Home / ಕವನ / ಕವಿತೆ / ಉಡಿತುಂಬುವ ಹಾಡು

ಉಡಿತುಂಬುವ ಹಾಡು

ಬಾಳಿಽಯ ಬನ ಚೆಲುವಽ|
ಬಾಳಿಽಯ ಗೊನೊ ಚೆಲುವಽ|
ಬಾಳ್ಯಾಗ ಇರುವ ಗಿಽಣಿ ಚೆಲುವಽಽ| ಸೋಬಾನಮ||
ಬಾಳಿಯಾಗಽಽ ಇರುವ ಗಿಣಿ ಚೆಲುವ ತಮ್ಮನ
ಬಾಗಲಽ ಮಾಟ ಕರಚೆಲುವ| ಸೋ… ||೧||

ನಿಂಬೀಯ ಬನ ಚೆಲುವಾಽ|
ನಿಂಬೀಯ ಗೊನಿ ಚೆಲುವಾಽ|
ನಿಂಬ್ಯಾಗ ಇರುವ ಗಿಣಿಽ ಚೆಲುವ| ಸೋ…
ನಿಂಬಿಯಾಗಽ ಇರುವ ಗಿಣಿ ಚೆಲುವ ತಮ್ಮನ
ಕಂಬಽದ ಮಾಟ ಕರಚೆಲುವ| ಸೋ ||೨||

ನಿಂಬೀಯ ಬನದಾಗ ಚಂದರನ ಕಾವಲ|
ಬಂದಽವರ್‍ಯಾರ ಒಳಹೊರಗಽ| ಸೋ….
ಬಂದುವವಽರ್‍ಯಾರ ಒಳಹೊರಗಽ ತಂಗೆವನ
ಅಪ್ಪದವರಲ್ಲ ಪರಮಂದೆ| ಸೋ… ||೩||

ಬಾಳೀಯ ಬನದಾಗ ಭಾವನ ಕಾವಲ|
ಬಂದಽವರ್‍ಯಾರ ಒಳಹೊರಗಽ| ಸೋ….
ಬಂದುವವಽರ್‍ಯಾರ ಒಳಹೊರಗಽ ತಂಗೆವನ
ಅವ್ವದವರಲ್ಲ ಪರಮಂದೆ| ಸೋ ||೪||

ಅತ್ತಿಕಾಯೀ ತಂದು ಅತ್ತೆ ಉಡಿಯಲಿ ತುಂಬಿ|
ಅತ್ತ್ಯೆದ್ದು ಹರಕಿ ಕುಡತಾಳಽ| ಸೋ…
ಅತ್ತೆಽಯೆದ್ದು ಹರಕಿ ಕುಡತಾಳ ತಂಗೆವಗ
ಹತ್ತು ಮಕ್ಕಽಳ ಹಡೆಯೆಂದು| ಸೋ ||೫||

ಮಾವಿನ ಕಾಯಿ ತಂದು ಮಾವ ಉಡಿಯಲಿ ತುಂಬಿ|
ಮಾಯಽದ ಮಕ್ಕಳ ಹಡೆಯೆಂದು| ಸೋ…
ಮಾಯಽದ ಮಕ್ಕಳ ಹಡೆಯೆಂದು ತಂಗೆವಗ|
ಮಾವ ಬಂದ್ಹರಕಿ ಕೊಡೆತಾನ| ಸೋ ||೬||

ಬಾಳಿಕಾಯೀ ತಂದು ಭಾವ ಉಡಿಯಲಿ ತುಂಬಿ|
ಭಾವ ಎದ್ದು ಹೆರಕಿ ಕೊಡೆತಾನ| ಸೋ…
ಭಾವ ಎದ್ದು ಹರಕಿ ಕೊಡೆತಾನ ತಂಗೆವ್ವಾ|
ಭಾಳ ಮಕ್ಕಽಳ ಹಡೆಯವ್ವಾ| ಸೋ ||೭||

ಅತ್ತಿಂದ ಬಂದಾವ ಮುತ್ತಿನೆರಡಾರೂತಿ|
ಉಪ್ಪರಗಿ ಗಗನ ತುಳುಕೂತ। ಸೋ…
ಉಪ್ಪುವರಗಿಽ ಗಗನ ತುಳುಕೂತ ತಂಗೆವ್ವನ|
ಆತ್ತೆಯಾರೂತಿ ಬೆಳಗ್ಯಾಳ| ಸೋ ||೮||
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...