Home / ಕವನ / ಅನುವಾದ / ನಿಜ ಒತ್ತಾಯಮಾಡುತ್ತದೆ

ನಿಜ ಒತ್ತಾಯಮಾಡುತ್ತದೆ

ನಾವು ಇದನ್ನೂ ಹೇಳಬೇಕೆಂದು
ನಿಜ ಒತ್ತಾಯ ಮಾಡುತ್ತದೆ :
‘ಬದುಕು ಸಾಗುತ್ತದೆ.’
ಕ್ಯಾನೆ, ಬೊರೊಡಿನೋಗಳಲ್ಲಿ
ಕೊಸೊವೊ ಪೊಲ್ಯೆ, ಗುರೆನಿಕಾಗಳಲ್ಲಿ
ಬದುಕು ಸಾಗುತ್ತದೆ.
ಜೆರಿಕೋದ ಪುಟ್ಟ ಸರ್ಕಲ್ಲಿನಲ್ಲಿ
ಒಂದು ಪೆಟ್ರೋಲ್ ಬಂಕಿದೆ,
ಬಿಲಾಹೊರಾದ ಪಾರ್ಕಿನ ಬೆಂಚಿಗೆ
ಬಳಿದ ಬಣ್ಣಹಸಿಯಾಗಿದೆ.
ಪರ್ಲ್ ಹಾರ್ಬರಿನಿಂದ ಹೇಸ್ಟಿಂಗ್ಸ್ ಗೆ
ಪತ್ರಗಳು ರವಾನೆಯಾಗುತ್ತವೆ,
ಚೆರೊನಿಯಾದ ಸಿಂಹ ಪ್ರತಿಮೆಯ ಮುಂದೆ
ವ್ಯಾನು ಸಾಗುತ್ತದೆ,
ವೆರ್ಡನ್‍ನ ತೋಟಗಳು
ಬರಲಿರುವ ವಸಂತನ ತಪ್ಪಿಸಿಕೊಳ್ಳಲಾರದಿವೆ.
ಎಲ್ಲವೂ ಎಷ್ಟೊಂದಿದೆಯೆಂದರೆ
ಏನನ್ನೂ ಪೂರ್ತಿ ಬಚ್ಚಿಡಲಾಗುವುದಿಲ್ಲ.
ಅಕ್ಟಿಯಂನಲ್ಲಿನಿಂತ ವಿಹಾರ ದೋಣಿಯಿಂದ
ಸಂಗೀತದ ಮಳೆ ಸುರಿದಿದೆ,
ಡೆಕ್ಕಿನ ಮೇಲೆ
ಇಳಿ ಬಿಸಿಲಲ್ಲಿ ದಂಪತಿಗಳ
ನರ್ತನ ಸಾಗಿದೆ.
ಯಾವಾಗಲೂ ಎಷ್ಟೊಂದೆಲ್ಲ ನಡೆಯುತ್ತೆದೆಂದರೆ
ಎಲ್ಲಾ ಮತ್ತೆಮತ್ತೆ ಆಗುತ್ತಲೇ ಇದೆ ಅಂತನ್ನಿಸುತ್ತದೆ.
ಮನೆ ಬಿದ್ದ ಎಡೆಯಲ್ಲಿ
ಒಳ್ಳೆಯ ಮನುಷ್ಯನನ್ನು
ಮಕ್ಕಳು ಪೀಡಿಸುತ್ತಿವೆ.
ಹಿರೋಷಿಮಾ ಇದ್ದ ಎಡೆಯಲ್ಲಿ
ಹಿರೋಷಿಮಾ ಮತ್ತೆ‌ಎದ್ದಿದೆ.
ದಿನ ಬಳಕೆಯ ಸಾವಿರ ಸಾಮಾನು
ತಯಾರಿಸಿದೆ.
ಈ ಭಯಂಕರ ಜಗತಿನಲ್ಲಿ
ಎದ್ದದ್ದು ಸಾರ್ಥಕ ಅನಿಸುವ ಹಾಗೆ
ಮಾಡುವ ಮುಂಜಾವಿನ
ಸೌಂದರ್ಯವಿಲ್ಲದೆ ಇಲ್ಲ.
ಬಯಲ ಹುಲ್ಲಿನ ಮೇಲೆ ಇಬ್ಬನಿ ಇದೆ,
ಹುಲ್ಲು ಯಾವಾಗಲೂ ಇರುವಂತೆ.
ಬಹುಶಃ ಎಲ್ಲ ಬಯಲೂ ರಣರಂಗವೇ.
ನಮಗೆ ನೆನಪಿರುವ
ನಮಗೆ ಮರೆತಿರುವ
ಯುದ್ಧಗಳು ನಡೆದ ತಾಣಗಳೇ.
ಬರ್ಚ್, ಸೀಡರ್, ಫರ್ ಕಾಡುಗಳು,
ಬಿಳಿಯ ಹಿಮ, ಬೂದಿ ಮರಳು,
ಕಂದು ಕಲ್ಲು, ಜೌಗು, ಪೊದೆ,
ಎಲ್ಲವೂ ಕಪ್ಟ ಬಂದಾಗ ಅಡಗುವ ತಾಣಗಳೇ.
ಇದೆಲ್ಲದರ ನೀತಿ ಏನು? ಬಹುಶಃ ಏನೂ ಇಲ್ಲ.
ರಕ್ತಹರಿಯುತ್ತದೆ, ರಕ್ತ ಒಣಗುತ್ತದೆ.
ಎಂದಿನಂತೆ ಕೆಲವು ನದಿಗಳು
ಕೆಲವು ಮೋಡಗಳು.
ದರಂತ ತುಂಬಿದ
ಪರ್ವತ ಕಣಿವೆಗಳಲ್ಲಿ
ಗಾಳಿ ಬೀಸಿ,
ಮೈ ಮರೆತು ನಡೆದವನ ಹ್ಯಾಟನ್ನು
ಹಾಯ್ದು ಹಾರಿಸಿದಾಗ
ನಾವು ನಗದೆ ಇರಲು ಸಾಧ್ಯವಿಲ್ಲ.
*****
ಮೂಲ: ವಿಸ್ಲಾವಾ ಝ್ಯಿಂಬ್ರೊಸ್ಕ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...