ ಆಯುಷ್ಯವರ್‍ಧಕದ ಸತ್ಯ ಬೆಳಕಿಗೆ ಬಂದಿತು. ಇದರಂತೆ ರಷಿಯಾದ ಪ್ರಖ್ಯಾತ ಆಹಾರ ತಜ್ಞ ಹಾಗೂ ಸಂಶೋಧಕರೂ ಆದ ಡಾ|| ಮೆಜ್‌ನಿಕೋಫ್‌ರವರು ಮೊಸರಿನಿಂದ ಅಕಾಲ ಮುಪ್ಪನ್ನು ತಡೆಗಟ್ಟಬಹುದಲ್ಲದೇ ಕರುಳಿಗೆ ಸಂಬಂಧಿಸಿದ ರೋಗಗಳನ್ನು ನಿವಾರಿಸಬಹುದೆಂದು ವೈಜ್ಞಾನಿಕವಾಗಿ ಸಾಬೀತುಪಡಿಸಿದರು. ಮೊಸರಿಗೆ ಪ್ರಸಿದ್ಧಿ ಪಡೆದಿದ್ದ ಬಲ್ಗೇರಿಯಾ ನಂತರ ಇರಾನ್, ಇರಾಕ್ ರಷಿಯಾ, ಮತ್ತು ಯುರೋಪಿಗಳಿಗೆ ಈ ಪ್ರಸಿದ್ಧಿಯನ್ನು ಬಿಟ್ಟುಕೊಟ್ಟಿತು. ಸ್ವಾರಸ್ಯವೆಂದರೆ ರಷಿಯಾದಲ್ಲಿ ಹಸು, ಎಮ್ಮೆಗಳ ಹಾಲಿನಿಂದಲ್ಲದೇ ಕುರಿ, ಕತ್ತೆ ಮತ್ತು ಆಡುಗಳ ಹಾಲಿನಿಂದಲೂ ಈ ಮೊಸರನು ಹೇರಳವಾಗಿ ತಯಾರಿಸಲಾಗುತ್ತದೆ.

ಮೊಸರಿನ ಸೇವನೆಯಿಂದ ಕರುಳಿನಲ್ಲಿನ ಬಹು ಅವಶ್ಯಕ ಜೀವಾಣುಗಳಾದ ಲೆಕ್ಟೋಬೆಸಿಲಿಸ್ ಹಾಗೂ ಎಫಿಡೋಫಿಲಸ್ ಬಲಗೊಳ್ಳುತ್ತವೆ. ಇವು ಕರುಳಿಗೆ ಬಂದು ತಲುಪುವ ಆಹಾರವನ್ನು ದೀರ್‍ಘಕಾಲ ಕೊಳೆಯದಂತೆ ಕಾಪಾಡುವುದಲ್ಲದೇ ಆಹಾರದಲ್ಲಿರಬಹುದಾದ ಮಾರಕ ಸೂಕ್ಷ್ಮ ಜೀವಿಗಳನ್ನು ನಾಶಪಡಿಸುವ ಗುಣ ಈ ಮೊಸರಿಗಿದೆ. ಪ್ರೊ. ಮೆಜ್‌ನಿಕೊಫ್‌ರವರ ಅಭಿಪ್ರಾಯದಂತೆ ಮನುಷ್ಯನ ದೊಡ್ಡ ಕರುಳಿನಲ್ಲಿರುವ ಕೆಲ ಜೀವಾಣುಗಳೇ ಅಕಾಲಮುಪ್ಪಿಗೆ ಹಾಗೂ ನಿಯಂತ್ರಣಕ್ಕೆ ಮೂಲ ಕಾರಣವಾಗುತ್ತವೆ. ಅದನ್ನು ಮೊಸರಿನ ಸೇವನೆಯಿಂದ ನಾಶಪಡಿಸಬಹುದು. ಕ್ಷಯರೋಗ, ಕಾಲರ, ವಿಷಮಸೀತಜ್ವರಗಳಿಗೆ ಕಾರಣವಾಗುವ ಅಂತಹ ಬ್ಯಾಕ್ಟಿರಿಯಾಗಳನ್ನು ಮೊಸರಿನಲ್ಲಿರಿಸಿದರೆ ಅವು ಸಾಯುತ್ತವೆ ಎಂಬುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಇದು ಪೌಷ್ಟಿಕಾಂಶಗಳ ಆಹಾರ ಶುದ್ಧಮೊಸರಿನಲ್ಲಿ ಶೇ.೭ ರಷ್ಟು ಕೊಬ್ಬು ೩-೨ರಿಂದ ೩-೪ ರಷ್ಟು ಪ್ರೋಟಿನ್, ೫ ರಷ್ಟು ಲಾಕ್ಟಿಕ್ ಆಸಿಡ್, ೦.೧೪ ರಷ್ಟು ಕ್ಯಾಲ್ಸಿಯಂ, ೦.೦೯ ದಷ್ಟು ರಂಜಕ, ೦.೩ ರಷ್ಟು ಕಬ್ಬಿಣ ೫ ರಷ್ಟು ಲೆಕ್ಟೋಸ್ ಹಾಗೂ ೮೨ ರಿಂದ ೮೮ ಭಾಗ ನೀರು ಇರುತ್ತದೆ. ಡಾ || ವಿಲಿಯಂ ಮೈಕಿನ್ ಎಂಬ ಆಹಾರ ವಿಜ್ಞಾನಿಯು ಹಾಲಿಗಿಂತಲೂ ಮೊಸರಿನ ಸೇವನೆಯಿಂದ ಹೆಚ್ಚಿನ ಪಚನಶಕ್ತಿಯಾಗುತ್ತದೆಂದು ಹೇಳುತ್ತಾರೆ. ಇದು ಮೂತ್ರಪಿಂಡವು ಸಮರ್ಪಕವಾಗಿ ಕಾರ್‍ಯ ನಿರ್ವಹಿಸುವಂತೆಯೂ ನೋಡಿಕೊಳ್ಳುತ್ತದೆ.

ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಮೊಸರುಬೇಗನೇ ಹೆಪ್ಪು ಗಟ್ಟುತ್ತದೆ. ಚಾಳಿಗಾಲದಲ್ಲಿ ಮೊಸರನ್ನು ಪಾತ್ರೆಯೊಳಗೆ ಚನ್ನಾಗಿ ಲೇಪಿಸಿ ನಂತರ ಉಗುರುಬೆಚ್ಚಿಗಿನ ಹಾಲನ್ನು ಅದರೊಳಗೆ ಸುರಿದು ಸ್ವಲ್ಪ ಮೊಸರನ್ನು ಅದರ ಮೇಲೆ ಬೆರಸಬೇಕು. ಆ ನಂತರ ಪಾತ್ರೆಯ ಬಾಯಿಗೆ ಬಟ್ಟೆಯನ್ನು ಬಿಗಿಯಾಗಿಕಟ್ಟಿ ಬಿಸಿಲಿನಲ್ಲಿಡಬೇಕು. ಈ ಸುಧಾರಿತ ವಿಧಾನದಲ್ಲಿ ೨-೩ ತಾಸುಗಳಲ್ಲಿಯೇ ಹಾಲು ಹೆಪ್ಪುಗಟ್ಟಿ ಮೊಸರಾಗುತ್ತದೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...