Home / ಕವನ / ಅನುವಾದ / ನಿಜ ಒತ್ತಾಯಮಾಡುತ್ತದೆ

ನಿಜ ಒತ್ತಾಯಮಾಡುತ್ತದೆ

ನಾವು ಇದನ್ನೂ ಹೇಳಬೇಕೆಂದು
ನಿಜ ಒತ್ತಾಯ ಮಾಡುತ್ತದೆ :
‘ಬದುಕು ಸಾಗುತ್ತದೆ.’
ಕ್ಯಾನೆ, ಬೊರೊಡಿನೋಗಳಲ್ಲಿ
ಕೊಸೊವೊ ಪೊಲ್ಯೆ, ಗುರೆನಿಕಾಗಳಲ್ಲಿ
ಬದುಕು ಸಾಗುತ್ತದೆ.
ಜೆರಿಕೋದ ಪುಟ್ಟ ಸರ್ಕಲ್ಲಿನಲ್ಲಿ
ಒಂದು ಪೆಟ್ರೋಲ್ ಬಂಕಿದೆ,
ಬಿಲಾಹೊರಾದ ಪಾರ್ಕಿನ ಬೆಂಚಿಗೆ
ಬಳಿದ ಬಣ್ಣಹಸಿಯಾಗಿದೆ.
ಪರ್ಲ್ ಹಾರ್ಬರಿನಿಂದ ಹೇಸ್ಟಿಂಗ್ಸ್ ಗೆ
ಪತ್ರಗಳು ರವಾನೆಯಾಗುತ್ತವೆ,
ಚೆರೊನಿಯಾದ ಸಿಂಹ ಪ್ರತಿಮೆಯ ಮುಂದೆ
ವ್ಯಾನು ಸಾಗುತ್ತದೆ,
ವೆರ್ಡನ್‍ನ ತೋಟಗಳು
ಬರಲಿರುವ ವಸಂತನ ತಪ್ಪಿಸಿಕೊಳ್ಳಲಾರದಿವೆ.
ಎಲ್ಲವೂ ಎಷ್ಟೊಂದಿದೆಯೆಂದರೆ
ಏನನ್ನೂ ಪೂರ್ತಿ ಬಚ್ಚಿಡಲಾಗುವುದಿಲ್ಲ.
ಅಕ್ಟಿಯಂನಲ್ಲಿನಿಂತ ವಿಹಾರ ದೋಣಿಯಿಂದ
ಸಂಗೀತದ ಮಳೆ ಸುರಿದಿದೆ,
ಡೆಕ್ಕಿನ ಮೇಲೆ
ಇಳಿ ಬಿಸಿಲಲ್ಲಿ ದಂಪತಿಗಳ
ನರ್ತನ ಸಾಗಿದೆ.
ಯಾವಾಗಲೂ ಎಷ್ಟೊಂದೆಲ್ಲ ನಡೆಯುತ್ತೆದೆಂದರೆ
ಎಲ್ಲಾ ಮತ್ತೆಮತ್ತೆ ಆಗುತ್ತಲೇ ಇದೆ ಅಂತನ್ನಿಸುತ್ತದೆ.
ಮನೆ ಬಿದ್ದ ಎಡೆಯಲ್ಲಿ
ಒಳ್ಳೆಯ ಮನುಷ್ಯನನ್ನು
ಮಕ್ಕಳು ಪೀಡಿಸುತ್ತಿವೆ.
ಹಿರೋಷಿಮಾ ಇದ್ದ ಎಡೆಯಲ್ಲಿ
ಹಿರೋಷಿಮಾ ಮತ್ತೆ‌ಎದ್ದಿದೆ.
ದಿನ ಬಳಕೆಯ ಸಾವಿರ ಸಾಮಾನು
ತಯಾರಿಸಿದೆ.
ಈ ಭಯಂಕರ ಜಗತಿನಲ್ಲಿ
ಎದ್ದದ್ದು ಸಾರ್ಥಕ ಅನಿಸುವ ಹಾಗೆ
ಮಾಡುವ ಮುಂಜಾವಿನ
ಸೌಂದರ್ಯವಿಲ್ಲದೆ ಇಲ್ಲ.
ಬಯಲ ಹುಲ್ಲಿನ ಮೇಲೆ ಇಬ್ಬನಿ ಇದೆ,
ಹುಲ್ಲು ಯಾವಾಗಲೂ ಇರುವಂತೆ.
ಬಹುಶಃ ಎಲ್ಲ ಬಯಲೂ ರಣರಂಗವೇ.
ನಮಗೆ ನೆನಪಿರುವ
ನಮಗೆ ಮರೆತಿರುವ
ಯುದ್ಧಗಳು ನಡೆದ ತಾಣಗಳೇ.
ಬರ್ಚ್, ಸೀಡರ್, ಫರ್ ಕಾಡುಗಳು,
ಬಿಳಿಯ ಹಿಮ, ಬೂದಿ ಮರಳು,
ಕಂದು ಕಲ್ಲು, ಜೌಗು, ಪೊದೆ,
ಎಲ್ಲವೂ ಕಪ್ಟ ಬಂದಾಗ ಅಡಗುವ ತಾಣಗಳೇ.
ಇದೆಲ್ಲದರ ನೀತಿ ಏನು? ಬಹುಶಃ ಏನೂ ಇಲ್ಲ.
ರಕ್ತಹರಿಯುತ್ತದೆ, ರಕ್ತ ಒಣಗುತ್ತದೆ.
ಎಂದಿನಂತೆ ಕೆಲವು ನದಿಗಳು
ಕೆಲವು ಮೋಡಗಳು.
ದರಂತ ತುಂಬಿದ
ಪರ್ವತ ಕಣಿವೆಗಳಲ್ಲಿ
ಗಾಳಿ ಬೀಸಿ,
ಮೈ ಮರೆತು ನಡೆದವನ ಹ್ಯಾಟನ್ನು
ಹಾಯ್ದು ಹಾರಿಸಿದಾಗ
ನಾವು ನಗದೆ ಇರಲು ಸಾಧ್ಯವಿಲ್ಲ.
*****
ಮೂಲ: ವಿಸ್ಲಾವಾ ಝ್ಯಿಂಬ್ರೊಸ್ಕ

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...