ಚಂದ್ರೋದಯ

ಇದೊ! ಹಾ! ಬಾಂದಳದೊಳ್‌ ವಿರಾಜಿಸುದುದೈ ಚಂದ್ರೋದಯಂ. ಮೋಡಮಿ-
ಲ್ಲದ ಬಾಂಬಟ್ಟೆಯೊಳೊಯ್ಯನೊಯ್ಯನೆ ಶಶಾಂಕಂ ಪಚ್ಚೆ ವೋದಂ, ಮುಳುಂ
ಗಿದುದೆಲ್ಲ ಕದಿರೊಳ್‌ ನೆಲಂ; ತೊರೆದುದೈ ನಿಮ್ನೋನ್ನತಾವಸ್ಥೆಯಂ,
ಸುದೆಯಿಂಮಿಂದವೊಲೀಗಳೀ ಪ್ರಕೃತಿ ಮೌನಂಗೊಂಡು ಸಂಶೋಭಿಕುಂ ||೧||

ಒಲವಿಂ ಚುಂಬಿಸಿ ನಾಡೆ ಬೆಟ್ಟದುದಿಯಂ, ವಾರೀತರಂಗಂಗಳೊಳ್
ನಲವಿಂ ನರ್ತಿಸಿ, ಚಂದ್ರಕಾಂತಿ ದಡದೊಳ್‌ ಮೆಲ್ನಿದ್ದೆಯಂಗೊಂಡುದೈ.
ಎಲೆಯೊಳ್‌ ನಿಟ್ಟುಸಿರಿಟ್ಟು ಸಂಚರಿಪುದೈ ತಂಗಾಳಿಯುಂ; ಕೂಡೆ ಮೆ
ಲ್ಲುಲಿಯಂ ಗೈವ ತರಂಗದಿಂ ಪ್ರವಹಿಸುತ್ತಂ, ಪಾರ್ವುದೈ ನಿರ್ಝರಂ ||೨||

ಅಮೃತಂ ನಿನ್ನೊಳಗಿರ್ಪುದೆಂದು ನುಡಿವರ್‌, ನೋಡಲ್ಕಿದೇಂ ಸತ್ಯಮೇಂ!
ಅಮಮಾ! ಚಂದ್ರನೆ! ಶುಕ್ಲ ಚಂದ್ರ! ರಜನೀ ಕಂಠಾವಲಂಬೀಮಣೀ!
ಭ್ರಮೆಯಿಂ ಜೀವನಮಾರ್ಗದೊಳ್‌ ನಡೆದು ಗಾಯಂ ಪೊಂದಿದೆಂ ಕಂದಿದೆಂ
ತಮಮಂ ನೀಗುತೆ ತಣ್ಪನೊಂದಿಸು! ನಿಶಾಕಾಂತ ಪ್ರಶಾಂತಪ್ರಭಾ ||೩||

ಅಹಹಾ! ಸತ್ಯಮೆ ಸತ್ತವರ್‌ ಬಿಡದೆ ನಿನ್ನಂ ಸೇರ್ವರೆಂಬುಕ್ತಿಯುಂ!
ಗೃಹದಾರಾತನುಜರ್ಕಳಂ ತೊರದು, ನಿನ್ನಾ ಲೋಕಮಂ ಸೇರಿ ಮೇ
ಣಿಹದೊಳ್ ದುಃಖಿಪ ಮರ್ತ್ಯರಂ ನಗುವಿನಿಂ ನೋಡುತ್ತೆ, ನಿನ್ನಂತೆವೊಲ್
ಮಹಿಯೊಳ್ ದೇವಮಹತ್ವಮಂ ತಿಳುಪಲೆಂತೋ ಪಾರ್ವುದೆನ್ನೀ ಮನಂ ||೪||
(ಸುವಾಸಿನಿ ೧೯೦೨)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಸಬ
Next post ನಿಜ ಒತ್ತಾಯಮಾಡುತ್ತದೆ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…