ಆಗೀಗ ಹೂಳೆದ ಚುಕ್ಕಿಗೆ

ಕರೆದೇ ಕರೆದೆ
ಗಂಟಲು ಹರಿವ ತನಕ
ಒಂದೇ ಸಮನೆ ಮೊರೆದೆ.
ತಿರುಗಿದೆಯ ನೀನು
ತಿರುಗುವುದೆ ಬಾನು
ಭೂಮಿಯ ತಾಳಕ್ಕೆ?

ಭೂಮಿಯ ತಾಳಕ್ಕೆ
ಋತುಗಳ ಗಾನಕ್ಕೆ
ತಿರುಗುವವರು ನಾವು,
ಯಾವನ ಪುಂಗಿಗೊ ರಾಗದ ಭಂಗಿಗೊ
ಎಳ್ಳುಕಾಳಾಗಿ ಕಲ್ಲಗಾಣಕ್ಕೆ
ದಿನವೂ ಉರುಳುವ ನೋವು.

ವಿಷದ ಬಟ್ಟಲಿಗೆ ಇಳಿದು
ಸಿಲುಬೆಯ ತುದಿಗೂ ಬೆಳೆದು
ಹುಡುಕಿ ಬಂದಿರುವೆ ನಾನು.
ಸಿಗುವಂತೆ ನಟಿಸಿ
ಬರಿಭ್ರಮೆಗೆ ಸಲಿಸಿ
ಮುಗಿಲಾಚೆಗೆಲ್ಲೊ ಮಣಿರಥವನಿಳಿಸಿ
ಮರೆಯಾಗುವೆ ನೀನು

ಆದರು ನಾನು
ನಿಲ್ಲದೆ ಬಂದೇ ಬರುವೆ
ಬಿಲ್ಲನು ಇಳಿಸದೆ ನಿಲುವೆ;
ಬೇಲಿಮರೆಗೆ ಬೆಳದಿದ್ದರು ಬಳ್ಳಿಯ ಕಣ್ಣು
ಕಡೆಗೂ ಬಿಸಿಲಿನ ಕಡೆಗೆ
ಉಳಿದುದು ಬೆನ್ನಿನ ಮರೆಗೆ
ಹೊಳೆಯುತ್ತಿದೆ ಕಣ್ಣಿನಲ್ಲಿ ಮುಗಿಲಾಚೆಯ ಹಣ್ಣು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನಿ
Next post ಡೊಂಬರ ಚೆನ್ನೆ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…