Home / ಕವನ / ಕವಿತೆ / ಕನಸು

ಕನಸು

ದಣಿದ ಮೈ. ದುಡಿಮೆ ಭಾರಕೆ ರೆಪ್ಪೆ ಮುಚ್ಚಿತೋ
ಗಂಧರ್ವಗಣದವರ ಕಾಟ. ಕೂದಲಿಗಿಂತ
ಕರಿ ತೆಳುವು ಎಳೆ ಕಚ್ಚಿ
ನಡುಬಾನಿನಲಿ ತೂಗಿ
ಗಿರಗಿರನೆ ಮೈಮಣಿಸುವಾಟ.
ಹೊಸ ಲಯ, ಒತ್ತು; ಅರು ಅರೆಂಟೆಂಬ ಗತ್ತು;
ಬರಿ ಮಸಲತ್ತು! ಅದರೂ ತಲೆ ಒಲೆವ ಮತ್ತು!
ಬುದ್ಧಿಗೆ ಬೇಡಿ,
ಹಗಲೆಲ್ಲ ಮೂಲೆಯಲಿ ಸೆರೆಯಾದ ಹುಚ್ಚ
ಅವೇಶದಲಿ ಆಡಿ.
ನೆಲದ ಮೋಲಿಂದೆತ್ತಿ ಗಾಳಿಯಲಿ ತೂರಿಬಿಟ್ಟಿದೆ
ಬದುಕ ನೊರೆಗಳ್ಳು
ಮಿದುಳ ಚಿಪ್ಪೊಳು ಕೆಟ್ಟನಾತ,
ಕೊಳೆತಿದೆ ತಿರುಳು.

ಗಂಧರ್ವಗಣದವರ ಕಾಟ.
ಮುಗಿದೆವೆ ಮೇಲೆ
ಗಾಳಿಪಾದದ ಲಯದ ಬೀಳು,
ಒಳಕಿವಿಯೊಳಗೆ
ನೂರು ಚೈತ್ರದ ಮೀಟುಸಿಳ್ಳು, ಸಿಹಿ ಪಿಸುಸೊಲ್ಲು;
ಬಣ್ಣದರಮನೆಯೊಳಗೆ ಕೋಟಿ ಚಿಣ್ಣರ ಹಿಂಡು
ಕೊಳಲಿನಲಿ ಮಾತಾಡಿ, ಮಿಂಚಿನಲಿ ಸುತ್ತಾಡಿ,
ಚುಕ್ಕಿಯಲಿ ನೋಡಿ, ಗಲಿಬಿಲಿ ಗಲಭೆ ಬರಿ ಮೋಡಿ.

ಬಣ್ಣ ಬಣ್ಣದ ಬಳೆಯಚೂರ ಕೊಳವೆಯ ತಳಕೆ
ಹಚ್ಚಿ ಮಾಡಿದ ಮೋಜು;
ಟೊಳ್ಳು ಕಡ್ಡಿಯ ತುದಿಯ ಸೋಪುನೀರಿನಲಿಟ್ಟು
ಉಸಿರು ಹರಿಸಿದ ಜಾದು;
ತುದಿ ಮೊದಲು ಕಡಿದ ಸುಖದಾಳದಲಿ ಇನ್ನೇನು
ಕರ್ಪೂರಸುಂದರಿಯ ಮಲ್ಲಿಗೆ ತುಟಿಯ ತಾಗು,
ಅಷ್ಟರಲೆ-
ಇದ್ದಕ್ಕಿದ್ದಂತೆ ಹಾಲಿನ ಮುದುಕಿ ಕೂಗು.
ಅಯ್ಯೊ!
ಎಲ್ಲ ಸಿಡಿದು, ರೆಪ್ಪೆ ತೆರೆದು
ಒದ್ದ ಪ್ರಪಂಚವನ್ನೆ ತಬ್ಬು ಹೋಗು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...