ಹಿತ್ತಲಲ್ಲಿ ಅಮ್ಮ

ಬೀಜ ಬಿತ್ತಿದ ಅಮ್ಮನ ಹಿತ್ತಲಲಿ
ಹಕ್ಕಿ ಪಕ್ಷಿಗಳ ಇನಿದನಿ ಚಿಮ್ಮಿ
ಅರಳಿ ಘಮ್ಮೆಂದು ಸೂಸಿ ನೆಲತುಂಬ
ಹರಡಿ ಹಾಸಿದ ಪಾರಿಜಾತ ಹೂರಾಶಿ.

ಅಲ್ಲೇ ಬಟ್ಟೆ ಒಗೆಯುವ ಕಲ್ಲಮೇಲೆ
ಮೂಡಿವೆ ಅವಳ ಕೈ ಬೆರಳ ಬಳೆಗಳ
ಚಿಕ್ಕೀ ನಾದ ರೇಖೆಗಳು ಚಿತ್ತ ಪಟ
ಪಾತರಗಿತ್ತಿಗಳ ಹಾರಾಟ ಎದೆಯೊಳಕೆ ಇಳಿದ ರಸಕಾವ್ಯ.

ಇಲ್ಲಿಯೇ ಇದ್ದ ತುಳಸಿ ಕಟ್ಟೆಯ
ಬಳಿ ಉರಿದ ನಂದಾದೀಪ ಅವಳ
ಕಣ್ಣಕಾಂತಿ ಚಿಗುರಿ ಹರಡಿದ ಬೆಳದಿಂಗಳು
ಮನದ ಮರದ ತುಂಬೆಲ್ಲ ಟೊಂಗೆ
ಟೊಂಗೆಗೆ ಮಿಂಚು ಹುಳುಗಳ ಮಿಣಿಮಿಣಿ ಭಾವ.

ಈ ಬಾವಿಕಟ್ಟೆಯ ತುಂಬಾ
ಅವಳ ಅನಂತ ಆಕಾಶ ಥಳಥಳ
ಹೊಳೆದ ಸೂರ್ಯ ಪ್ರೀತಿ ಮೊಗೆದು
ಹಬ್ಬಿ ಹದವಾಗಿ ಮುದವಾಗಿ ಅರಳಿದ
ಸಂಪಿಗೆ ಸೂಸಿತು ಸೀರೆಯ ಸರಭರ ಸಖೀ ಗೀತೆ.

ಹಿಮಗಿರಿಯ ಗಂಗೆ ಹರಿದ ಸೋಪಾನ
ಬಯಲು ಬೆಟ್ಟ ನದಿ ಕಾಡ ತುಂಬ
ಅರಿವು ಭಕ್ತಿ ಪ್ರೀತಿಗೆ ಒಲಿದ ಅವಳ
ಪ್ರೇಮ ಕಾವ್ಯ ಸಾಕಾರ ಹನಿ ಹನಿ
ಉಣಿಸಿದ ಬದುಕು ತಂಪು ಹೊಸ ಕಾವ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿಕ್ಷಣದ ಭಾಷೆ ಯಾವುದಿರಬೇಕು?
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೬೯

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…