Home / ಲೇಖನ / ಇತರೆ / ಕಲಾಂ ಹೀಗಿದ್ದರು

ಕಲಾಂ ಹೀಗಿದ್ದರು

ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ಜೀವಂತವಿದ್ದಾಗಲೇ ದಂತ ಕತೆಯಾದವರು.

ಇವರು ೨೦೦೨ರಲ್ಲಿ ಭವ್ಯ ಭಾರತದ ೧೧ನೆಯ ರಾಷ್ಟ್ರಪತಿಗಳಾಗಿ ಅಧಿಕಾರ ಸ್ವೀಕರಿಸಿದ ಹೊಸತರಲ್ಲಿ ದಿನಾಂಕ ೧೪-೦೮-೨೦೦೨ರಲ್ಲಿ ಬೆಳ್ಳಂಬೆಳಗ್ಗೆ ಬಹುದೊಡ್ಡ ಅಧಿಕಾರಿ ಬಹುಶಃ ಸ್ವಜಾತಿಯೆಂಬ ಸಲುಗೆಯಿಂದಲೋ ಏನೋ ಇವರನ್ನು ಕಾಣಲು ಬಂದಿದ್ದರು.

“ಸಾರ್ ನಿಮ್ಮ ಕಚೇರಿಗೆ ಮೇಲಿಂದ ಮೇಲೆ ಬರುತ್ತಿರುವ ಆ ಅಧಿಕಾರಿ ಬಗೆಗೆ ನಿಮಗೆ ತಿಳಿಯದೆಂದು ಅನಿಸುವುದು! ಆತ…?’ ಎಂದು ಇನ್ನು ಏನೇನೋ ಹೇಳಲು ಉತ್ಸಾಹಕನಾಗಿದ್ದನು.

‘ಕಲಾಂಜೀಯವರು ಮಧ್ಯದಲ್ಲೇ ಆ ವ್ಯಕ್ತಿ ನಿನಗೆ ಪರಿಚಿತರೇ?’ ಎಂದು ಬಂದಿದ್ದ ಅಧಿಕಾರಿಯನ್ನು ಕೇಳಿದರು.

‘ಇಲ್ಲ! ನನಗೆ ಪರಿಚಿತರಲ್ಲ. ನಾನು ಬೇರೊಬ್ಬ ಅಧಿಕಾರಿಯಿಂದ ವಿಷಯ ಸಂಗ್ರಹಿಸಿದ್ದೇನೆ. ಅದನ್ನು ನಿಮಗೆ ಹೇಳಿದರೆ ಸುರಕ್ಷಿತವೆಂದು ಭಾವಿಸಿ ಬಂದಿದ್ದೇನೆ’ ಎಂದ.

‘ನಿಮಗೆ ಅವರು ಗೊತ್ತಿಲ್ಲ. ಇನ್ನೊಬ್ಬರ ಮಾತು ಕಟ್ಟಿಕೊಂಡು ನನ್ನಲ್ಲಿಗೆ ಬಂದಿರುವೆ. ಅದು ಸತ್ಯವೆಂದು ನಿನಗೆ ಖಾತರಿ ಇದೆಯೇ?’ ಎಂದು ಕಲಾಂಜೀಯವರು ಮತ್ತೇ ಬಂದಿದ್ದವರನ್ನು ಪ್ರಶ್ನಿಸಿದರು.

‘ನನಗೆ ಹೇಳಿದವರೂ ನಮ್ಮ ಜಾತಿಯವರು. ಬಹಳ ದೊಡ್ಡ ಅಧಿಕಾರಿಯವರು, ಅವರು ಸುಳ್ಳು ಹೇಳಲಾರನೆಂದು ನಂಬಿಕೆ ನನ್ನದು ಅದನ್ನು ನಿಮಗೆ ಹೇಳಿದರೆ ನಿಮ್ಮ ಪದವಿಗೆ ಒಳ್ಳೆಯದೆಂದು ಬಂದಿರುವೆ’ ಎಂದ.

‘ಅವರಿಗೂ ಇವರಿಗೂ ವೃತ್ತಿ ಮತ್ಸರವಿರಬೇಕು. ಜಾತಿ, ಮತ, ಕುಲ, ಧರ್‍ಮ, ವೈಷಮ್ಯವಿರಬೇಕು. ಇದರಿಂದ ನನಗೇನು ಧಕ್ಕೆಯಾಗದು. ನನಗೇ ನನ್ನದೇ ಆದ ಬಹಳಷ್ಟು ಕೆಲಸಗಳಿವೆ. ಇನ್ನೊಬ್ಬರ ಗೊಡವೆ, ವೈಯಕ್ತಿಕ ವಿವರಗಳು, ನನಗೆ ಬೇಕಿಲ್ಲ! ಇದರಿಂದ ದೇಶಕ್ಕೆ, ವಿಶ್ವಕ್ಕೆ ಏನಾದರೂ ಪ್ರಯೋಜನವಿದೆಯೇ? ಹೇಳಿ ನಾನು ಕಾಲವನ್ನು ಮೀಸಲಿಡುತ್ತೇನೆ…’ ಎಂದು ಕಲಾಂಜೀಯವರು ಬಂದಿದ್ದ ಅಧಿಕಾರಿಗೆ ನೇರವಾಗಿ ಅಂದರು.

ಬಂದಿದ್ದ ಅಧಿಕಾರಿಯ ಟೈ-ಕೋಟು-ಕ್ರಾಪು ಎತ್ತತ್ತಲೋ ಹಾರಿತು! ಅದನ್ನು ಸರಿ ಮಾಡಿಕೊಳ್ಳುತ್ತಾ ಅಲ್ಲಿಂದ ಒಂದೇ ಉಸಿರಿಗೆ ಓಟ ಕಿತ್ತವರು ಇನ್ನೆಂದೂ ಅವರ ಎದುರಿಗೆ ಓಡಾಡಲಿಲ್ಲ.

ಪ್ರತಿ ಮನೆ, ಸಂಘ, ಸಂಸ್ಥೆ, ನಿಗಮ, ಇಲಾಖೆ, ಗುಂಪು… ಕಚೇರಿಯಲ್ಲಿ ಇಂಥವರು ಇರುವವರಲ್ಲವೇ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...