ಮೀನಕನ್ಯೆ

ಚಾರು ಶಾರದ ಸಂಧ್ಯೆ,
ನೀರ ನೀಲಾಕಾಶ
ಪೇರಾಳದರ್ಣವವ ಹೋಲುತಿತ್ತು.
ಜಲಸಸ್ಯ ನಿವಹದೊಲು
ಜಲದವಂಚಿನೊಳಿತ್ತು,
ಎಳೆಯ ಪೆರೆ ಪಾತಾಳ ಯಾನದಂತೆ.

ಬಾನಿನಂತರದಲ್ಲಿ
ಮೀನಂತೆ ತೇಲಿದುವು
ವೈನತೇಯಗಳೆರಡು ಗರಿಯಲುಗದೆ.
ಅಡಿಯೊಳಗೆ ನಾನಿದ್ದೆ
ಕಡಲ ಕರುಮಾಡದೊಳು
ಬಿಡುವಿಗೆಳಸುವ ಮೀನಕನ್ಯೆಯಂತೆ.

“ಮೇಲೆ ಮೇಲೇರುತ್ತ
ನೀಲಸೀಮೆಯ ಮೀರೆ
ಲೀಲೆಯಿಂದೋಪನನು ಸೇರಲಳವು.
ಈಯಾಸೆ ಹುಚ್ಚಲ್ಲ,
ಆಯಾಸವಿನಿತಿಲ್ಲ,
ಕಾಯವೂ ನೆರವಿದಕೆ” ಎಂದಿತೊಲವು.

ಬಾಳುಬಾಳನು ಹಾಯ್ದು
ಬಾಳ ನಚ್ಚನು ಹೊಯ್ದು
ಕಾಳೋರಗಾಮಿಯೊಲು ನೆನಹು ನುಸುಳಿ,
“ನೀ ತಿರಸ್ಕೃತೆ, ಅದಕೆ
ಈ ತೆರದ ಬಾಳಾಯ್ತು,
ಏತಕೀ ಬಯಲಾಸೆ ನಿನಗೆಂ”ದಿತು.

ಎಂಥ ಕುಲ, ಎಂಥ ಚಲ,
ಎಂಥ ಮೋಹಕ ಕಾಯ,
ಎಂಥ ಕರಣದ ದೌತ್ಯ, ಮನದ ಮಂತ್ರ!
ಅಂತರಂಗಕೆ ಸಲ್ಲೆ
ಎಂಥ ನೋಂಪಿಯ ನೋಂತು
ಇಂತಿದೆಲ್ಲವ ಪಡೆದೆ! ಎಂತು ವ್ಯರ್ಥ!

ಚಾರು ಶಾರದ ಸಂಧ್ಯೆ,
ನೀರ ನೀಲಾಕಾಶ
ಪೇರಾಳದಬ್ದಿಯನು ಹೋಲುತಿತ್ತು.
ಆ ಮಹಾರ್ಣವ ತಲದಿ
ಕಾಮಹತ ನಾನಿದ್ದೆ
ಪ್ರೇಮವಂಚಿತ ಮೀನಕನ್ಯೆಯಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಡಿತುಂಬುವ ಹಾಡು
Next post ಹೆದರಿಕೆ ಯಾಕೆ?

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys