ಆಗೀಗ ಹೂಳೆದ ಚುಕ್ಕಿಗೆ

ಕರೆದೇ ಕರೆದೆ
ಗಂಟಲು ಹರಿವ ತನಕ
ಒಂದೇ ಸಮನೆ ಮೊರೆದೆ.
ತಿರುಗಿದೆಯ ನೀನು
ತಿರುಗುವುದೆ ಬಾನು
ಭೂಮಿಯ ತಾಳಕ್ಕೆ?

ಭೂಮಿಯ ತಾಳಕ್ಕೆ
ಋತುಗಳ ಗಾನಕ್ಕೆ
ತಿರುಗುವವರು ನಾವು,
ಯಾವನ ಪುಂಗಿಗೊ ರಾಗದ ಭಂಗಿಗೊ
ಎಳ್ಳುಕಾಳಾಗಿ ಕಲ್ಲಗಾಣಕ್ಕೆ
ದಿನವೂ ಉರುಳುವ ನೋವು.

ವಿಷದ ಬಟ್ಟಲಿಗೆ ಇಳಿದು
ಸಿಲುಬೆಯ ತುದಿಗೂ ಬೆಳೆದು
ಹುಡುಕಿ ಬಂದಿರುವೆ ನಾನು.
ಸಿಗುವಂತೆ ನಟಿಸಿ
ಬರಿಭ್ರಮೆಗೆ ಸಲಿಸಿ
ಮುಗಿಲಾಚೆಗೆಲ್ಲೊ ಮಣಿರಥವನಿಳಿಸಿ
ಮರೆಯಾಗುವೆ ನೀನು

ಆದರು ನಾನು
ನಿಲ್ಲದೆ ಬಂದೇ ಬರುವೆ
ಬಿಲ್ಲನು ಇಳಿಸದೆ ನಿಲುವೆ;
ಬೇಲಿಮರೆಗೆ ಬೆಳದಿದ್ದರು ಬಳ್ಳಿಯ ಕಣ್ಣು
ಕಡೆಗೂ ಬಿಸಿಲಿನ ಕಡೆಗೆ
ಉಳಿದುದು ಬೆನ್ನಿನ ಮರೆಗೆ
ಹೊಳೆಯುತ್ತಿದೆ ಕಣ್ಣಿನಲ್ಲಿ ಮುಗಿಲಾಚೆಯ ಹಣ್ಣು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನಿ
Next post ಡೊಂಬರ ಚೆನ್ನೆ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…