Home / ಕವನ / ಕವಿತೆ / ಉಡಿತುಂಬುವ ಹಾಡು

ಉಡಿತುಂಬುವ ಹಾಡು

ಬಾಳಿಽಯ ಬನ ಚೆಲುವಽ|
ಬಾಳಿಽಯ ಗೊನೊ ಚೆಲುವಽ|
ಬಾಳ್ಯಾಗ ಇರುವ ಗಿಽಣಿ ಚೆಲುವಽಽ| ಸೋಬಾನಮ||
ಬಾಳಿಯಾಗಽಽ ಇರುವ ಗಿಣಿ ಚೆಲುವ ತಮ್ಮನ
ಬಾಗಲಽ ಮಾಟ ಕರಚೆಲುವ| ಸೋ… ||೧||

ನಿಂಬೀಯ ಬನ ಚೆಲುವಾಽ|
ನಿಂಬೀಯ ಗೊನಿ ಚೆಲುವಾಽ|
ನಿಂಬ್ಯಾಗ ಇರುವ ಗಿಣಿಽ ಚೆಲುವ| ಸೋ…
ನಿಂಬಿಯಾಗಽ ಇರುವ ಗಿಣಿ ಚೆಲುವ ತಮ್ಮನ
ಕಂಬಽದ ಮಾಟ ಕರಚೆಲುವ| ಸೋ ||೨||

ನಿಂಬೀಯ ಬನದಾಗ ಚಂದರನ ಕಾವಲ|
ಬಂದಽವರ್‍ಯಾರ ಒಳಹೊರಗಽ| ಸೋ….
ಬಂದುವವಽರ್‍ಯಾರ ಒಳಹೊರಗಽ ತಂಗೆವನ
ಅಪ್ಪದವರಲ್ಲ ಪರಮಂದೆ| ಸೋ… ||೩||

ಬಾಳೀಯ ಬನದಾಗ ಭಾವನ ಕಾವಲ|
ಬಂದಽವರ್‍ಯಾರ ಒಳಹೊರಗಽ| ಸೋ….
ಬಂದುವವಽರ್‍ಯಾರ ಒಳಹೊರಗಽ ತಂಗೆವನ
ಅವ್ವದವರಲ್ಲ ಪರಮಂದೆ| ಸೋ ||೪||

ಅತ್ತಿಕಾಯೀ ತಂದು ಅತ್ತೆ ಉಡಿಯಲಿ ತುಂಬಿ|
ಅತ್ತ್ಯೆದ್ದು ಹರಕಿ ಕುಡತಾಳಽ| ಸೋ…
ಅತ್ತೆಽಯೆದ್ದು ಹರಕಿ ಕುಡತಾಳ ತಂಗೆವಗ
ಹತ್ತು ಮಕ್ಕಽಳ ಹಡೆಯೆಂದು| ಸೋ ||೫||

ಮಾವಿನ ಕಾಯಿ ತಂದು ಮಾವ ಉಡಿಯಲಿ ತುಂಬಿ|
ಮಾಯಽದ ಮಕ್ಕಳ ಹಡೆಯೆಂದು| ಸೋ…
ಮಾಯಽದ ಮಕ್ಕಳ ಹಡೆಯೆಂದು ತಂಗೆವಗ|
ಮಾವ ಬಂದ್ಹರಕಿ ಕೊಡೆತಾನ| ಸೋ ||೬||

ಬಾಳಿಕಾಯೀ ತಂದು ಭಾವ ಉಡಿಯಲಿ ತುಂಬಿ|
ಭಾವ ಎದ್ದು ಹೆರಕಿ ಕೊಡೆತಾನ| ಸೋ…
ಭಾವ ಎದ್ದು ಹರಕಿ ಕೊಡೆತಾನ ತಂಗೆವ್ವಾ|
ಭಾಳ ಮಕ್ಕಽಳ ಹಡೆಯವ್ವಾ| ಸೋ ||೭||

ಅತ್ತಿಂದ ಬಂದಾವ ಮುತ್ತಿನೆರಡಾರೂತಿ|
ಉಪ್ಪರಗಿ ಗಗನ ತುಳುಕೂತ। ಸೋ…
ಉಪ್ಪುವರಗಿಽ ಗಗನ ತುಳುಕೂತ ತಂಗೆವ್ವನ|
ಆತ್ತೆಯಾರೂತಿ ಬೆಳಗ್ಯಾಳ| ಸೋ ||೮||
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...