ಎಚ್ಚರಿಕೆ

ಕೋವಿ ಎತ್ತಿದ್ದೇನು, ಗುರಿಯ ಹೂಡಿದ್ದೇನು
ಕಡೆಗೆ ಹೊಡೆದದ್ದೂ ಹೂವಲ್ಲಿ! ಈ ನೀರಲ್ಲಿ
ಬಿದ್ದ ತುಂಡುಗಳೆಲ್ಲ ಸಾಗಿ, ಬೆಳೆದದ್ದೆಲ್ಲ
ಬಾಗಿ ಹರಿಯುತ್ತಲಿದೆ ಹೀಗೆಯೇ ಹೊರವಾಗಿ.
ಒಂದು ಕ್ಷಣ ಹಿಂದೆ ಏನೆಲ್ಲ ಆಡಿದಿರಪ್ಪ!
ಅಂದ ಮಾತಿಗೆ ಈಗ ತಾವೆ ನಗುವುದು ಬೇರೆ.
ಇಷ್ಟು ದಿನ ಹಾಲು ತುಪ್ಪವ ಬೆರೆಸಿ ಈಗೇಕೆ
ಉಪ್ಪುನೀರಿನ ಮಾತು? “ತಪ್ಪು ಬಿಟ್ಟಿತು” ಎನ್ನಿ!
ನಿಮ್ಮ ಜೊತೆ ಬಂದು ನಿಮ್ಮದೆ ರೂಪಿನಚ್ಚೊಂದ
ಕೈಗಿತ್ತು ಈಗ ಹೀಗಾಡಿದರೆ ಇಗೊ ಹೊರಟೆ.
ಹ್ಞಾ! ನಿಲ್ಲಿ ಅಲ್ಲೆ, ಸರಿಯಿರಿ ದೂರ, ಸೆರಗ ಬಿಡಿ,
ನೋಡುತ್ತಿದ್ದಾನೆ ನಿಮ್ಮಾಟಗಳ ನಿಮ್ಮ ಮಗ!
ವರುಷ ದಾಟಿದ ಹುಡುಗ ತಿಳಿಯದಿರುವುದೆ ಅದಕೆ,
ನೀವಾಡಿದರೆ ಹೀಗೆ ಏನಾಡುವುದೊ ಹೊರಗೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆನ್ನು
Next post ನಾವು ಕಮಲದ ಹೂಗಳು

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

cheap jordans|wholesale air max|wholesale jordans|wholesale jewelry|wholesale jerseys