ನಾನು ಬದುಕುತ್ತೇನೆ

ಸ್ಫರದ್ರೂಪಿ ಯವಕನೊಬ್ಬ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉನ್ನತ ಅಧಿಕಾರಿಯಾಗಿದ್ದ. ಅವನು ತನ್ನ ತಾಯಿ ತಂದೆ ಸಂಬಂಧಿಕರೊಂದಿಗೆ ಬಂದು ಆ ಚೆಲುವಾದ ಹುಡುಗಿಯನ್ನು ನೋಡಿದ. ಅವಳ ಮಾತು, ಅರ್ಹತೆಗಳೆಲ್ಲ ಅವನಿಗಿಷ್ಟವಾದವು. ಹುಡುಗಿಯೂ ಅವನನ್ನು ಮೆಚ್ಚಿಕೊಂಡಳು.

ಎರಡೂ ಕಡೆಯ ಹಿರಿಯರು ಮಾತುಕತೆ ಆರಂಭಿಸಿಯೇಬಿಟ್ಟರು.

“ನಮ್ಮ ಮಗನಿಗೆ ಒಂದು ಲಕ್ಷ ವರದಕ್ಷಿಣೆ ಕೊಡಬೇಕು” ಹುಡುಗನ ತಾಯಿ ಮೊದಲು ಬೇಡಿಕೆ ಇತ್ತಳು.

“ಕಿಮ್ಮತ್ತಿನ ಎರಡು ಜತೆ ಬಟ್ಟೆ, ಉಂಗುರ, ಚೈನು, ವಾಚು ಕೊಡಬೇಕು” ಸಂಬಂಧಿಕರಲ್ಲಿ ಒಬ್ಬರು ತಮ್ಮ ಅಹವಾಲು ಸಲ್ಲಿಸಿದರು.

“ನನಗೆ ಓಡಾಡಲು ಇಂಡಿಕಾ ಕಾರು ಬೇಕು” ಹುಡುಗ ತನ್ನ ಡಿಮ್ಯಾಂಡ್ ಮುಂದಿಟ್ಟ.

“ನಮ್ಮ ಹುಡುಗ ದೊಡ್ಡ ಸ್ಥಾನದಲ್ಲಿದ್ದವನು. ಅವನ ಮದುವೆಯನ್ನು ನಾವು ಹೇಳಿದ ಕಲ್ಯಾಣ ಮಂಟಪದಲ್ಲಿಯೇ ಮಾಡಿಕೊಡಬೇಕು” ಎಂದು ಕರಾರು ಹಾಕಿದರು ಹುಡುಗನ ತಂದೆ.

ಇದುವರೆವಿಗೂ ಸುಮ್ಮನೆ ಕುಳಿತಿದ್ದ ಹುಡುಗಿಯ ಕಡೆಯ ಹಿರಿಯರೊಬ್ಬರು: “ವರೋಪಚಾರದಲ್ಲಿ ಕೊರತೆ ಇರುವುದಿಲ್ಲ. ನಿಮ್ಮ ಮರ್ಯಾದೆಗೆ ಕುಂದು ಬಾರದಂತೆ ನಾವು ಮದುವೆ ಮಾಡಿಕೊಡುತ್ತೇವೆ. ಆದರೆ ಇಂಥದ್ದೆ ಬೇಕು. ಇಷ್ಟು ಬೇಕು ಎಂದು ಗೆರೆಕೊರೆದು ಹೇಳಬೇಡಿರಿ” ಎಂದರು.

ಅವರು ಮಾತಿನಿಂದ ವ್ಯಗ್ರಗೊಂಡ ಹುಡುಗನ ತಾಯಿ “ನಾವೇನು ಭಿಕಾರಿಗಳಲ್ಲ” ಎಂದಳು.

“ಅಂಥವರಾಗಿದ್ದರೆ ಎಷ್ಟೊ ಒಳ್ಳೆಯದಿತ್ತು. ಕನಿಷ್ಟ ಪಕ್ಷ ಅವರಿಗೆ ಮನುಷ್ಯತ್ವವಾದರೂ ಇರುತ್ತಿತ್ತು. ನೀವು ದರೋಡೆಕೋರರು!” ಬಾಗಿಲಲ್ಲಿ ನಿಂತು ಹೇಳಿದಳು ಹುಡುಗಿ.

ಅವಳ ಮಾತಿನಿಂದ ಅಪಮಾನಿತರಾದ ಹುಡುಗನ ಕಡೆಯವರ ಮೂಗಿನ ಹೊರಳೆ ಹಿಗ್ಗಿದವು. “ಹುಡುಗಿ ಮದುವೆ ಮೊದಲೆ ಹೀಗೆ. ನಾಳೆ ಏನು ಗತಿ?” ಅವರ ಜತೆಗೆ ಬಂದ ಮುದುಕ ಮುಖದ ಮೇಲೆ ಹೊಡೆದಂತೆ ಹೇಳಿದ.

“ಹುಡುಗಿ ಒಳ್ಳೆಯವಳು. ಆದರೆ ನೇರ” ಮೊಮ್ಮಗಳನ್ನು ಸಮರ್ಥಿಸಿಕೊಂಡಳು ಅಜ್ಜಿ.

“ನೀವು ನ್ಯಾಯವಾಗಿ ಮಾತಾಡಿರಿ” ಎಂದರು ಹುಡುಗಿಯ ತಂದೆ.

“ಅಪ್ಪ ಇವರೊಂದಿಗೆ ಚೌಕಾಸಿ ವ್ಯವಹಾರ ಬೇಡ” ನಿಷ್ಠುರವಾಗಿ ಹೇಳಿದಳು ಹುಡುಗಿ.

ಹುಡುಗನ ಕಡೆಯವರು ಎದ್ದು ಬಿರುಗಾಳಿಯಂತೆ ಹೊರಟರು. ಹುಡುಗನ ತಾಯಿ ಹೊಸ್ತಿಲು ದಾಡುವಾಗ “ಈ ಜನ್ಮದಲ್ಲೇ ನಿನಗೆ ಮದುವೆ ಆಗುವುದಿಲ್ಲ” ಎಂದು ಶಪಿಸಿದಳು.

“ಆಗದಿದ್ದರು ಚಿಂತೆಯಿಲ್ಲ. ನಾನು ಬದುಕುತ್ತೇನೆ” ಗಟ್ಟಿಯಾಗಿ ಹೇಳಿದಳು ಹುಡುಗಿ.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾಡು-ಪಾಡು
Next post ಅಕ್ಕ ನೀ ಕೇಳವ್ವ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…