ಕಂದ ಕೃಷ್ಣ

ತೇಲಿದ ಮೋಡಗಳ ನೀಲಿ
ಶಬ್ಧಗಳ ಗುಂಗುಗಳ ಹಿಡಿದು
ಹರಡಿ ಹಾಸಿದ ನೀಲಿ ಕಡಲ ಬಣ್ಣ
ಕಂಪು ಸೂಸಿ ಎಲ್ಲಾ ಹೂಗಳ ತುಂಟ
ಕಣ್ಣುಗಳ ನೋಟದಲಿ ಅರಳಿ ತೇಲಿ
ಕಂದನವನು ಅಲ್ಲಿ ಇಲ್ಲಿ ಸುಳಿದಾಡಿ
ತುಂಬು ಕಂಪನಿಲಿ ಇಂಪಿನಲಿ ಲಾಲಿರಾಗ
ಬೆನ್ನು ಬಿಡದೆ ಬೆಂಬತ್ತಿ ಬಂದಾಗ
ಎದೆಯ ತುಂಬೆಲ್ಲಾ ಅರಬೀ ಸಮುದ್ರ ಉಕ್ಕಿ ಉಕ್ಕಿ
ನಾನೀಗ ಯಶೋಧೆ.
“ವಜ್ರ ವೈಢೂರ್ಯ ಬೇಡ ನನಗೆ
ತುಪ್ಪದ ಅಪ್ಪ ಸೇರದೆ ನಗೆ
ಎತ್ತಿ ದಾರತಿ ತುಂಬಾ ಬೆಳಕು ಕಳವಳದ
ಸಂಜೆ ರಾತ್ರಿಗಳು ನಿಟ್ಟಿಸಿದ ಕಣ್ಣುಗಳ ಸಾವಿರಾರು
ಹೈರಾಣ ಮಾಡಿದೆ ಕುದಿದ ಸೆಖೆ
ಬಯಲ ತಪ್ಪಲಲ್ಲಿ ನನ್ನ ಕೊಳಲಿನ ಕರೆಗೆ
ನರ್ತಿಸಲಿ ನವಿಲು ಅಲ್ಲಿ ಆಡಲಿ, ಕುಚೇಲ
ಚನ್ನಿದಾಂಡು, ಮತ್ತೆ ಗಿಲಿ ಗಿಲಿ ಗೆಜ್ಜೆಯನಾದ
ಗೋಪಿಕೆಯರು ಜೊತೆಗೂಡಲು ಋಷಿಯಲಿ,
ಅಮ್ಮ ಎತ್ತಿಕೊಳ್ಳು ಈಗಲೇ ಈಗಿಂದೀಗಲೇ.”
ಅವನೀಗ ಯಶೋಧೆ ಕಂದ.

ಎಲ್ಲ ರಾಗಗಳು ನದಿಯಾಗಿ ಹರಿದು
ಬಯಲು ತುಂಬ ಹಸಿರು ತಂಬೆಲರು
ಬೆಳ್ಳಗೆ ಬೆಳ್ಳಿಗೆರೆಯಲಿ. ತೇಲಿದ ಬೆಳ್ಳಕ್ಕಿ ಹಿಂಡು
ನೀಲ ಬಾನ ತುಂಬ ತುಂಟರು ಹಾಸಿದ ಬಣ್ಣದ
ಗಾಳಿ ಪಟಗಳು ಅರಳಿದ ಕಣ್ಣುಗಳಲಿ
ಜಗದ ವಿಸ್ಮಯ ಬಯಲು ಸೀಮೆಯ
ಹೊಲಗಳ ಬದುಕಿನ ತುಂಬ ಇವನ
ರಾಗ ಪಲ್ಲಕ್ಕಿ ಹಕ್ಕಿ ಸಾಲು ತೇಲಿ ಜಂಗಮದಲಿ
ಮುರಳಿ ಲೋಲನ ಕಂಪನಗಳ ರಾಗಗಳು
ದೇವಕಿ ನಂದನೀಗ ಯಶೋಧೆ ಕಂದ.

ಫರ್ಮಾನುಗಳ ಹೊರಡಿಸಿವೆ ಅಷ್ಟ ಮಠಗಳು
ಅಷ್ಟದಿಕ್ಕುಗಳಿಗೆ ಎಲ್ಲ ಇಹ ಪರದ ಗೌಜು
ಗದ್ದಲಗಳ ಮಧ್ಯೆ ಬಯಲಲ್ಲಿ ಅವನೀಗ
ಸುಮ್ಮನೆ ಮಣ್ಣಿನಲಿ ಆಡಿ ಮೈಕೈಯಲ್ಲಾ
ಧೂಳು ಕೆಸರು ಬೆತ್ತಲೆ ಬಯಲಲ್ಲಿ
ನಿಲ್ಲಿಸಿ ತಣ್ಣನೆಯ ಗಾಳಿ ಹೊತ್ತ ಪಂಚನದಿಗಳ
ನೀರು ಹೊಯ್ಯುತ್ತಿರುವ ಯಶೋಧೆ.
ಅವನೀಗ ಮರೆತು ಬಿಟ್ಟಿದ್ದಾನೆ. ಉಕ್ಕುವ ಸಮುದ್ರ
ಬಣ್ಣದ ಬೋರಂಗಿ ಹಿಡಿದು ಹಾರಿಸುತ್ತಿದ್ದಾನೆ. ಸುಮ್ಮನೆ. ಝಮ್ಮನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಕಾಶದಲ್ಲೊಂದು ವಾಯುಮಾಪನ ಕಾರ್ಯಾಲಯ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೭೬

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ತಾಯಿ-ಬಂಜೆ

    "ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…