ಮೀನಕನ್ಯೆ

ಚಾರು ಶಾರದ ಸಂಧ್ಯೆ,
ನೀರ ನೀಲಾಕಾಶ
ಪೇರಾಳದರ್ಣವವ ಹೋಲುತಿತ್ತು.
ಜಲಸಸ್ಯ ನಿವಹದೊಲು
ಜಲದವಂಚಿನೊಳಿತ್ತು,
ಎಳೆಯ ಪೆರೆ ಪಾತಾಳ ಯಾನದಂತೆ.

ಬಾನಿನಂತರದಲ್ಲಿ
ಮೀನಂತೆ ತೇಲಿದುವು
ವೈನತೇಯಗಳೆರಡು ಗರಿಯಲುಗದೆ.
ಅಡಿಯೊಳಗೆ ನಾನಿದ್ದೆ
ಕಡಲ ಕರುಮಾಡದೊಳು
ಬಿಡುವಿಗೆಳಸುವ ಮೀನಕನ್ಯೆಯಂತೆ.

“ಮೇಲೆ ಮೇಲೇರುತ್ತ
ನೀಲಸೀಮೆಯ ಮೀರೆ
ಲೀಲೆಯಿಂದೋಪನನು ಸೇರಲಳವು.
ಈಯಾಸೆ ಹುಚ್ಚಲ್ಲ,
ಆಯಾಸವಿನಿತಿಲ್ಲ,
ಕಾಯವೂ ನೆರವಿದಕೆ” ಎಂದಿತೊಲವು.

ಬಾಳುಬಾಳನು ಹಾಯ್ದು
ಬಾಳ ನಚ್ಚನು ಹೊಯ್ದು
ಕಾಳೋರಗಾಮಿಯೊಲು ನೆನಹು ನುಸುಳಿ,
“ನೀ ತಿರಸ್ಕೃತೆ, ಅದಕೆ
ಈ ತೆರದ ಬಾಳಾಯ್ತು,
ಏತಕೀ ಬಯಲಾಸೆ ನಿನಗೆಂ”ದಿತು.

ಎಂಥ ಕುಲ, ಎಂಥ ಚಲ,
ಎಂಥ ಮೋಹಕ ಕಾಯ,
ಎಂಥ ಕರಣದ ದೌತ್ಯ, ಮನದ ಮಂತ್ರ!
ಅಂತರಂಗಕೆ ಸಲ್ಲೆ
ಎಂಥ ನೋಂಪಿಯ ನೋಂತು
ಇಂತಿದೆಲ್ಲವ ಪಡೆದೆ! ಎಂತು ವ್ಯರ್ಥ!

ಚಾರು ಶಾರದ ಸಂಧ್ಯೆ,
ನೀರ ನೀಲಾಕಾಶ
ಪೇರಾಳದಬ್ದಿಯನು ಹೋಲುತಿತ್ತು.
ಆ ಮಹಾರ್ಣವ ತಲದಿ
ಕಾಮಹತ ನಾನಿದ್ದೆ
ಪ್ರೇಮವಂಚಿತ ಮೀನಕನ್ಯೆಯಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಡಿತುಂಬುವ ಹಾಡು
Next post ಹೆದರಿಕೆ ಯಾಕೆ?

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…