Home / ಲೇಖನ / ವಿಜ್ಞಾನ / ಆಕಾಶದಲ್ಲೊಂದು ವಾಯುಮಾಪನ ಕಾರ್ಯಾಲಯ

ಆಕಾಶದಲ್ಲೊಂದು ವಾಯುಮಾಪನ ಕಾರ್ಯಾಲಯ

ಕರ್ಕ ಮತ್ತು ಮಕರ ಅಕ್ಷಾಂಶಗಳ ನಡುವಿನ ವಲಯದಲ್ಲಿ ಹವಾಮಾನ ಅಧ್ಯಯನ ಹಾಗೂ ಜಗತ್ತಿನಾದ್ಯಂತವಾಗುವ ಹವಾಮಾನ ವೈಪರಿತ್ಯಗಳನ್ನು ಅಳೆಯಲು ಮೊದಲ ಬಾರಿಗೆ ಭಾರತ ಮತ್ತು ಫ್ರಾನ್ಸ್ ಜತೆಗೂಡಿ ಹವಾಮಾನ ಮಾಪನ ಉಪಗ್ರಹವನ್ನು ಆಕಾಶಕ್ಕೆ ಬಿಡಲು ಮುಂದೆ ಬಂದಿದೆ. ಭೂಮಿಯಿಂದ ೮೬೭ ಕಿ.ಮೀ. ಎತ್ತರದಲ್ಲಿ ಭೂಮಧ್ಯ ರೇಖೆಯ ಗುಂಟ ಸುತ್ತುಹಾಕಲಿರುವ ಈ ಉಪಗ್ರಹವು ಒಂದು ದಿನದಲ್ಲಿ ತನಗೆ ಸೂಚಿಸಲಾದ ಪ್ರದೇಶವನ್ನು ಎರಡರಿಂದ ಆರು ಭಾರಿಯವರೆಗೂ ಸೂಕ್ಷ್ಮವಾಗಿ ಗಮನಿಸಲಿದೆ.

ಈ ಉಪಗ್ರಹಕ್ಕೆ ‘ಮೇಘಾ ಟ್ರೋಫಿಕಸ್’ ಎಂದು ಸೂಕ್ತವಾಗಿ ಹೆಸರಿಡಲಾಗಿದೆ. ಉಷ್ಣವಲಯದಲ್ಲಿಯ ವಾತಾವರಣದಲ್ಲಿ ಸಂಶೋಧನೆಗಾಗಿ ಮಾಹಿತಿ ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಲಾದ ಈ ಕೃತಕ ಉಪಗ್ರಹವು ವಿಶ್ವದಲ್ಲಿಯೇ ಮೊದಲನೇಯದ್ದಾಗಿದೆ. ಭಾರತದ ಐ. ಎಸ್. ಎಲ್.ವಿ. ಯ ಮುಖಾಂತರ ೨೦೦೫ ರೊಳಗಾಗಿ ಈ ಉಪಗ್ರಹಗಳನ್ನು ಹಾರಿಬಿಡಲಾಗುವುದು. ಇದರ ಅಂದಾಜು ವೆಚ್ಚ ೩೦ ರಿಂದ ೪೦ ಕೋಟಿ, ಈ ಯೋಜನೆಯಲ್ಲಿ ಹವಾಮಾನ ಜಾಗತಿಯ ಮಟ್ಟದ ಅಧ್ಯಯನ ನಡೆಸುವಂಥಹ ಅಂತರರಾಷ್ಟ್ರೀಯ ವಿಜ್ಞಾನಿಗಳು ಆಸಕ್ತಿ ಮತ್ತು ಕುತೂಹಲವನ್ನು ವ್ಯಕ್ತಿಪಡಿಸಿದ್ದಾರೆ. ಇಲ್ಲಿನ ಇಸ್ರೋ ಉಪಗ್ರಹ ಕೇಂದ್ರದಲ್ಲಿ ೫೦೦ ಕೆ.ಜಿ. ತೂಕದ ಈ ಉಪಗ್ರಹವನ್ನು ಇಸ್ರೋ ಮತ್ತು ಫ್ರಾನ್ಸ್ ಸಂಸ್ಥೆ ಪರಸ್ಪರ ‌ಸಹಕರಿಸಿ ರಚಿಸಲಿದೆ. ಇದರ ಕಾರ್ಯಯೋಜನೆಯಲ್ಲಿ Indian Institute of Science ಮತ್ತು I.I.T.ಗಳು ದೇಶದಾದ್ಯಂತ ಹಾಗೂ ಹಲವಾರು ಶೈಕ್ಷಣಿಕ ಸಂಸ್ಥೆಗಳೂ ಪಾಲ್ಗೊಳ್ಳಲಿವೆ.

ಪಶ್ಚಿಮಘಟ್ಟದ ಹವಾಮಾನದ ಏರುಪೇರುಗಳ ವೈಪರಿತ್ಯದಲ್ಲಿ ಮತ್ತು ಉತ್ತರ ಗೋಲಾರ್ಧದಲ್ಲಿ ಆಗುವ ಬದಲಾವಣೆಗಳಲ್ಲಿ ಉಷ್ಣವಲಯದ ಪಾತ್ರವನ್ನು ಗುರುತಿಸಬೇಕೆಂಬ ಹೊಸ ಚಿಂತನೆಯ ಫಲವಾಗಿ ಈ ಉಪಗ್ರಹವು ರಚಿತವಾಗಿದೆ. ಉಷ್ಣವಲಯದ ಹವೆಯಲ್ಲಾಗುವ ಬದಲಾವಣೆಗಳಿಂದಾಗಿ ಜಗತ್ತಿನ ವಿವಿಧ ಭಾಗಗಳಲ್ಲಿ ಚಂಡಮಾರುತದ ಬೀಸುವಿಕೆ ಅಥವಾ ಕ್ಷಾಮ ಉಂಟಾಗುವಿಕೆಗಳು ಮತ್ತು ಇತ್ಯಾದಿ ಹವಾಮಾನದ ಮಹತ್ವಪೂರ್ಣ ಮಾಹಿತಿಗಳು ಇದರಿಂದ ಸಾಧ್ಯವಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಉಷ್ಣವಲಯ ಕುರಿತು ಹೆಚ್ಚಿನ ಆಸಕ್ತಿ ಈಗ ಯುರೋಪ್ ಮತ್ತು ಅಮೇರಿಕದಲ್ಲಿ ಬೆಳೆಯುತ್ತಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...