Home / ಕವನ / ಕವಿತೆ / ಕಂದ ಕೃಷ್ಣ

ಕಂದ ಕೃಷ್ಣ

ತೇಲಿದ ಮೋಡಗಳ ನೀಲಿ
ಶಬ್ಧಗಳ ಗುಂಗುಗಳ ಹಿಡಿದು
ಹರಡಿ ಹಾಸಿದ ನೀಲಿ ಕಡಲ ಬಣ್ಣ
ಕಂಪು ಸೂಸಿ ಎಲ್ಲಾ ಹೂಗಳ ತುಂಟ
ಕಣ್ಣುಗಳ ನೋಟದಲಿ ಅರಳಿ ತೇಲಿ
ಕಂದನವನು ಅಲ್ಲಿ ಇಲ್ಲಿ ಸುಳಿದಾಡಿ
ತುಂಬು ಕಂಪನಿಲಿ ಇಂಪಿನಲಿ ಲಾಲಿರಾಗ
ಬೆನ್ನು ಬಿಡದೆ ಬೆಂಬತ್ತಿ ಬಂದಾಗ
ಎದೆಯ ತುಂಬೆಲ್ಲಾ ಅರಬೀ ಸಮುದ್ರ ಉಕ್ಕಿ ಉಕ್ಕಿ
ನಾನೀಗ ಯಶೋಧೆ.
“ವಜ್ರ ವೈಢೂರ್ಯ ಬೇಡ ನನಗೆ
ತುಪ್ಪದ ಅಪ್ಪ ಸೇರದೆ ನಗೆ
ಎತ್ತಿ ದಾರತಿ ತುಂಬಾ ಬೆಳಕು ಕಳವಳದ
ಸಂಜೆ ರಾತ್ರಿಗಳು ನಿಟ್ಟಿಸಿದ ಕಣ್ಣುಗಳ ಸಾವಿರಾರು
ಹೈರಾಣ ಮಾಡಿದೆ ಕುದಿದ ಸೆಖೆ
ಬಯಲ ತಪ್ಪಲಲ್ಲಿ ನನ್ನ ಕೊಳಲಿನ ಕರೆಗೆ
ನರ್ತಿಸಲಿ ನವಿಲು ಅಲ್ಲಿ ಆಡಲಿ, ಕುಚೇಲ
ಚನ್ನಿದಾಂಡು, ಮತ್ತೆ ಗಿಲಿ ಗಿಲಿ ಗೆಜ್ಜೆಯನಾದ
ಗೋಪಿಕೆಯರು ಜೊತೆಗೂಡಲು ಋಷಿಯಲಿ,
ಅಮ್ಮ ಎತ್ತಿಕೊಳ್ಳು ಈಗಲೇ ಈಗಿಂದೀಗಲೇ.”
ಅವನೀಗ ಯಶೋಧೆ ಕಂದ.

ಎಲ್ಲ ರಾಗಗಳು ನದಿಯಾಗಿ ಹರಿದು
ಬಯಲು ತುಂಬ ಹಸಿರು ತಂಬೆಲರು
ಬೆಳ್ಳಗೆ ಬೆಳ್ಳಿಗೆರೆಯಲಿ. ತೇಲಿದ ಬೆಳ್ಳಕ್ಕಿ ಹಿಂಡು
ನೀಲ ಬಾನ ತುಂಬ ತುಂಟರು ಹಾಸಿದ ಬಣ್ಣದ
ಗಾಳಿ ಪಟಗಳು ಅರಳಿದ ಕಣ್ಣುಗಳಲಿ
ಜಗದ ವಿಸ್ಮಯ ಬಯಲು ಸೀಮೆಯ
ಹೊಲಗಳ ಬದುಕಿನ ತುಂಬ ಇವನ
ರಾಗ ಪಲ್ಲಕ್ಕಿ ಹಕ್ಕಿ ಸಾಲು ತೇಲಿ ಜಂಗಮದಲಿ
ಮುರಳಿ ಲೋಲನ ಕಂಪನಗಳ ರಾಗಗಳು
ದೇವಕಿ ನಂದನೀಗ ಯಶೋಧೆ ಕಂದ.

ಫರ್ಮಾನುಗಳ ಹೊರಡಿಸಿವೆ ಅಷ್ಟ ಮಠಗಳು
ಅಷ್ಟದಿಕ್ಕುಗಳಿಗೆ ಎಲ್ಲ ಇಹ ಪರದ ಗೌಜು
ಗದ್ದಲಗಳ ಮಧ್ಯೆ ಬಯಲಲ್ಲಿ ಅವನೀಗ
ಸುಮ್ಮನೆ ಮಣ್ಣಿನಲಿ ಆಡಿ ಮೈಕೈಯಲ್ಲಾ
ಧೂಳು ಕೆಸರು ಬೆತ್ತಲೆ ಬಯಲಲ್ಲಿ
ನಿಲ್ಲಿಸಿ ತಣ್ಣನೆಯ ಗಾಳಿ ಹೊತ್ತ ಪಂಚನದಿಗಳ
ನೀರು ಹೊಯ್ಯುತ್ತಿರುವ ಯಶೋಧೆ.
ಅವನೀಗ ಮರೆತು ಬಿಟ್ಟಿದ್ದಾನೆ. ಉಕ್ಕುವ ಸಮುದ್ರ
ಬಣ್ಣದ ಬೋರಂಗಿ ಹಿಡಿದು ಹಾರಿಸುತ್ತಿದ್ದಾನೆ. ಸುಮ್ಮನೆ. ಝಮ್ಮನೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...