Home / ಕವನ / ಕವಿತೆ / ಕನಸು

ಕನಸು

ದಣಿದ ಮೈ. ದುಡಿಮೆ ಭಾರಕೆ ರೆಪ್ಪೆ ಮುಚ್ಚಿತೋ
ಗಂಧರ್ವಗಣದವರ ಕಾಟ. ಕೂದಲಿಗಿಂತ
ಕರಿ ತೆಳುವು ಎಳೆ ಕಚ್ಚಿ
ನಡುಬಾನಿನಲಿ ತೂಗಿ
ಗಿರಗಿರನೆ ಮೈಮಣಿಸುವಾಟ.
ಹೊಸ ಲಯ, ಒತ್ತು; ಅರು ಅರೆಂಟೆಂಬ ಗತ್ತು;
ಬರಿ ಮಸಲತ್ತು! ಅದರೂ ತಲೆ ಒಲೆವ ಮತ್ತು!
ಬುದ್ಧಿಗೆ ಬೇಡಿ,
ಹಗಲೆಲ್ಲ ಮೂಲೆಯಲಿ ಸೆರೆಯಾದ ಹುಚ್ಚ
ಅವೇಶದಲಿ ಆಡಿ.
ನೆಲದ ಮೋಲಿಂದೆತ್ತಿ ಗಾಳಿಯಲಿ ತೂರಿಬಿಟ್ಟಿದೆ
ಬದುಕ ನೊರೆಗಳ್ಳು
ಮಿದುಳ ಚಿಪ್ಪೊಳು ಕೆಟ್ಟನಾತ,
ಕೊಳೆತಿದೆ ತಿರುಳು.

ಗಂಧರ್ವಗಣದವರ ಕಾಟ.
ಮುಗಿದೆವೆ ಮೇಲೆ
ಗಾಳಿಪಾದದ ಲಯದ ಬೀಳು,
ಒಳಕಿವಿಯೊಳಗೆ
ನೂರು ಚೈತ್ರದ ಮೀಟುಸಿಳ್ಳು, ಸಿಹಿ ಪಿಸುಸೊಲ್ಲು;
ಬಣ್ಣದರಮನೆಯೊಳಗೆ ಕೋಟಿ ಚಿಣ್ಣರ ಹಿಂಡು
ಕೊಳಲಿನಲಿ ಮಾತಾಡಿ, ಮಿಂಚಿನಲಿ ಸುತ್ತಾಡಿ,
ಚುಕ್ಕಿಯಲಿ ನೋಡಿ, ಗಲಿಬಿಲಿ ಗಲಭೆ ಬರಿ ಮೋಡಿ.

ಬಣ್ಣ ಬಣ್ಣದ ಬಳೆಯಚೂರ ಕೊಳವೆಯ ತಳಕೆ
ಹಚ್ಚಿ ಮಾಡಿದ ಮೋಜು;
ಟೊಳ್ಳು ಕಡ್ಡಿಯ ತುದಿಯ ಸೋಪುನೀರಿನಲಿಟ್ಟು
ಉಸಿರು ಹರಿಸಿದ ಜಾದು;
ತುದಿ ಮೊದಲು ಕಡಿದ ಸುಖದಾಳದಲಿ ಇನ್ನೇನು
ಕರ್ಪೂರಸುಂದರಿಯ ಮಲ್ಲಿಗೆ ತುಟಿಯ ತಾಗು,
ಅಷ್ಟರಲೆ-
ಇದ್ದಕ್ಕಿದ್ದಂತೆ ಹಾಲಿನ ಮುದುಕಿ ಕೂಗು.
ಅಯ್ಯೊ!
ಎಲ್ಲ ಸಿಡಿದು, ರೆಪ್ಪೆ ತೆರೆದು
ಒದ್ದ ಪ್ರಪಂಚವನ್ನೆ ತಬ್ಬು ಹೋಗು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...