ರಾತ್ರಿಯಲ್ಲಿ ಹಗಲಿನ ಪಾಳಿ

ಉರಿವ ಕೊಳ್ಳಿಯ ಭಾರಕ್ಕೆ ಸ್ನಾಯುಗಳು
ಸಡಿಲವಾಗಿಲ್ಲ. ದೀಪದ ಮಾದಕ ಮತ್ತು
ಆಫೀಮು ತುಂಬಿದ ಸೀಸೆ

ಅಮೃತ ಶಿಲೆಯ ಕಣ್ಣುಗಳಲ್ಲೂ
ಕಡುಕಪ್ಪು ಗೋಲ
ನಿದ್ದೆ ಭರಿಸದ ಯಾವುದೋ ಮಾಯೆ.

ರಾತ್ರಿ ಜಾಗರಣೆ ತೇಪೆ ಹಾಕಿದ ಸೀರೆಯ
ಅರೆ ತೆರೆದ ಎದೆಯ ಆಕೆಯದಷ್ಟೇ
ಅಲ್ಲ. ಮೂರಂತಸ್ತಿನ ಮಹಡಿಯ ಕೊನೆ
ಕೋಣೆ ನೀಲಿ ಆಕಾಶಕ್ಕೆ ಕೈ ಚಾಚಿದೆ.

ಉರಿದುರಿದು ಬತ್ತಿ ಕರಟಿ
ಒಳಸರಿದರೂ
ತೈಲದ ಋಣ ಹರಿದರೂ
ಹಣತೆ ಮತ್ತು ಜ್ವಾಲೆ ಸದಾ
ಕಾಯುವ ಭ್ರಮರಿಯರು
ಮಾಯಾ ಕನ್ನಡಿಯ ಒಳಬಿಂಬದಲ್ಲಿ
ಅದ್ಯಾವ ರಂಗೋಲಿ ಮೇಳೈಸಿದ
ಬಣ್ಣ ಬಣ್ಣದ ಚಿತ್ತಾರಗಳು.

ಈಗೇನೂ ಬೇಡ ತಂಗದಿರ್‍ನ
ತಂಪು ಕರುಣೆಯ ಹಾಲು.
ದಿನಪನ ಉರಿಯ ಉಂಡುಂಡು
ಚರ್ಮ ರೋಗಗಳೆಲ್ಲ ವಾಸಿ.
ಮತ್ತಿನ್ನೇನು? ಅಗೋ! ನೋಡು,
ಸಾಗರನ ಮೇಲೂ ಇಡುವ ಹೆಜ್ಜೆ
ಗುರುತು ನೆಡುವ ಆಶೆ.

ತೆಕ್ಕೆಯೊಳಗಿಳಿದ ಪದಗಳ
ಉಸಿರೊಳಗೆ ಬಚ್ಚಿಟ್ಟುಕೊಂಡೇ
ಕಾಯ್ದುಕೊಂಡೇ
ಹಾಡು ಹೆಣೆಯುವುದೆಂದರೆ
ರಾತ್ರಿಯಲ್ಲೂ ಹಗಲಿನ ಪಾಳಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಹಿತ್ಯದಿಂದ ಯಾರೇನು ಬಯಸುತ್ತಾರೆ?
Next post ತಸ್ಲೀಮಾ ಪ್ರಕರಣ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

cheap jordans|wholesale air max|wholesale jordans|wholesale jewelry|wholesale jerseys