ಆಗೀಗ ಹೂಳೆದ ಚುಕ್ಕಿಗೆ

ಕರೆದೇ ಕರೆದೆ
ಗಂಟಲು ಹರಿವ ತನಕ
ಒಂದೇ ಸಮನೆ ಮೊರೆದೆ.
ತಿರುಗಿದೆಯ ನೀನು
ತಿರುಗುವುದೆ ಬಾನು
ಭೂಮಿಯ ತಾಳಕ್ಕೆ?

ಭೂಮಿಯ ತಾಳಕ್ಕೆ
ಋತುಗಳ ಗಾನಕ್ಕೆ
ತಿರುಗುವವರು ನಾವು,
ಯಾವನ ಪುಂಗಿಗೊ ರಾಗದ ಭಂಗಿಗೊ
ಎಳ್ಳುಕಾಳಾಗಿ ಕಲ್ಲಗಾಣಕ್ಕೆ
ದಿನವೂ ಉರುಳುವ ನೋವು.

ವಿಷದ ಬಟ್ಟಲಿಗೆ ಇಳಿದು
ಸಿಲುಬೆಯ ತುದಿಗೂ ಬೆಳೆದು
ಹುಡುಕಿ ಬಂದಿರುವೆ ನಾನು.
ಸಿಗುವಂತೆ ನಟಿಸಿ
ಬರಿಭ್ರಮೆಗೆ ಸಲಿಸಿ
ಮುಗಿಲಾಚೆಗೆಲ್ಲೊ ಮಣಿರಥವನಿಳಿಸಿ
ಮರೆಯಾಗುವೆ ನೀನು

ಆದರು ನಾನು
ನಿಲ್ಲದೆ ಬಂದೇ ಬರುವೆ
ಬಿಲ್ಲನು ಇಳಿಸದೆ ನಿಲುವೆ;
ಬೇಲಿಮರೆಗೆ ಬೆಳದಿದ್ದರು ಬಳ್ಳಿಯ ಕಣ್ಣು
ಕಡೆಗೂ ಬಿಸಿಲಿನ ಕಡೆಗೆ
ಉಳಿದುದು ಬೆನ್ನಿನ ಮರೆಗೆ
ಹೊಳೆಯುತ್ತಿದೆ ಕಣ್ಣಿನಲ್ಲಿ ಮುಗಿಲಾಚೆಯ ಹಣ್ಣು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನಿ
Next post ಡೊಂಬರ ಚೆನ್ನೆ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…