ಮೊನ್ನೆತನಕ ಎಲ್ಲ ಚೆನ್ನಾಗಿತ್ತು ಗೆಳೆಯ
ಸರಳ ಸಮರ್ಪಕ ಸೂತ್ರಬದ್ಧ
ಇದ್ದಕ್ಕಿದ್ದಂತೆ ದನಿಯೊಡೆದೆ ಈಗ
ಕನ್ನೆಮಾಡದ ಕನಸಮುಗ್ಧ
ಹಸಿರು ಹಾವು ಅಸಂಖ್ಯ
ಉಸಿರುಗಟ್ಟಿಸುವಂತೆ
ಹರಿದುಬಂದವು ಹತ್ತುದಿಕ್ಕಿನಿಂದ
ಕುಡಿದು ಮಲಗಿದ್ದವನ
ಕಡಿದು ಹೋದವು ಸತ್ತು
ಬೆಸಲಾದೆ ಹೊಸಬ ಅದೆ ದೇಹ ಹೊತ್ತು
ನಿದ್ದೆ ಸಾಕು ಇನ್ನು ಗದ್ದೆ ನಡುವೆ
ನಿಂತು ದುಡಿಯುತ್ತೇನೆ ಗುದ್ದಲಿಯೊಡನೆ
ಕಾಲಕಾಲಕ್ಕೆ ಮಳೆ ಸರಿಯಾಗಿ ಬರಲಿ
ಹಸಿರುಕ್ಕಿಸುತ್ತೇನೆ ಬಂಜರೆದೆಗೆ
*****
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)
- ಕಾಣ್ಕೆ ಬೇರಾದರೂ ಕರುಳು ಒಂದೇ - January 21, 2021
- ಒಪ್ಪಿಕೊ ಪರಾಭವ! - January 14, 2021
- ಕದನ ವಿರಾಮದ ಮಾತು - January 7, 2021